ಮಿಡತೆ ಹಿಂಡು ಪತ್ತೆ, ಆತಂಕ
Team Udayavani, May 31, 2020, 6:28 AM IST
ಕಲ್ಲುಗುಡ್ಡೆ: ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾ. ಪಂ. ವ್ಯಾಪ್ತಿಯ ರೆಂಜಿಲಾಡಿ ಹೇರ ಎಂಬಲ್ಲಿ ಕೃಷಿಕರೊಬ್ಬರ ತೋಟದಲ್ಲಿ ಮಿಡತೆ ಗುಂಪೊಂದು ಶುಕ್ರವಾರ ಸಂಜೆ ಹೊತ್ತು ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ.
ಪಾಕಿಸ್ಥಾನ ಕಡೆಯಿಂದ ಬಂದಿ ರುವ ಕೋಟ್ಯಂತರ ಮಿಡತೆಗಳ ಹಿಂಡು ಈಗಾಗಲೇ ಉತ್ತರ ಭಾರತದ ಹಲವು ಕಡೆಗಳು ಮತ್ತು ಉತ್ತರ ಕರ್ನಾಟಕದ ಕೆಲವೆಡೆಗಳಲ್ಲಿ ಹಾನಿ ಉಂಟು ಮಾಡುತ್ತಿದೆ. ಇದು ಕರಾವಳಿ ಮತ್ತು ಒಳನಾಡಿಗೂ ದಾಂಗುಡಿ ಇರಿಸಿದೆಯೇ ಎಂಬ ಕಳವಳ ವ್ಯಕ್ತವಾಗಿದೆ.
ಕೊಣಾಜೆ ಕಾಡಂಚಿನ ಪ್ರದೇಶದ ಹೇರ ಪ್ರದೇಶದ ಕೃಷಿಕ ಆನಂದ ಅವರ ತೋಟದ ಬಳಿ ಮರವೊಂದ ರಲ್ಲಿ ಈ ಮಿಡತೆ ಹಿಂಡು ಕಾಣಿಸಿ ಕೊಂಡಿದೆ. ರಾತ್ರಿಯ ವರೆಗೂ ಕಾಣಿಸಿಕೊಂಡಿದ್ದು, ಹಗಲು ಹೊತ್ತು ಗೋಚ ರಿಸಿಲ್ಲ ಎಂದು ಆನಂದ ಅವರು ಹೇಳಿದ್ದಾರೆ. ಶನಿವಾರ ಬೆಳಗ್ಗೆ ಇದೇ ಸ್ಥಳದಲ್ಲಿ ಹಕ್ಕಿಗಳು ಹಾರಾಡುತ್ತಿದ್ದವು, ಮಿಡತೆಗಳು ಇರಲಿಲ್ಲ ಎಂದೂ ಅವರು ತಿಳಿಸಿದ್ದಾರೆ.
ಬೆಳ್ತಂಗಡಿಯಲ್ಲೂ ಪತ್ತೆ
ಬೆಳ್ತಂಗಡಿ ತಾ|ನ ಕರಂಬಾರು ಗ್ರಾಮದ ದರ್ಬೆ ನಿವಾಸಿ ಅನೀಶ್ಅವರ ರಬ್ಬರ್ ತೋಟದಲ್ಲಿ, ಶಿರ್ಲಾಲು ಕಿಶೋರ್ ಮ್ಯಾಥ್ಯೂ ಅವರ ರಬ್ಬರ್ ತೋಟದಲ್ಲೂ ಮಿಡತೆಗಳು ಕಾಣಿಸಿಕೊಂಡಿವೆ. ಶಿರ್ಲಾಲು ಪ್ರದೇಶದಲ್ಲಿಅತೀ ಹೆಚ್ಚು ತರಕಾರಿ ಬೆಳೆ ಬೆಳೆಯ ಲಾಗುತ್ತಿದ್ದು, ಮಿಡತೆಗಳಿಂದಾಗಿ ಕೃಷಿಕರು ಆತಂಕದಲ್ಲಿದ್ದಾರೆ.
ನಮ್ಮ ಪ್ರದೇಶದಲ್ಲಿ ಮಿಡತೆ ಹಿಂಡು ಕಾಣಿಸಿಕೊಂಡಿದ್ದು, ಆತಂಕ ಉಂಟಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು.
– ವಿಶ್ವನಾಥ ಹೇರ ರೆಂಜಿಲಾಡಿ, ಸ್ಥಳೀಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
Dharmasthala; ಕೆಎಸ್ಸಾರ್ಟಿಸಿ ಬಸ್ನಡಿ ಸಿಲುಕಿ ಮಹಿಳೆ ಸಾವು
ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್ ವಶಕ್ಕೆ
Aranthodu ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ