ಸೋತು ಗೆದ್ದ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಮಂಜುಳಾ
Team Udayavani, Dec 31, 2020, 12:26 PM IST
ಸಕಲೇಶಪುರ: ಪರಿಶಿಷ್ಟ ಜಾತಿ ಮಹಿಳಾ ಮೀಸಲು ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ತಾಪಂ ಮಾಜಿ ಅಧ್ಯಕ್ಷೆಯೊಬ್ಬರು ಸೋತು ಗೆದ್ದಿರುವ ವಿಶೇಷ ಪ್ರಸಂಗ ಈ ಬಾರಿಯ ಗ್ರಾಪಂ ಚುನಾವಣೆಯಲ್ಲಿ ನಡೆದಿದೆ.
ಒಂದೇ ವಾರ್ಡ್ನಲ್ಲಿ 2 ಸದಸ್ಯ ಸ್ಥಾನ ಇದ್ದು, ಅದರಲ್ಲಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಿಂತ ಮಂಜುಳಾ ಹೆಚ್ಚು ಮತ ಪಡೆದಿದ್ದರಿಂದ ಚುನಾವಣೆ ಅಧಿಕಾರಿಗಳು ಮಂಜುಳಾ ಅವರನ್ನೇ ವಿಜಯಿ ಎಂದು ಘೋಷಿಸಿದರು.
2015ರ ಸಾಲಿನಲ್ಲಿ ತಾಪಂ ಅಧ್ಯಕ್ಷೆ ಆಗಿದ್ದ ಮಂಜುಳಾ, ಗ್ರಾಪಂ ಚುನಾವಣೆಯಲ್ಲಿ ಎಸ್ಸಿ ಮಹಿಳೆಗೆ ಮೀಸಲಾಗಿದ್ದ ಬೆಳಗೋಡು ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಇವರು 146 ಮತ ಪಡೆದರೆ, ಎದುರಾಳಿ ಪ್ರೇಮಾ 147 ಮತ ಪಡೆದು ಗೆಲುವು ಸಾಧಿಸಿದ್ದರು. ಇದರಿಂದ
ಸಮಾಧಾನಗೊಳ್ಳದ ಮಂಜುಳಾ ಮರು ಮತಗಳ ಎಣಿಕೆಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದರು. ಈ ವೇಳೆ ಅದೇ ವಾರ್ಡ್ ನ ಸಾಮಾನ್ಯ ಅಭ್ಯರ್ಥಿ ನಿಸಾರ್ (117) ತನ್ನ ಪ್ರತಿಸ್ಪರ್ಧಿ ವಿರುದ್ಧ ಹೆಚ್ಚು ಪಡೆದರೂ ಮಂಜುಳಾಗಿಂತ ಕಡಿಮೆ ಮತ ಪಡೆದಿದ್ದರಿಂದ
ಮೀಸಲಾತಿ ನಿಯಮದಂತೆ ಸೋಲುಂಡರು.
ಇದನ್ನೂ ಓದಿ:ಕೋಲಾರ : ಖಾಸಗಿ ಕಂಪನಿ ಎಚ್ಆರ್ ಈಗ ಗ್ರಾಮ ಪಂಚಾಯತ್ ಸದಸ್ಯ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…