ಶಿಖರದಿಂದ, ಮತ್ತೊಂದು ಶಿಖರದ ವರ್ಣನೆ
Team Udayavani, Jun 9, 2020, 4:32 AM IST
ಗುರುವರ್ಯ ರವೀಂದ್ರನಾಥ ಠಾಕೂರರ ನ್ನು ಕುರಿತಾಗಿ ಕನ್ನಡದಲ್ಲಿ ಇರುವ ಸಾಹಿತ್ಯ ಕಡಿಮೆಯೇ, ಆದರೆ ಇರುವುದು ಬಹಳ ತೂಕದ್ದು. 1930ರ ದಶಕದಲ್ಲಿ ಮೈಸೂರು ವಿವಿಯು ಕೆಲವು ಅಮೂಲ್ಯ ಕೃತಿಗಳನ್ನು ಪ್ರಕಟಿ ಸಲು ಉದ್ದೇಶಿಸಿ, ಗುರುವರ್ಯ ರವೀಂದ್ರ ನಾಥ ಠಾಕೂರರನ್ನು ಕುರಿತಾಗಿ ಬರೆಯಲು ಮಾಸ್ತಿ ಅವರನ್ನು ವಿನಂತಿ ಸಿತು. ಅದನ್ನೊಪ್ಪಿದ ಮಾಸ್ತಿಯವರು, ಶಾಂತಿನಿಕೇತನಕ್ಕೆಹೋಗಿ ಠಾಕೂರರೊಂದಿಗೆ ಮಾತನಾಡಿ, ತತಲವೆಂಬಂತೆ ಈ ಪುಸ್ತಕ ರಚಿಸಿದ್ದಾರೆ.
ಶಾಂತಿನಿಕೇತನದಲ್ಲಿ ಚಿತ್ರಕಲೆ ಅಧ್ಯಯನ ಮಾಡುತ್ತಿದ್ದ ಮಾರ್ತಾಂಡ ಜೋಶಿಯವರು, ಠಾಕೂರರ ಚಿತ್ರವೊಂದನ್ನು ಮಾಸ್ತಿಯವರಿಗೆ ಕಳುಹಿಸಿದರು. ಅದರ ಆಧಾರದಿಂದ, ಶಿವರಾಮ ಕಾರಂತರು ತೈಲಚಿತ್ರವನ್ನು ಬರೆಯಿಸಿಕೊಟ್ಟರು. ಅದನ್ನು ಮುಖಪುಟವಾಗಿ ಬಳಸಲಾಗಿದೆ. ಠಾಕೂರರ ಬದುಕು- ಬರಹವನ್ನು ಕುರಿತಾದ ಸಮಗ್ರ ಬರಹ, ಈ ಪುಸ್ತಕ. ಪ್ರಸ್ತಾವನೆ, ಠಾಕೂರರ ಕಾಲ, ದೇಶ, ಭಾಷೆ, ಜೀವನ ಚರಿತ್ರೆ ಇದು ಮೊದಲ ಭಾಗ.
ಇಲ್ಲಿ ಠಾಕೂರರ ಕಾಲ, ದೇಶ ಭಾಷೆಯನ್ನು ಕುರಿತಾದ ಸತ್ವಪೂರ್ಣ ಮಾಹಿತಿಯಿದೆ. ಆನಂತರ ಠಾಕೂರರ ಕಾವ್ಯ, ನಾಟಕ, ಕತೆ, ಭಾಷಣ- ಲೇಖನಗಳು ಇತ್ಯಾದಿಗಳನ್ನು ಕುರಿತಾದ ವಿಸ್ತೃತವಾದ ಲೇಖನಗಳಿವೆ. ಜಲಿಯನ್ವಾಲಾ ಬಾಗ್ ಹತ್ಯಾಕಾಂಡ ವಿರೋಧಿಸಿ ಬ್ರಿಟಿಷ್ ಸಾಮ್ರಾಜ್ಯ ನೀಡಿದ್ದ ನೈಟ್ಹುಡ್ (ಸರ್) ಪ್ರಶಸ್ತಿಯನ್ನು ಠಾಕೂರರು ಹಿಂದಿರುಗಿಸಿದ್ದರ ವಿವರಣೆ ಇದೆ. ಪುಸ್ತಕದಲ್ಲಿ ಅತ್ಯುತ್ತಮ ಚಿತ್ರಗಳು, ರೇಖಾಚಿತ್ರಗಳೂ ಇವೆ. ನಮ್ಮನ್ನು ಬೌದಿಕವಾಗಿ ಶ್ರೀಮಂತವಾಗಿಸುವ ಪುಸ್ತಕವಿದು.
ಪುಸ್ತಕ: ರವೀಂದ್ರನಾಥ ಠಾಕೂರರು
ಲೇಖಕರು: ಮಾಸ್ತಿ ವೆಂಕಟೇಶ ಅಯ್ಯಂಗಾರ್
ಪ್ರಕಾಶಕರು: ಮಾಸ್ತಿ ಸಾಹಿತ್ಯ ಸಂಪದ (ಮೊದಲ ಪರಿಷ್ಕೃತ ಗಣಕ ಮುದ್ರಣ)
* ಕಲ್ಗುಂಡಿ ನವೀನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು