ಉಪ್ಪುಂದ, ಕೊಡೇರಿ ಮೀನುಗಾರರ ಘರ್ಷಣೆ ಪ್ರಕರಣ: ಹಲವರ ಬಂಧನ
Team Udayavani, Nov 8, 2020, 9:20 PM IST
ಉಪ್ಪುಂದ: ಕೊಡೇರಿ ಕಿರಿಮಂಜೇಶ್ವರ ಮೀನು ಹರಾಜು ಪ್ರಾಂಗಣಕ್ಕೆ ಸಂಬಂಧಿಸಿ ಉಪ್ಪುಂದ ಮತ್ತು ಕೊಡೇರಿ ಮೀನುಗಾರರ ನಡುವಣ ಘರ್ಷಣೆಯಿಂದ ಪೊಲೀಸರು ಲಾಠಿ ಚಾರ್ಜ್ ನಡೆಸಿರುವ ಘಟನೆ ಕುರಿತು ರವಿವಾರ ಪ್ರಕರಣ ದಾಖಲಾಗಿದ್ದು ಪೊಲೀಸರು ಹಲವರನ್ನು ಬಂಧಿಸಿದ್ದಾರೆ.
ಮೀನುಗಾರಿಕೆ ಇಲಾಖೆಯ ಆದೇಶದಂತೆ ನ. 7ರಂದು ಉಪ್ಪುಂದ ಗ್ರಾಮ ವ್ಯಾಪ್ತಿಯ ಮೀನುಗಾರರು ಮೀನು ಖಾಲಿ ಮಾಡಲು ಕೊಡೇರಿ ಬಂದರಿನ ಮೀನು ಹರಾಜು ಪ್ರಾಂಗಣಕ್ಕೆ ಬಂದಾಗ ಕೊಡೇರಿ ವ್ಯಾಪ್ತಿಯ ಮೀನುಗಾರರು 8-10 ದೋಣಿಗಳನ್ನು ಅಡ್ಡ ಇಟ್ಟು ಮೀನು ವ್ಯಾಪಾರಕ್ಕೆ ತೊಂದರೆ ಮಾಡಿದ್ದರು. ಇಲ್ಲಿನ ಪ್ರಾಂಗಣದಲ್ಲಿ ಮೂಲಸೌಕರ್ಯ ಕಲ್ಪಿಸದ ಹಾಗೂ ಎಡಮಾವಿನ ಹೊಳೆಯಲ್ಲಿ ಸೇತುವೆ ನಿರ್ಮಾಣ ಮಾಡುವವರೆಗೆ ಅವಕಾಶ ನೀಡುವುದಿಲ್ಲ ಎಂಬುದು ಅವರ ವಾದವಾಗಿತ್ತು.
ಈ ಹಿನ್ನೆಲೆಯಲ್ಲಿ ಬೈಂದೂರಿನ ಕಾರ್ಯನಿರ್ವಾಹಕ ದಂಡಾಧಿಕಾರಿ ಬಸಪ್ಪ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಮುಖಂಡರೊಂದಿಗೆ ಚರ್ಚಿಸಿ ಅಡ್ಡ ಇಟ್ಟ ದೊಣಿಗಳನ್ನು ತೆರವುಗೊಳಿಸಲು ಮನವಿ ಮಾಡಿದರು. ಅಧಿಕಾರಿಗಳ ಮನವಿಯನ್ನು ಲೆಕ್ಕಿಸದೇ ಪ್ರತಿಭಟನೆ ಮುಂದುವರಿದು ಎರಡು ಕಡೆಯ ಮೀನುಗಾರರು ಘರ್ಷಣೆಗೆ ಇಳಿದರು. ಆಬಳಿಕ ಪೊಲೀಸರು ಲಾಠಿ ಚಾರ್ಚ್ ನಡೆಸಿದರು. ಈ ಸಂಬಂಧ ಪ್ರಕರಣ ದಾಖಲಾಗಿದ್ದು 15 ಜನರನ್ನು ಬಂಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್