ಮಳೆಗಾಲದಲ್ಲಿ ನಾಡದೋಣಿ ಮೀನುಗಾರಿಕೆಯ ಅವಧಿ ವಿಸ್ತರಣೆಗೆ ಆಗ್ರಹ
Team Udayavani, Jul 21, 2020, 4:54 PM IST
ಮಲ್ಪೆ: ಮಳೆಗಾಲ ಋತುವಿನ ನಾಡದೋಣಿ ಮೀನುಗಾರಿಕೆಯ ಅವಧಿಯನ್ನು ವಿಸ್ತರಿಸುವಂತೆ ಮಲ್ಪೆ ಸಾಂಪ್ರಾದಾಯಿಕ ನಾಡದೋಣಿ ಸಂಘ, ನಾಡಟ್ರಾಲ್ದೋಣಿ ಸಂಘ, ಸಾಂಪ್ರಾದಾಯಿಕ ಕಂತು ಬಲೆ ದೋಣಿ ಸಂಘವು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕೆ. ರಘುಪತಿ ಭಟ್, ಜಿಲ್ಲಾಧಿಕಾರಿ ಜಿ. ಜಗದೀಶ್, ಮೀನುಗಾರಿಕಾ ಜಂಟಿ ನಿರ್ದೇಶಕ, ಮೀನುಗಾರಿಕಾ ಸಹಾಯಕ ನಿರ್ದೇಶಕರು, ಮಲ್ಪೆ ಮೀನುಗಾರರ ಸಂಘ ಮತ್ತು ಆಳಸಮುದ್ರ ತಾಂಡೇಲರ ಸಂಘಕ್ಕೆ ಮನವಿ ನೀಡಿ ಆಗ್ರಹಿಸಿದೆ.
ಸುಮಾರು 35 ವರ್ಷಗಳಿಂದಲೂ ಮಳೆಗಾಲ ಋತುವಿನ ಮೀನುಗಾರಿಕೆಗೆ ಮೂರು ತಿಂಗಳ ಅವಧಿಯನ್ನು ನೀಡಲಾಗುತ್ತಿದ್ದು, ಪ್ರಸ್ತುತ 3 ವರ್ಷದಿಂದ ಅದನ್ನು 2 ತಿಂಗಳಿಗೆ ಕುಂಠಿತಗೊಳಿಸಲಾಗಿದೆ. ಮಳೆಗಾಳಿ, ಪ್ರಾಕೃತಿಕ ವೈಪರೀತ್ಯಾಗಳು ಸಂಭವಿಸುವುದರಿಂದ ಈ ಎರಡು ತಿಂಗಳ ಅವಧಿಯಲ್ಲಿ ಮೀನುಗಾರಿಕೆ ನಡೆಸಲು ಹೆಚ್ಚು ದಿನ ಸಿಗುತ್ತಿಲ್ಲ. ಪ್ರಸ್ತುತ ಈ ಋತುವಿನಲ್ಲಿ ಇದುವರೆಗೂ ಯಾವುದೇ ರೀತಿಯ ಮೀನುಗಾರಿಕೆಯಲ್ಲಿ ಸಂಪಾದನೆ ಆಗಿಲ್ಲ. ಈ ಮೂರು ಸಂಘದ ಅಡಿಯಲ್ಲಿ ಸುಮಾರು 5 ಸಾವಿರ ಮೀನುಗಾರರು ಇದ್ದಾರೆ. ಇದೀಗ ಈ ಎಲ್ಲ ಮೀನುಗಾರರ ಕುಟುಂಬದ ಜೀವನ ನಿರ್ವಾಹಣೆ ಕಷ್ಟದಾಯಕವಾಗಿದೆ. ಆದ್ದರಿಂದ ತಾವು ಈ ಮಳೆಗಾಲದ ಋತುವಿನಲ್ಲಿ ನಾಡದೋಣಿ ಮೀನುಗಾರಿಕೆಗೆ ಹಿಂದಿನಂತೆ ಆ. 30ರವರೆಗೆ ಅವಧಿಯನ್ನು ವಿಸ್ತರಿಸಬೇಕು ಮತ್ತು ಯಾಂತ್ರಿಕ ಮೀನುಗಾರಿಕೆಗೆ ಸೆ. 1ರಿಂದ ಅವಕಾಶವನ್ನು ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ನಾಡದೋಣಿ ಅಧ್ಯಕ್ಷ ಜನಾರ್ದನ ತಿಂಗಳಾಯ, ಟ್ರಾಲ್ದೋಣಿ ಅಧ್ಯಕ್ಷ ದೇವದಾಸ್ ಕುಂದರ್, ಉಪಾಧ್ಯಕ್ಷ ಮಧುಸೂದನ್ ಮೈಂದನ್, ಕಾರ್ಯದರ್ಶಿ ಪುರಂದರ್ ಕೋಟ್ಯಾನ್, ಕೋಶಾಧಿಕಾರಿ ಆನಂದ ಕಾಂಚನ್, ಕಂತುಬಲೆ ದೋಣಿ ಸಂಘದ ಅಧ್ಯಕ್ಷ ಸತೀಶ್ ಕುಂದರ್, ಸದಸ್ಯರಾದ ಗಣಪ ಕೋಡಿ, ಕರುಣಾಕರ್ ಮೆಂಡನ್, ವಿನೋದ್ ಕುಂದರ್, ತಾರಾನಾಥ್ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್