8 ವರ್ಷದ ಮೊಮ್ಮಗನನ್ನು ಸರಪಳಿಯಲ್ಲಿ ಕಟ್ಟಿ ಥಳಿಸಿದ ಅಜ್ಜಿಯ ಬಂಧನ
Team Udayavani, Aug 1, 2020, 4:10 PM IST
ಲುಧಿಯಾನಾ: ತನ್ನ ಮಗಳ ಮಗ 8 ವರ್ಷದ ಮೊಮ್ಮಗನನ್ನು ಕಬ್ಬಿಣದ ಸರಪಳಿ ಬಳಸಿ ಕಟ್ಟಿ ಹಾಕಿ ನಿರ್ದಯವಾಗಿ ಥಳಿಸಿದ ಆರೋಪದ ಮೇರೆಗೆ ಅಜ್ಜಿಯನ್ನು ಬಂಧಿಸಿದ ಘಟನೆ ಲುಧಿಯಾನಾದಲ್ಲಿ ಸಂಭವಿಸಿದೆ.
ಮಗುವಿನ ಹೆತ್ತವರು ವಿಚ್ಛೇದನಗೊಳಪಟ್ಟು, ತಂದೆ ಮಕ್ಕಳನ್ನು ಬಿಟ್ಟು ಹೋಗಿದ್ದರು. ಮಗುವಿನ ತಾಯಿ ಕೆಲವು ತಿಂಗಳ ಹಿಂದೆ ಉತ್ತರ ಪ್ರದೇಶದ ತಮ್ಮ ಗ್ರಾಮದಲ್ಲಿ ಆರೋಗ್ಯ ಸಮಸ್ಯೆಯಿಂದಾಗಿ ಮೃತಪಟ್ಟಿದ್ದರು. ಅನಂತರ ಆ ಮಗು ತನ್ನ ಸಹೋದರಿಯೊಂದಿಗೆ ಲುಧಿಯಾನಾದಲ್ಲಿರುವ ಅಜ್ಜಿ ಮನೆಯಲ್ಲಿ ವಾಸವಿದ್ದರು.
8 ವರ್ಷದ ಮೊಮ್ಮಗನಿಗೆ ಅಜ್ಜಿ ಪ್ರತಿದಿನವೂ ಹೊಡೆಯುತ್ತಿದ್ದರು. ಜುಲೈ 28ರ ರಾತ್ರಿಯಂತೂ ಆ ಮಗುವಿನ ಕಾಲುಗಳನ್ನು ಕಬ್ಬಿಣದ ಸರಪಳಿಯಿಂದ ಕಟ್ಟಿ ಹಾಕಿ ಕಬ್ಬಿಣದ ರಾಡ್ ಮತ್ತು ಮರದ ಕೋಲಿನಿಂದ ಥಳಿಸಿದ್ದಾಳೆ. ಬಾಲಕನ ಅಳು ಕೇಳಿ ಸ್ಥಳೀಯರು ಬಂದು ಬಿಡಿಸಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಸಂದರ್ಭ ಅಜ್ಜಿ ಮೊಮ್ಮಗಳೊಂದಿಗೆ ತಪ್ಪಿಸಿಕೊಂಡಿದ್ದಾಳೆ ಎಂದು ಸ್ಥಳೀಯರಾದ ಬಲ್ವಿಂದರ್ ಸಿಂಗ್ ಕೌರ್ ದೂರಿನಲ್ಲಿ ತಿಳಿಸಿದ್ದರು.
ಅಜ್ಜಿಯ ಥಳಿತದಿಂದ ಮೊಮ್ಮಗನ ಕೈ ಮುರಿದಿದ್ದು, ಕಾಲುಗಳಲ್ಲೂ ರಕ್ತಸ್ರಾವವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಪೋಲೀಸರ ಕಾರ್ಯಾಚರಣೆಯಿಂದ ಅಜ್ಜಿಯನ್ನು ವಶಕ್ಕೆ ಪಡೆದ ಪೊಲೀಸರು, ಮೊಮ್ಮಗ ತುಂಬ ತುಂಟನಾಗಿದ್ದ, ಮನೆಯಿಂದ ಓಡಿಹೋದರೆ ತುಂಬ ದಿನಗಳವರೆಗೆ ಹಿಂದಿರುಗುತ್ತಿರಲಿಲ್ಲ ಎಂದು ಅಜ್ಜಿ ಥಳಿಸಿದ್ದಕ್ಕೆ ಕಾರಣ ಹೇಳಿದ್ದಾರೆ ಎಂದು ಲುಧಿಯಾನಾದ ಪೊಲೀಸ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ. ಇದೀಗ 55 ವರ್ಷದ ಅಜ್ಜಿಯನ್ನು ಪೊಲೀಸರು ಬಂಧಿಸಿ ಮಕ್ಕಳ ಆರೈಕೆ ಮತ್ತು ರಕ್ಷಣೆ 74ರ ಸೆಕ್ಷನ್ನಂತೆ 323, 324 ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!