ದುಬಾರಿ ವಸ್ತುಗಳು


Team Udayavani, Jun 29, 2020, 5:17 AM IST

ubaari

ವಾಶಿಂಗ್‌ ಮಶೀನ್‌ನಲ್ಲಿ ಇಂಟರ್ನೆಟ್‌: ರೆಫ್ರಿಜರೇಟರ್‌ ಕೊಳ್ಳುವಾಗ ಅಂಗಡಿ ಮಳಿಗೆಗಳಲ್ಲಿ ಡಬಲ್‌ ಡೋರಿನದ್ದನ್ನು ನೋಡಿರುತ್ತೀರಿ. ಒಂದು ಬಾಗಿಲು ಇನ್ನೊಂದಕ್ಕಿಂತ ಚಿಕ್ಕದಿರುತ್ತದೆ. ಸಾಮಾನ್ಯವಾಗಿ ಕೆಳಗಿನ ಬಾಗಿಲು  ದೊಡ್ಡಕ್ಕಿದ್ದು, ಮೇಲಿನದು ಚಿಕ್ಕದಾಗಿರುತ್ತದೆ. ವಾಶಿಂಗ್‌ ಮಶೀನಿನಲ್ಲೂ ಇದೇ ರೀತಿಯಾಗಿ ಡಬಲ್‌ ಡೋರ್‌ ಮತ್ತು ಡಬಲ್‌ ಡ್ರಮ್ಮಿನ ಮಾದರಿ ಗಮನ ಸೆಳೆಯುತ್ತಿದೆ. ಹಯರ್‌ ಸಂಸ್ಥೆಯ ಡುಯೋ ವಾಶಿಂಗ್‌ ಮಶೀನ್‌ ಈ ಸಾಲಿಗೆ  ಸೇರುತ್ತದೆ. ಇದರಲ್ಲಿ ಒಟ್ಟು 20 ಕಂಪ್ಯೂಟರ್‌ ಪ್ರೋಗ್ರಾಮುಗಳನ್ನು ಅಳವಡಿಸಲಾಗಿದೆ. ಮಕ್ಕಳ ಬಟ್ಟೆಗಳನ್ನು ಒಗೆಯಲೆಂದೇ ಪ್ರತ್ಯೇಕ ಕಂಪ್ಯೂಟರ್‌ ಪ್ರೋಗ್ರಾಂ ಇದೆ. ಆ ಆಯ್ಕೆಯನ್ನು ಕ್ಲಿಕ್‌ ಮಾಡಿ ಆನ್‌ ಮಾಡಿದರೆ ಸಾಕು.

ಅದೇ ರೀತಿ  ವಿವಿಧ ಬಗೆಯ ಬಟ್ಟೆಗಳ ಅನುಸಾರವಾಗಿ ಬಳಕೆದಾರರು ಆಯ್ಕೆಯನ್ನು ಆರಿಸಿಕೊಳ್ಳಬಹುದು. ಕೆಳಗಿನ ಡ್ರಮ್‌ನ ಸಾಮರ್ಥ್ಯ 8 ಕೆ.ಜಿ., ಮೇಲಿನ ಡ್ರಮ್‌ನ ಸಾಮರ್ಥ್ಯ 4 ಕೆ.ಜಿ. ಹೀಗೆ ಒಟ್ಟು 12 ಕೆ. ಜಿ ಬಟ್ಟೆಗಳನ್ನು ಏಕಕಾಲಕ್ಕೆ ಇದರಲ್ಲಿ  ವಾಶ್‌ ಮಾಡಬಹುದಾಗಿದೆ. ಇದರ ದುಬಾರಿ ಬೆಲೆಯನ್ನು ಸಮರ್ಥಿಸಿಕೊಳ್ಳಲು ಇನ್ನೂ ಒಂದು ವಿಶೇಷ ತಂತ್ರಜ್ಞಾನವಿದೆ. ಅದೆಂದರೆ ವೈಫೈ ಕನೆಕ್ಟಿವಿಟಿ. ಈ ವಾಶಿಂಗ್‌ ಮಶೀನನ್ನು ಇಂಟರ್‌ನೆಟ್‌ಗೆ ಸಂಪರ್ಕ ಕಲ್ಪಿಸಬಹುದಾಗಿದೆ.  ಬಳಕೆದಾರರು ತಮ್ಮ ಸ್ಮಾರ್ಟ್‌ಫೋನಿ ನಲ್ಲಿ ಸ್ಮಾರ್ಟ್‌ವಾಶ್‌ ಆ್ಯಪ್‌ ಅನ್ನು ಇನ್‌ಸ್ಟಾಲ್‌ ಮಾಡಿ ಕೊಂಡು, ವಾಶಿಂಗ್‌ ಮಶೀನನ್ನು ನಿಯಂತ್ರಿಸಬಹುದಾಗಿದೆ. ಲೈಫ್ ಟೈಮ್‌ ವಾರಂಟಿ, ಕಡಿಮೆ ವಿದ್ಯುತ್‌ ಬಳಕೆ ಮುಂತಾದ ಹಲವು  ಸವಲತ್ತುಗಳು ಇದರಲ್ಲಿವೆ.

ಬೆಲೆ: 2 ಲಕ್ಷ ರೂ.

**

ಶತಮಾನಗಳ ಕಾಲ ಓಡುವ ಗಡಿಯಾರ: ಒಂದು ಟೇಬಲ್‌ ಕ್ಲಾಕ್‌ಗೆ ನಾಲ್ಕು ಲಕ್ಷ ರೂ.ಯಷ್ಟು ದುಬಾರಿ ಬೆಲೆ ನಿಗದಿ ಪಡಿಸಿರುವುದನ್ನು ನೋಡಿ ಯಾರಿಗೇ ಆದರೂ ಒಂದು ಕ್ಷಣ ಅಚ್ಚರಿಯಾಗದೇ ಇರದು. ಇದು ಅಂತಿಂಥ ಗಡಿಯಾರವಲ್ಲ; “ಅಟ್ಮೋಸ್‌ ಕ್ಲಾಕ್‌’ ಎಂದೇ ಪರಿಚಿತ. ಈ ಬ್ರಾಂಡ್‌ನ‌ ಗಡಿಯಾರಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು ಹೆಸರಾಂತ ಗಡಿಯಾರ ತಯಾರಕ ಸಂಸ್ಥೆ, ಸ್ವಿಜ್ಜರ್ಲೆಂಡಿನ “ಜೆಜೆರ್‌ ಲೆಕುಲ್ಟ್‌’. ಈ ಗಡಿಯಾರದ  ವೈಶಿಷ್ಟವೆಂದರೆ, ಇದಕ್ಕೆ ಕೀ ತಿರುಗಿಸಬೇಕೆಂದಿಲ್ಲ. ಅಸಲಿಗೆ ಏನೇನೂ ಮಾಡುವ ಅಗತ್ಯವಿಲ್ಲ. ಇದು ವಾತಾವರಣದಲ್ಲಿನ ತಾಪಮಾನ ಮತ್ತು ಒತ್ತಡವನ್ನೇ ಉಪಯೋಗಿಸಿಕೊಂಡು ಕಾರ್ಯಾಚರಿಸುವ ಅದ್ಭುತ ಯಂತ್ರವಾಗಿದೆ.

ತಾಪಮಾನದಲ್ಲಿ ಒಂದು ಡಿಗ್ರಿಯಷ್ಟು ಬದಲಾವಣೆಯುಂ ಟಾದರೂ, ಎರಡು ದಿನಗಳಿಗಾಗುವಷ್ಟು ಶಕ್ತಿಯನ್ನು ಈ ಯಂತ್ರ ಪಡೆದುಕೊಳ್ಳುತ್ತದೆ. ಹೀಗಾಗಿ, ವರ್ಷಗಳ ಕಾಲ ಯಾವುದರ ಹಂಗೂ ಇಲ್ಲದೆ ಈ ಗಡಿಯಾರ ಓಡುತ್ತದೆ. ಈ  ತಂತ್ರಜ್ಞಾನದ ಆವಿಷ್ಕಾರವಾಗಿದ್ದು 17ನೇ ಶತಮಾನದಲ್ಲಿ.. ನ್ಯೂಝಿಲೆಂಡಿನ ಡುನೆಡಿನ್‌ ಎಂಬಲ್ಲಿ 1864ನೇ ಇಸವಿಯಲ್ಲಿ ಪ್ರತಿಷ್ಠಾಪಿಸಲಾಗಿರುವ ಗಡಿಯಾರ ಇದೇ ತತ್ವದ ಆಧಾರದಲ್ಲಿ ನಿರ್ಮಿತವಾಗಿದ್ದು, ಇಂದಿಗೂ ಸಮಯ  ತೋರಿಸುತ್ತಲೇ ಇದೆ. ಹೀಗಾಗಿಯೇ ಈ ಗಡಿಯಾರಗಳಿಗೆ ತುಂಬಾ ಬೆಲೆ. ಇವು ಪ್ರತಿಷ್ಠೆಯ ಸಂಕೇತವೂ ಹೌದು.

ಬೆಲೆ: 4 ಲಕ್ಷ ರೂ.

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.