ಜಿಯೋ- ಫೇಸ್‌ಬುಕ್‌: ಭಾಯಿ ಭಾಯಿ


Team Udayavani, Apr 27, 2020, 1:06 PM IST

ಜಿಯೋ- ಫೇಸ್‌ಬುಕ್‌: ಭಾಯಿ ಭಾಯಿ

ಟೆಲಿಕಾಂ ಕ್ಷೇತ್ರದ ದೈತ್ಯ ಎಂದೇ ಹೆಸರಾದ ಜಿಯೋ ಮತ್ತು ಸಾಮಾಜಿಕ ಜಾಲತಾಣದ ದೊರೆಯಾಗಿರುವ ಫೇಸ್‌ಬುಕ್‌ ಇದೀಗ ಒಂದಾಗಿವೆ. ಇದರಿಂದ ಉದ್ಯಮ ಲೋಕದಲ್ಲಿ ಹಲವು ಬದಲಾವಣೆಗಳು ಆಗಲಿವೆ ಎಂಬುದು ಹಲವರ ಲೆಕ್ಕಾಚಾರದ ಮಾತು…

ಜಿಯೊ ಮೂಲಕ ಟೆಲಿಕಾಂ ಕ್ಷೇತ್ರದಲ್ಲಿ ಬಿರುಗಾಳಿಯೆಬ್ಬಿಸಿದ್ದ ರಿಲಯನ್ಸ್, ಈಗ ರೀಟೇಲ್‌ ಮತ್ತು ಡಿಜಿಟಲ್‌ ಪೇಮೆಂಟ್‌ ಕ್ಷೇತ್ರದಲ್ಲಿ ಅಂಥದ್ದೇ ಸಂಚಲನ ಸೃಷ್ಟಿಸುವ ಸೂಚನೆಯನ್ನು ನೀಡಿದೆ. ಅದಕ್ಕೆ ಕಾರಣವಾಗಿರುವುದು, ಜಿಯೊ ಮತ್ತು ಫೇಸ್‌ಬುಕ್‌ ಸಂಸ್ಥೆಯ ನಡುವೆ ಏರ್ಪಟ್ಟಿರುವ ಒಪ್ಪಂದ. ಜಿಯೊ ಸಂಸ್ಥೆಯ ಶೇ.10ರಷ್ಟು ಷೇರನ್ನು, ಬರೋಬ್ಬರಿ 43,574 ಕೋಟಿ ರೂ ತೆತ್ತು, ಫೇಸ್‌ಬುಕ್‌ ಖರೀದಿಸಿದೆ.

ರಿಲಯನ್ಸ್ ಲೆಕ್ಕಾಚಾರ ಜಿಯೊ ಎನ್ನುವುದು ಮೂಲವಾಗಿ
ಟೆಲಿಕಾಂ ಸಂಸ್ಥೆ ನಿಜ. ಆದರೆ, ಅದರಡಿ ಜಿಯೊ ಪ್ಲಾಟ್‌ ಫಾರ್ಮ್ ಕೂಡಾ ಬರುತ್ತದೆ. ಈ ಜಿಯೊ ಪ್ಲಾಟ್‌ ಫಾರ್ಮಿನಲ್ಲಿ ಜಿಯೊ ಮಾರ್ಟ್‌, ಜಿಯೊ ಸಾವನ್‌ ಮತ್ತು ಜಿಯೊ ಸಿನೆಮಾ- ಇವೆಲ್ಲಾ ಸೇವೆಗಳು ಬರುತ್ತವೆ. ಜಿಯೊ- ಫೇಸ್‌ಬುಕ್‌ ಒಪ್ಪಂದದ ನೇರ ಪರಿಣಾಮ, ಜಿಯೊ ಮಾರ್ಟ್‌ ಮೇಲಾಗುತ್ತದೆ. ಸದ್ಯ, ಜಿಯೊ ಮಾರ್ಟ್‌ ಆಯ್ದ ಸ್ಥಳಗಳಲ್ಲಿ ಸುತ್ತಮುತ್ತ ಮಾತ್ರ ಕಾರ್ಯಾಚರಿಸುತ್ತಿದೆ. ಇದು, ಗ್ರಾಹಕರ ಮನೆ ಬಾಗಿಲಿಗೇ ದಿನಸಿಯನ್ನು ತಲುಪಿಸುವ ಸೇವೆ. ಉಚಿತ ಹೋಂ ಡೆಲಿವರಿ. ಈಗ, ಫೇಸ್‌ಬುಕ್‌ ಜೊತೆಗಿನ ಒಪ್ಪಂದದ ನೆರವಿನಿಂದ, ರೀಟೇಲ್‌ ಕ್ಷೇತ್ರದಲ್ಲಿ ತನ್ನ ಪ್ರಾಬಲ್ಯ ಸ್ಥಾಪಿಸಲು ರಿಲಯನ್ಸ್ ಮುಂದಾಗಲಿದೆ.

ವಾಟ್ಸ್‌ಆ್ಯಪ್‌ ಪೇಗೆ ಮರುಜೀವ
ರಿಲಯನ್ಸ್ ನಂತೆಯೇ, ಫೇಸ್‌ ಬುಕ್‌ಗೆ ಕೂಡ ಒಂದು ಉದ್ದೇಶವಿದೆ. ಈ ಒಪ್ಪಂದದ ಮೂಲಕ ತನ್ನ ತನ್ನ ಮಹತ್ವಾಕಾಂಕ್ಷಿ ಯೋಜನೆಯಾದ “ವಾಟ್ಸ್‌ ಆ್ಯಪ್‌ ಪೇ’ ಎಂಬ ಡಿಜಿಟಲ್‌ ಪೇಮೆಂಟ್‌ ವ್ಯವಸ್ಥೆಗೆ ಮರುಜೀವ ಕೊಡುವ ಸಾಧ್ಯತೆ ಇದೆ. ಪೇಟಿಎಂ, ಗೂಗಲ್‌ ಪೇ ರೀತಿ, ತಾನೂ ಒಂದು ಡಿಜಿಟಲ್‌ ಪೇಮೆಂಟ್‌ ವ್ಯವಸ್ಥೆಯನ್ನು ರೂಪಿಸಬೇಕು ಎನ್ನುವುದು ಫೇಸ್‌ ಬುಕ್‌ನ ಕನಸಾಗಿತ್ತು. ಅದಕ್ಕಾಗಿಯೇ ವಾಟ್ಸ್‌ ಆ್ಯಪ್‌ನ ಸಂಪನ್ಮೂಲಗಳನ್ನು ಬಳಸಿಕೊಂಡು “ವಾಟ್ಸ್‌ ಆ್ಯಪ್‌ ಪೇ’ ಅಭಿವೃದ್ಧಿಪಡಿಸಲು ಮುಂದಾಗಿತ್ತು. ಸರ್ಕಾರದ “ಡಾಟಾ ಲೋಕಲೈಸೇಷನ್‌’ ಷರತ್ತಿಗೆ ಫೇಸ್‌ಬುಕ್‌ ಒಪ್ಪದೇ ಇದ್ದುದರಿಂದ ಆ ಯೋಜನೆ ಅನುಷ್ಠಾನಕ್ಕೆ ಬರಲೇ ಇಲ್ಲ. ಡಾಟಾ ಲೋಕಲೈಸೇಷನ್‌ ಎಂದರೆ, ದೇಶದ ನಾಗರಿಕರ ಮಾಹಿತಿಯನ್ನು. ದೇಶದೊಳಗಡೆಯೇ ಸರ್ವರ್‌ ಸ್ಥಾಪಿಸಿ ಸಂಗ್ರಹಿಸಿಡುವುದು, ಮಾಹಿತಿ ಸಂಸ್ಕರಿಸುವುದು. ಈಗ ಜಿಯೊ ಜೊತೆ ಒಪ್ಪಂದವಾಗಿರುವುದರಿಂದ “ಡಾಟಾ ಲೋಕಲೈಸೇಷನ…’ ಷರತ್ತಿಗೆ ಫೇಸ್‌ಬುಕ್‌ ಸಮ್ಮತಿಸಿದೆ.

ಜಂಟಿ ಕಾರ್ಯಾಚರಣೆ
ಫೇಸ್‌ಬುಕ್‌ ಅಧೀನದ ಮೆಸೇಜಿಂಗ್‌ ಸಂಸ್ಥೆ ವಾಟ್ಸ್‌ಆ್ಯಪ್‌ ಹಾಗೂ ಟೆಲಿಕಾಂ ಆಪರೇರ್ಟ ಜಿಯೊ, ದೇಶಾದ್ಯಂತ ಸುಮಾರು 3 ಕೋಟಿ ಕಿರಾಣಿ ಅಂಗಡಿಗಳು, ದಿನಸಿ ಅಂಗಡಿಗಳ ಜೊತೆ ಸಂಪರ್ಕ ಬೆಳೆಸಿಕೊಂಡು, ಸುತ್ತಮುತ್ತಲ ಜನರು ಅಲ್ಲಿ ಡಿಜಿಟಲ್‌ ವ್ಯವಹಾರ ನಡೆಸುವಂತೆ ಪೋ›ತ್ಸಾಹ ನೀಡಲಿವೆ. ಇಲ್ಲಿ ಡಿಜಿಟಲ್‌ ವ್ಯವಹಾರ, ವಾಟ್ಸ್‌ ಆ್ಯಪ್‌ ಪೇ ಮುಖಾಂತರ ನಡೆಯಲಿದೆ. ನಂತರ ಈ ಡಿಜಿಟಲ್‌ ಪೇಮೆಂಟ್‌ ಸೇವೆಯನ್ನು ಕೃಷಿ, ಶಿಕ್ಷಣ ಮತ್ತಿತರ ಕ್ಷೇತ್ರಗಳಗೂ ವಿಸ್ತರಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ. ಈ ಒಂದು ನಡೆಯಿಂದಾಗಿ, ವಾಟ್ಸ್‌ ಆ್ಯಪ್‌ ಪೇಟಿಎಂ,
ಗೂಗಲ್‌ ಪೇ, ಫೋನ್‌ ಪೆ ಡಿಜಿಟಲ್‌ ಪೇಮೆಂಟ್‌ ಸಂಸ್ಥೆಗಳ ಮೇಲೆ ನೇರ ಪರಿಣಾಮ ಉಂಟಾಗಿದೆ. ಇವು ಮೂರು, ಸದ್ಯ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಡಿಜಿಟಲ್‌ ಪೇಮೆಂಟ್‌ ಆ್ಯಪ್‌ ಗಳಲ್ಲಿ ಮುಖ್ಯವಾದವು.ವಾಟ್ಸ್‌ಆ್ಯಪ್‌ ಭಾರತದಲ್ಲಿನ ತನ್ನ ಮುಂದಿನ ಯೋಜನೆಗಳಿಗಾಗಿ ಇಲ್ಲಿ ತಾನು ಹೊಂದಿರುವ 40 ಕೋಟಿಯಷ್ಟು ಬಳಕೆದಾರರ ಸಹಕಾರವನ್ನು ಬಳಸಿಕೊಳ್ಳಲಿದೆ.

ಟಾಪ್ ನ್ಯೂಸ್

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

Karkala: ಕಾಂಗ್ರೆಸ್ಸಿನಿಂದ ಬೃಹತ್‌ ಪರಿವರ್ತನಾ ರ್‍ಯಾಲಿ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

ಕೊಪ್ಪಳ: ಮಗ ರಾಜಶೇಖರ ವಿರುದ್ಧ ತಂದೆ ನಾಮಪತ್ರ ಸಲ್ಲಿಕೆ!

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.