ಸಚಿವ ಜಿ.ಟಿ.ದೇವೇಗೌಡ ತೆರಳುತ್ತಿದ್ದ ಕಾರು ಅಪಘಾತ
Team Udayavani, Apr 2, 2019, 11:51 AM IST
ಮೈಸೂರು : ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಲಾರಿ ಢಿಕ್ಕಿಯಾದ ಘಟನೆ ಮಂಗಳವಾರ ನಡೆದಿದೆ. ಅದೃಷ್ಟವಷಾತ್ ಸಚಿವರು ಸೇರಿ ಯಾರಿಗೂ ಗಾಯವಾಗಿಲ್ಲ.
ಮಳವಳ್ಳಿ ಕಡೆಗೆ ತೆರಳುತ್ತಿದ್ದ ವೇಳೆ ಕೊಲಂಬಿಯಾ ಏಷಿಯಾ ಆಸ್ಪತ್ರೆ ಬಳಿ ಘಟನೆ ನಡೆದಿದೆ.
ಘಟನೆ ಬಳಿಕ ಸಚಿವ ಜಿಟಿಡಿ ಅವರು ಬೇರೆ ಕಾರಿನಲ್ಲಿ ಪ್ರಯಾಣ ಮುಂದುವರಿಸಿದ್ದಾರೆ.
ಎನ್.ಆರ್.ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.