ದೃಷ್ಟಿ ನರ ಶಾಶ್ವತ ಹಾನಿಗೆ ಕಾರಣ ಗ್ಲುಕೊಮಾ


Team Udayavani, May 10, 2020, 5:35 AM IST

ದೃಷ್ಟಿ ನರ ಶಾಶ್ವತ ಹಾನಿಗೆ ಕಾರಣ ಗ್ಲುಕೊಮಾ

ಪ್ರತೀ ವರ್ಷ ಮಾರ್ಚ್‌ ದ್ವಿತೀಯ ವಾರವನ್ನು ವಿಶ್ವ ಗ್ಲುಕೊಮಾ ಸಪ್ತಾಹವನ್ನಾಗಿ ಆಚರಿಸುವ ಪರಿಪಾಠ ಇದೆ. ದೃಷ್ಟಿ ನರವನ್ನು ಶಾಶ್ವತವಾಗಿ ಹಾನಿಗೀಡು ಮಾಡುವ ಗ್ಲುಕೊಮಾ ಕಾಯಿಲೆಯ ಬಗ್ಗೆ ತಿಳಿವಳಿಕೆಯನ್ನು ಹೆಚ್ಚಿಸುವುದು ಇದರ ಉದ್ದೇಶ. ಇತ್ತೀಚೆಗಷ್ಟೇ ಈ ಆಚರಣೆ ಪೂರ್ಣಗೊಂಡಿದ್ದರೂ ಗ್ಲುಕೊಮಾದ ಬಗೆಗಿನ ಜಾಗೃತಿ ಸದಾ ಕಾಲ ನಮ್ಮಲ್ಲಿರಬೇಕು.

ಗ್ಲುಕೊಮಾ ಕಾಯಿಲೆಯು ನಿಧಾನವಾಗಿ ಕಣ್ಣಿನ ದೃಷ್ಟಿ (ಆಪ್ಟಿಕ್‌ ನರ) ಯನ್ನು ಶಾಶ್ವತವಾಗಿ ಹಾನಿಗೊಳಿಸುತ್ತದೆ. ಗ್ಲುಕೊಮಾದಲ್ಲಿ ಸಾಮಾನ್ಯವಾಗಿ ಕಣ್ಣಿನ ಒತ್ತಡವು ಜಾಸ್ತಿಯಾಗಿರುತ್ತದೆ ಮತ್ತು ಕಣ್ಣಿನ ನರದಲ್ಲಿ ರಕ್ತದ ಪೂರೈಕೆಯು ಅಸಮರ್ಪಕವಾಗಿರುತ್ತದೆ.

ವಿಶ್ವಾದ್ಯಂತ ಬದಲಾಯಿಸಲಾಗದ ಕುರುಡುತನಕ್ಕೆ ಇದು ಸಾಮಾನ್ಯ ಕಾರಣವಾಗಿದೆ.

ಗ್ಲುಕೊಮಾವನ್ನು ಗುಣಪಡಿಸಲು ಸಾಧ್ಯವಿಲ್ಲ. ಆದರೂ ಒಂದು ವೇಳೆ ಬೇಗ ಪತ್ತೆಯಾದಲ್ಲಿ ಕುರುಡುತನವನ್ನು ತಡೆಯಬಹುದು. ನಿಯಮಿತ ಕಾಲದಲ್ಲಿ ಕಣ್ಣಿನ ತಪಾಸಣೆ ಮಾಡಿಸುವುದರಿಂದ ಗ್ಲುಕೊಮಾವನ್ನು ತಡೆಗಟ್ಟಬಹುದು. ಒಂದು ಸಲ ಕಾಯಿಲೆ ಪತ್ತೆಯಾದಲ್ಲಿ ಚಿಕಿತ್ಸೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಹೆಚ್ಚು ಅಪಾಯದ ಗುಂಪು
ಗ್ಲುಕೊಮಾ ಯಾವ ಕಣ್ಣಿಗೂ ಬರಬಹುದು. ಈ ಕೆಳಗಿನ ಅಂಶಗಳಲ್ಲಿ ಅದನ್ನು ಹೆಚ್ಚಾಗಿ ಕಾಣಬಹುದು.
1. 40ಕ್ಕಿಂತ ಹೆಚ್ಚು ವಯಸ್ಸಾದವರಲ್ಲಿ
2. ಕಣ್ಣಿನ ಒತ್ತಡ ಜಾಸ್ತಿ ಇದ್ದವರಲ್ಲಿ
3. ವಂಶ ಪಾರಂಪರ್ಯವಾಗಿ
4. ಸಮೀಪ ದೃಷ್ಟಿ ದೋಷ ಇರುವವರಲ್ಲಿ
5. ಮಧುಮೇಹ ಕಾಯಿಲೆ ಇರುವವರಲ್ಲಿ
6. ಧೂಮಪಾನ ಮಾಡುವವರಲ್ಲಿ

ಗ್ಲುಕೊಮಾ ಹೇಗೆ
ಕಂಡುಹಿಡಿಯಲಾಗುತ್ತದೆ?
ಈ ಕೆಳಗಿನ ಪರೀಕ್ಷೆಗಳನ್ನು ಮಾಡಲಾಗುವುದು:
1. ಕಣ್ಣಿನ ಗುಡ್ಡೆಯ ಒತ್ತಡದ ಅಳತೆಯನ್ನು ಮಾಡಲಾಗುವುದು
2. ಕಣ್ಣಿನ ನರದ ಹಾನಿಯನ್ನು ಲೆನ್ಸ್‌ಗಳಿಂದ ಪರೀಕ್ಷೆ ಮಾಡಲಾಗುವುದು
3. ಗೋನಿಯೋಸ್ಕೋಪಿ
4. ದೃಷ್ಟಿಯ ವಲಯ (ವಿಷುವಲ್‌ ಫೀಲ್ಡ್‌) ಪರೀಕ್ಷೆಯನ್ನು ಮಾಡಲಾಗುವುದು
5. ಕಣ್ಣಿನ ನರದ ಮತ್ತು ಪಾರಪಟಲದ ಪರೀಕ್ಷೆಯನ್ನು ಮಾಡಲಾಗುವುದು (ಒಸಿಟಿ)

ಗ್ಲುಕೊಮಾದ ವಿಧಗಳು
ತೆರೆದ ಕೋನದ ಗ್ಲುಕೊಮಾ (ಓಪನ್‌ ಆ್ಯಂಗಲ್‌ ಗ್ಲುಕೊಮಾ)
-ಸಾಮಾನ್ಯವಾಗಿ ಗ್ಲುಕೊಮಾದ ಯಾವುದೇ ಲಕ್ಷಣಗಳು ರೋಗಿಗೆ ತಿಳಿಯುವುದಿಲ್ಲ. ಆದರೂ ಚಿಕಿತ್ಸೆ ಮಾಡಿಸಿಕೊಳ್ಳದಿದ್ದರೆ ಕಣ್ಣಿನ ದೃಷ್ಟಿ ಶಾಶ್ವತವಾಗಿ ಕಳೆದುಕೊಳ್ಳಬೇಕಾಗುತ್ತದೆ. ಡ್ರಾಪ್ಸ್‌ ಮುಖಾಂತರ ಕಣ್ಣಿನ ಒತ್ತಡವನ್ನು ನಿಯಂತ್ರಣದಲ್ಲಿಡಬಹುದು.
-ಶಸ್ತ್ರಚಿಕಿತ್ಸೆ ಲಭ್ಯವಿರುವ ಮತ್ತೂಂದು ಚಿಕಿತ್ಸಾ ವಿಧಾನವಾಗಿದೆ.

ಮುಚ್ಚಿದ ಕೋನದ ಗ್ಲುಕೊಮಾ (ಆ್ಯಂಗಲ್‌ ಕ್ಲೋಶರ್‌ ಗ್ಲುಕೊಮಾ)
-ಮುಚ್ಚಿದ ಕೋನದ ಗ್ಲುಕೊಮಾದಿಂದ ಕಣ್ಣಿನ ಒತ್ತಡ ಹೆಚ್ಚುತ್ತದೆ ಮತ್ತು ನೋವು, ಕಾಮನ ಬಿಲ್ಲಿನ ಬಣ್ಣ ಕಾಣಿಸಿಕೊಳ್ಳಬಹುದು.
-ವಾಂತಿ ಬರಬಹುದು. ಇದಕ್ಕೆ ಲೇಸರ್‌ ಚಿಕಿತ್ಸೆ ಮಾಡಿಸಿಕೊಳ್ಳಬೇಕು.ಕಂಜೆನೈಟಲ್‌ ಗ್ಲುಕೊಮಾ
-ಕೆಲವು ಮಕ್ಕಳಿಗೆ ಹುಟ್ಟುವಾಗಲೇ ಕಣ್ಣಿನ ಒತ್ತಡ ಜಾಸ್ತಿ ಇರಬಹುದು. ಅದನ್ನು ಶಸ್ತ್ರಚಿಕಿತ್ಸೆಯ ಮುಖಾಂತರವೇ ನಿಯಂತ್ರಣಗೊಳಿಸಬೇಕಾಗುತ್ತದೆ.ಸೆಕೆಂಡರಿ ಗ್ಲುಕೊಮಾ
-ಕಣ್ಣಿಗೆ ಪೆಟ್ಟಾಗುವುದು, ಕೆಲವು ಔಷಧಗಳಿಂದ (ಸಾಮಾನ್ಯವಾಗಿ ಸ್ಟಿರಾಯ್ಡ್), ಗಡ್ಡೆ ಇವುಗಳಿಂದ ಕಣ್ಣಿನ ಒತ್ತಡ ಜಾಸ್ತಿಯಾಗಬಹುದು.

ಗ್ಲುಕೊಮಾದಲ್ಲಿ “ಮಾಡು’ ಮತ್ತು “ಮಾಡಬಾರದು’

ಮಾಡು 
– ಗ್ಲುಕೊಮಾ ಲಕ್ಷಣರಹಿತವಾಗಿದೆ. ನೀವು 40 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ ಗ್ಲುಕೊಮಾ ತಪಾಸಣೆ ಮಾಡಿಸಿಕೊಳ್ಳಿ.
– ವೈದ್ಯರ ಸಲಹೆಯಂತೆ ನಿಯಮಿತವಾಗಿ ಔಷಧಗಳನ್ನೂ ಬಳಸಿ.
– ವೈದ್ಯರನ್ನು ಭೇಟಿಯಾಗುವ ದಿನ ನೀವು ಕಣ್ಣಿಗೆ ಡ್ರಾಪ್ಸ್‌ (ಹನಿ)ಗಳನ್ನು ಬಳಸಬೇಕು.

ಮಾಡಬಾರದು 
– ಅಲರ್ಜಿಗೆ ವೈದ್ಯರ ಸೂಚನೆಯಿಲ್ಲದೆ ಔಷಧ (ಸ್ಟಿರಾಯ್ಡ) ತೆಗೆದುಕೊಳ್ಳಬೇಡಿ.
– ಕಾಲ ಕಾಲಕ್ಕೆ ವೈದ್ಯರನ್ನು ಭೇಟಿಯಾಗಿ ಕಣ್ಣಿನ ತಪಾಸಣೆ ಮಾಡುವುದನ್ನು ತಪ್ಪಿಸಬೇಡಿ.

ಡಾ| ನೀತಾ ಕೆ.ಐ.ಆರ್‌.
ಅಸಿಸ್ಟೆಂಟ್‌ ಪ್ರೊಫೆಸರ್‌,
ಓಫ‌¤ಮಾಲಜಿ ವಿಭಾಗ,
ಕೆಎಂಸಿ ಆಸ್ಪತ್ರೆ, ಮಣಿಪಾಲ

ಟಾಪ್ ನ್ಯೂಸ್

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Glanders infection: ಗ್ಲ್ಯಾಂಡರ್ಸ್‌ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ

Glanders infection: ಗ್ಲ್ಯಾಂಡರ್ಸ್‌ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ

Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ

Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.