ಕಾರ್ಕಳ : ಹೋಟೆಲ್ ಗೂ ಸೀಲ್ ಹಾಕಿದ ಅಬಕಾರಿ ಅಧಿಕಾರಿಗಳು
Team Udayavani, Apr 25, 2020, 2:17 PM IST
ಕಾರ್ಕಳ: ನಗರದ ಬಂಡಿಮಠ ಬಳಿ ವೈನ್ ಶಾಪ್ ಪಕ್ಕದಲ್ಲಿರುವ ಸಸ್ಯಾಹಾರಿ ಕ್ಯಾಂಟೀನ್ ಶಟರ್ ಬೀಗಕ್ಕೆ ಅಬಕಾರಿ ಅಧಿಕಾರಿಗಳು ಸೀಲ್ ಹಾಕಿದ ಘಟನೆ ನಡೆದಿದ್ದು, ಇದೀಗ ನಗೆಪಾಟಲಿಗೀಡಾಗಿದೆ. ಮಾ. 23ರಂದು ಲಾಕ್ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ಮಾ. 24ರಂದು ಬೆಳಗ್ಗೆ ಬಾರ್, ವೈನ್ಶಾಪ್ ಬೀಗಕ್ಕೆ ಸೀಲ್ ಹಾಕಲಾಗಿದ್ದು, ಅಂತೆಯೇ ಬಂಡಿಮಠದ ಕೌಶಿಕ್ನಲ್ಲಿ ಕಾರ್ಯಾಚರಿಸುತ್ತಿರುವ ಮೋಹನ್ ವೈನ್ ಶಾಪ್ಗ್ೂ ಸೀಲ್ ಹಾಕಲಾಗಿತ್ತು. ಇದರ ಪಕ್ಕದಲ್ಲಿರುವ ಹೆಬ್ಬಾರ್ ಹೊಟೇಲ್ ಗೂ ಸೀಲ್ ಹಾಕಿ ಎಡವಟ್ಟು ಮಾಡಿಕೊಂಡಿರುವ ಅಬಕಾರಿ ಇಲಾಖಾ ಅಧಿಕಾರಿಗಳ ಕ್ರಮ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಬಕಾರಿ ಇಲಾಖೆಗೊಳಪಡುವ ವೈನ್ಶಾಪ್, ಬಾರ್ಗಳ ಕುರಿತು ಕನಿಷ್ಠ ಜ್ಞಾನ ಇಲಾಖಾ ಸಿಬ್ಬಂದಿಗಿಲ್ಲವೇ ಎಂದು ಜನ ಆಡಿಕೊಳ್ಳುವಂತಾಗಿದೆ.