ಅಜ್ಜಿ ಅಂದ್ರೆ ಸುಮ್ನೇನಾ?


Team Udayavani, Jun 17, 2020, 4:39 AM IST

ajji-sumne

ಒಂದು ನಾಣ್ಯಕ್ಕೆ ಎರಡು ಮುಖ ಇರುವಂತೆ, ವರ್ಕ್‌ ಫ್ರಮ್‌ ಹೋಂಗೆ ಕೂಡಾ ಎರಡು ಮುಖ ಇದೆ. ಮನೇಲಿ ಅಮ್ಮ, “ಅಯ್ಯೋ ನನ್ನ ಮಗಳು ತುಂಬಾ ಕೆಲಸ ಮಾಡ್ತಾಳೆ’ ಅಂತ, ಬೇರೆ ಯಾವ ಕೆಲಸವನ್ನೂ ಹೇಳದೆ, ಕೂತಲ್ಲಿಗೇ ಊಟ-  ತಿಂಡಿ ಸಪ್ಲೈ ಮಾಡ್ತಾರೆ ಅನ್ನೋದು ಒಂದು ಮುಖ ವಾದರೆ, ಇನ್ನೊಂದು ಬಾಸ್‌ಗೆ ಕಾಣುವ ಮುಖ. ಬಾಸ್‌ ಪ್ರಕಾರ, ಆಫೀಸ್‌ ಟು ಮನೆ ಟ್ರಾವೆಲ್‌ ಮಾಡುವ 2 ಗಂಟೆ ಉಳಿಯುತ್ತದಲ್ಲ, ಆ ಸಮಯದಲ್ಲೂ ನಾವು ಕೆಲಸ ಮಾಡಬೇಕು.

“ಇದೊಂದು ಕೆಲಸ ಮುಗ್ಸಿ ಲಾಗ್‌ ಔಟ್‌ ಮಾಡಿ…’ ಎಂದು ಬಿಡ್ತಾರೆ. ಆ “ಇದೊಂದು ಕೆಲಸ’ ಮಾಡುವಾಗ ರಾತ್ರಿ ಒಂಬತ್ತರ ಮೇಲಾಗಿರುತ್ತದೆ. ಆಫೀಸ್‌ನಲ್ಲಿ ಇರುವಾಗ ಆಗಿದ್ದರೆ, ಸಂಜೆ ಏಳಾಗುತ್ತಿದ್ದಂತೆ ಕುರ್ಚಿಯಿಂದ ಎದ್ದು  ಬಿಡಬಹುದಿತ್ತು. ಹೀಗೆ, ವರ್ಕ್‌ ಫ್ರಮ್‌ ಹೋಂನ ಲಾಭ ನಷ್ಟಗಳೆ ರಡನ್ನೂ ಅನುಭವಿಸುತ್ತಾ ಕೆಲಸ ಮಾಡುತ್ತಿರುವ ನನಗೆ, ಸಾಥ್‌ ನೀಡುತ್ತಿರುವುದು ನಮ್ಮಜ್ಜಿ. ಹೂ ಕಟ್ಟುತ್ತಲೋ, ಎಲೆ ಅಡಿಕೆ ಜಗಿಯುತ್ತಲೋ, ಹೂ ಬತ್ತಿ  ಹೊಸೆಯುತ್ತಲೋ ಕುಳಿತಿರುತ್ತಾರೆ.

ಮೊನ್ನೆ ಹೀಗಾಯ್ತು- ನಾನು ಆಫೀಸ್‌ ಕೆಲಸದ ಮಧ್ಯೆ, ಯು ಟ್ಯೂಬ್‌ನಲ್ಲಿ ಏನೋ ನೋಡುತ್ತಲಿದ್ದೆ. ಪಕ್ಕ ಕೂತಿದ್ದ ಅಜ್ಜಿ- “ಏನ್‌ ನೋಡ್ತಿದ್ದೀಯ?’ ಅಂತ ಇಣುಕಿದರು. ಲಾಕ್‌ಡೌನ್‌ ಸಮಯದಲ್ಲಿ ಬಾಲಿವುಡ್‌ ಸೆಲೆಬ್ರಿಟಿಗಳು ಏನೇನು ಕೆಲಸ  ಮಾಡುತ್ತಿದ್ದಾರೆ ಅನ್ನೋ ವಿಡಿಯೋ ನೋಡುತ್ತಿದ್ದೆ. “ನೋಡಜ್ಜಿ, ಇವರೆಲ್ಲ ಸಿನಿಮಾ ಹೀರೋಯಿನ್‌ಗಳು. ಈಗ ನೋಡು, ಹೇಗೆ ಮನೆಗೆಲಸ  ಮಾಡ್ತಿದ್ದಾರೆ’ ಅಂತ ತೋರಿಸಿದೆ. ಅದರಲ್ಲೇನಿದೆ ಮಹಾ ಎನ್ನುವಂತೆ ಮುಖ ಮಾಡಿದ ಅಜ್ಜಿ, ವಿಡಿಯೋ ನೋಡಲು ಆಸಕ್ತಿ ತೋರಿಸಲಿಲ್ಲ. ಆದರೆ, ಅಜ್ಜಿಗೆ ಆ ವಿಡಿಯೋ ಬಗ್ಗೆ ಹೇಳಿ ತಪ್ಪು ಮಾಡಿದೆ ಅಂತ ಎರಡು ದಿನದ ನಂತರ ಅರಿವಾಯ್ತು.

ಅವತ್ತು ಭಾನುವಾರ. ಆಫೀಸ್‌ ಕೆಲಸ  ಇರಲಿಲ್ಲ. ಪಾಪ, ಅಮ್ಮ ಅವತ್ತೂ ನನಗೆ ಯಾವ ಕೆಲಸವನ್ನೂ ಕೊಡದೆ ತಾವೇ ಎಲ್ಲಾ ಕೆಲಸ ಮಾಡುತ್ತಿದ್ದರು. ಅದನ್ನು ಗಮನಿಸಿದ ಅಜ್ಜಿ- “ಯಾಕವ್ವಾ, ಹೀರೋಯಿನ್‌ಗಳೆಲ್ಲ ಮನೆಕೆಲಸ ಮಾಡ್ತಾ ಇದ್ದಾರೆ ಅಂತ ಮೊನ್ನೆ ತೋರ್ಸಿದ್ದೆ.  ನೀನ್ಯಾವ ಹೀರೋಯಿನ್‌ಗೆ ಕಡಿಮೆ ಇದ್ದೀ. ತಗಾ ಕಸಬರಿಕೆ. ಮೂಲೆ ಮೂಲೆ ಗುಡಿಸ್ಕೊಂಡು ಬಾ ನೋಡೋಣ…’ ಅಂತ ಕಾಲೆಳೆದು, ಕೈಗೆ ಪೊರಕೆ ಕೊಡಬೇಕೇ? ಇನ್ಮುಂದೆ ಅಜ್ಜಿಗೆ ಏನೂ ತೋರಿಸುವುದಿಲ್ಲ ಅಂತ ಅವತ್ತೇ ನಿರ್ಧಾರ  ಮಾಡಿದೆ.

* ಅಪರ್ಣಾ ಪಿ.

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.