ಕರಾವಳಿ ಮೀನುಗಾರಿಕೆಯ ಚಿತ್ರ ಬಿಡಿಸಿ ವಿಶೇಷ ಜಾಗೃತಿ ಮೂಡಿಸಿದ ಫಿಕ್ಸೆನ್ಸಿಲ್ ಕಲಾವಿದರ ತಂಡ
Team Udayavani, Sep 29, 2020, 5:08 PM IST
ಮಹಾನಗರ: ಕರಾವಳಿಯ ಪ್ರಮುಖ ಜೀವನಾಧಾರವಾಗಿರುವ ಮೀನುಗಾರಿಕೆಯನ್ನು ಪ್ರೋತ್ಸಾಹಿಸುವ ನೆಲೆಯಲ್ಲಿ ಮಂಗಳೂರಿನ “ಫಿಕ್ಸೆನ್ಸಿಲ್ ಚಿತ್ರಕಲಾವಿದರ ತಂಡ’ವು ಉರ್ವ ಮಾರುಕಟ್ಟೆ ಬಳಿಯ ಗೋಡೆಯಲ್ಲಿ ಮೀನು ಮಾರುವ ಮಹಿಳೆಯೊಬ್ಬರ ಚಿತ್ರ ಬಿಡಿಸುವ ಮೂಲಕ ವಿಶೇಷ ಜಾಗೃತಿ ಮೂಡಿಸಿದ್ದಾರೆ.
ಕಲಾವಿದರಾದ ವಿನೋದ್ ಚಿಲಿಂಬಿ ಅವರ ನೇತೃತ್ವದಲ್ಲಿ ಯುವ ಕಲಾವಿದರಾದ ಪೃಥ್ವೀರಾಜ್ ಮರೋಳಿ ಜಯನಗರ, ಅಜೀಶ್ ಸಜಿಪಮೂಡ, ಅಭಿಜಿತ್ ಬಿಜೈ ಹಾಗೂ ನಿತೇಶ್ ಕನ್ಯಾಡಿ ಅವರು ಚಿತ್ರ ಬಿಡಿಸಿದ್ದಾರೆ.
ಇದೇ ಚಿತ್ರತಂಡದಿಂದ ಇತ್ತೀಚೆಗೆ ಚಿಲಿಂಬಿ ಮಹಾದ್ವಾರದ ಬಳಿಯ ವೃದ್ಧರ ಮನೆಯ ಗೋಡೆಯಲ್ಲಿ ಅಜ್ಜನ ಚಿತ್ರ ಬಿಡಿಸಲಾಗಿತ್ತು.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ