ಕುಷ್ಟಗಿ: ದಾರಿ ಸಮಸ್ಯೆ ಪರಿಹರಿಸುವಂತೆ ರೈತರು ತಹಶೀಲ್ದಾರ್ ಕಚೇರಿಗೆ ಮುತ್ತಿಗೆ
Team Udayavani, Jul 1, 2022, 2:53 PM IST
ಕುಷ್ಟಗಿ: ತಾಲೂಕಿನ ಕಂದಕೂರ ಸೀಮಾದ ರೈತರ ಜಮೀನುಗಳ ದಾರಿಗೆ ಅದೇ ದಾರಿಯ ರೈತರೊಬ್ಬರು ತಕರಾರು ವ್ಯಕ್ತಪಡಿಸಿದ ಪ್ರಕರಣದ ಹಿನ್ನೆಲೆ ದಾರಿ ಸಮಸ್ಯೆ ಪರಿಹರಿಸುವಂತೆ ರೈತರು ಶುಕ್ರವಾರ ತಹಶೀಲ್ದಾರ ಕಚೇರಿಗೆ ಏಕಾಏಕಿ ಮುತ್ತಿಗೆ ಹಾಕಿದರು.
ಕಂದಕೂರ ಗ್ರಾಮದ ಯಡ್ಡೋಣಿ ಗ್ರಾಮೀಣ ರಸ್ತೆಯಲ್ಲಿ 120 ಕ್ಕೂ ರೈತಾಪಿ ಜಮೀನುಗಳಿವೆ. ಹಲವು ವರ್ಷಗಳಿಂದ ಇದೇ ದಾರಿಯಲ್ಲಿ ರೈತರು ಸಂಚಾರಿಸುತ್ತಿದ್ದಾರೆ. ಗ್ರಾಮೀಣ ರಸ್ತೆಯ ಎರಡನೇ ಜಮೀನಿನ ಮಾಲೀಕರಾದ ಶರಣಮ್ಮ ಹೊಳೆಯಪ್ಪ ಕುಟುಗಮರಿ, ರಾಮಣ್ಣ ಎಂಬುವರ ಮೂಲ ನಕಾಶೆಯಲ್ಲಿ ಜಮೀನುಗಳಿಗೆ ದಾರಿ ಇಲ್ಲ. ಈಗಿರುವ ದಾರಿ ನಮ್ಮ ಜಮೀನಿನಲ್ಲಿದೆ ಎಂದು ಕ್ಯಾತೆ ತೆಗೆದಿದ್ದಾರೆ.
ಈ ಹಿಂದೆ ಉದ್ಯೋಗ ಖಾತ್ರಿಯ ʼನಮ್ಮ ಹೊಲ ನಮ್ಮ ರಸ್ತೆʼ ಯೋಜನೆಯಲ್ಲಿ ಈ ರೈತರು ಕ್ಯಾತೆ ತೆಗೆದಿದ್ದರಿಂದ 30 ಮೀಟರ್ ದಾರಿಯನ್ನು ಬಿಟ್ಟು ಈ ದಾರಿ ಅಭಿವೃದ್ಧಿಪಡಿಸಿದ್ದರು. ಕೆಲ ದಿನಗಳ ಹಿಂದೆ ಈ ಜಮೀನುದಾರರು ಒಡ್ಡು, ಹಾಕಿದ್ದು ನೂರಕ್ಕೂ ಅಧಿಕ ರೈತರ ಎತ್ತು ಬಂಡಿಗಳ ಸಂಚಾರ ಸದ್ಯಕ್ಕೆ ಸ್ಥಗಿತವಾಗಿದೆ. ರೈತರು ವಿಧಿ ಇಲ್ಲದೇ ತಾಲೂಕಾಡಳಿತದ ಮೊರೆ ಹೋಗಿದ್ದರು.
ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಾಲೂಕಾಡಳಿತದಿಂದ ಸ್ಪಷ್ಟನೆ ವಿಳಂಬವಾದ ಹಿನ್ನೆಲೆ ರೈತರು ತಹಶೀಲ್ದಾರರ ಕಚೇರಿಗೆ ಮುತ್ತಿಗೆ ಹಾಕಿದರು. ಈ ವೇಳೆ ತಹಶೀಲ್ದಾರ ಎಂ. ಸಿದ್ದೇಶ ಕಚೇರಿಗೆ ಆಗಮಿಸುವುದು ವಿಳಂಬವಾಗಿದ್ದರಿಂದ ರೊಚ್ಚಿಗೆದ್ದ ರೈತರು ತಹಶೀಲ್ದಾರ ಕಚೇರಿಗೆ ಬೀಗ ಜಡಿಯಲು ಮುಂದಾದರು.
ಬಳಿಕ ಸ್ಥಳದಲ್ಲಿದ್ದ ಪೊಲೀಸರು ತಡೆದು, ತಹಶೀಲ್ದಾರ್ ರನ್ನು ಸಂಪರ್ಕಿಸಿ ಸಂಜೆ 4 ಗಂಟೆಗೆ ಸ್ಥಳ ಪರಿಶೀಲನೆಗೆ ನಿಗದಿ ಮಾಡಿದರು. ಈ ಬೆಳವಣಿಗೆ ಹಿನ್ನೆಲೆ ರೈತರು ತಹಶೀಲ್ದಾರ ಅವರನ್ನು ಕರೆದುಕೊಂಡು ಹೋಗಲು ಬಿಗಿ ಪಟ್ಟು ಹಿಡಿದು ಮೌನ ಪ್ರತಿಭಟನೆಗೆ ಮುಂದಾದರು ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ
Janardhan Reddy; ಸಿದ್ದರಾಮಯ್ಯ ಮೈಸೂರಲ್ಲಿ ಭಿಕ್ಷೆ ಬೇಡುತ್ತಿದ್ದಾರೆ
Lok Sabha ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿ ಸ್ಥಾನ ಗೆಲ್ಲಲ್ಲ: ಶ್ರೀರಾಮುಲು
Congress ಪ್ರಧಾನಿ ಅಭ್ಯರ್ಥಿ ಯಾರು ಹೇಳಿ ನೋಡೋಣ: ಯಡಿಯೂರಪ್ಪ
Karadi Sanganna: ಬಿಜೆಪಿ ಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಗೊಂಡ ಸಂಗಣ್ಣ ಕರಡಿ
MUST WATCH
ಹೊಸ ಸೇರ್ಪಡೆ
Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ
Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ
Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ
Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ