ಬೇಡಿಕೆಯಷ್ಟು ಸಿಗುತ್ತಿಲ್ಲ ಮೀನು; ದರವೂ ಏರಿಕೆ
Team Udayavani, May 17, 2020, 5:58 AM IST
ಕುಂದಾಪುರ: ನಾಡದೋಣಿಯೊಂದಿಗೆ ಈಗ ಗಂಗೊಳ್ಳಿ, ಮಲ್ಪೆ, ಕೋಡಿ ಕನ್ಯಾಣದಲ್ಲಿ ಸೀಮಿತ ಸಂಖ್ಯೆಯಲ್ಲಿ ಯಾಂತ್ರೀಕೃತ ಮೀನುಗಾರಿಕೆಗೆ ಅವಕಾಶ ಕಲ್ಪಿಸಲಾಗಿದ್ದರೂ ಬೇಡಿಕೆಯಷ್ಟು ಮೀನು ಸಿಗದ ಹಿನ್ನೆಲೆಯಲ್ಲಿ ಮತ್ಸ್ಯ ಪ್ರಿಯರಿಗೆ ಮೀನು ಕೈಗೆಟುಕದಂತಾಗಿದೆ. ಲಾಕ್ಡೌನ್ನಿಂದಾಗಿ ಮೀನಿಗೆ ಭಾರೀ ಬೇಡಿಕೆಯಿದ್ದು, ಆದರೆ ದರ ಏರಿಕೆ ಮಾತ್ರ ದುಬಾರಿಯಾಗಿ ಪರಿಣಮಿಸಿದೆ.
ಪರ್ಸಿನ್, ಮೀನುಗಾರಿಕಾ ಬೋಟ್ಗಳು ಮೀನುಗಾರಿಕೆಗೆ ತೆರಳಿದರೂ ಕೂಡ ಸಮುದ್ರದಲ್ಲಿ ಉತ್ತಮ ಮೀನುಗಳು ಸಿಗದ ಹಿನ್ನೆಲೆಯಲ್ಲಿ ಸಿಕ್ಕ ಅಲ್ಪ ಮೀನುಗಳಿಗೆ ಭಾರೀ ಬೇಡಿಕೆಯಿದ್ದು, ದರವೂ ದುಬಾರಿಯಾಗಿದೆ. ಗಂಗೊಳ್ಳಿಯಲ್ಲಿ ಶನಿವಾರ ಮೀನುಗಾರಿಕೆಗೆ ತೆರಳಿದ ಕೆಲ ಪರ್ಸಿನ್ ಬೋಟುಗಳು ಬರಿಗೈಯಲ್ಲಿ ವಾಪಸು ಬಂದಿವೆ.
ಲಾಕ್ಡೌನ್ನಿಂದಾಗಿ ಬಹುತೇಕ ಮಂದಿ ಊರಿಗೆ ಬಂದಿದ್ದು, ಮನೆಗಳಲ್ಲಿ ಇರುವ ಜನಸಂಖ್ಯೆಯೂ ಜಾಸ್ತಿಯಿದೆ. ಹೀಗಾಗಿ ಎಲ್ಲೆಡೆ ಮೀನಿನ ಬೇಡಿಕೆಯೂ ಜಾಸ್ತಿಯಾಗುತ್ತಿದೆ. ಹಾಗಾಗಿ ಬೇಡಿಕೆಯಷ್ಟು ಮೀನು ಸಿಗದ ಕಾರಣ ಬೆಲೆ ಏರಿಕೆಯಾಗುತ್ತಿದೆ ಎನ್ನುತ್ತಾರೆ ಮೀನುಗಾರರು.
ಹೇಗಿದೆ ದರ?
ಬೋಟ್ಗಳಿಗೆ ಹೆಚ್ಚಾಗಿ ಗೇದರ್ (ಟ್ಯೂನಾ) ಮೀನು ಮಾತ್ರ ಸಿಗುತ್ತಿದ್ದು, ಮಾರುಕಟ್ಟೆಯಲ್ಲಿ ಕೆ.ಜಿ.ಗೆ 130ರಿಂದ 140 ರೂ.ವರೆಗೆ ಮಾರಾಟವಾಗುತ್ತಿದೆ. ಬಂಗುಡೆ ಅಲ್ಪ ಸ್ವಲ್ಪ ಸಿಗುತ್ತಿದ್ದು, 230 -250 ರೂ. ವರೆಗೆ ಮಾರಾಟವಾಗುತ್ತಿದೆ. ಬೈಗೆ (ಬೂತಾಯಿ), ಅಂಜಲ್ ಮೀನು ಸಿಗುತ್ತಿಲ್ಲ. ಕೊಡ್ಡಾಯಿ ಕೆ.ಜಿ.ಗೆ 150ರಿಂದ 170 ರೂ.ವರೆಗೆ ಮಾರಾಟವಾಗುತ್ತಿದೆ. ಅಡವು ಮೀನಿಗೆ ಕೆ.ಜಿ.ಗೆ 250 ರೂ. ಇದೆ. ಸಿಗಡಿಗೆ ಬೇರೆ ಬೇರೆ ದರಗಳಿದ್ದು 250 ರಿಂದ ಆರಂಭಗೊಂಡು 450-500 ರೂ.ವರೆಗೂ ಮಾರಾಟವಾಗುತ್ತಿದೆ. ಸಾಮಾನ್ಯ ಏಡಿಗೆ ಕೆ.ಜಿ.ಗೆ 50-60 ರೂ. ಇದ್ದರೆ, ಹಸುರು ಏಡಿಗೆ 250 ರೂ. ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್