ಗೋವಾದಲ್ಲಿರುವ ಕನ್ನಡ ಕೂಲಿ ಕಾರ್ಮಿಕರಿಗೆ ಗೋವಾ ಕನ್ನಡ ಮಹಾ ಸಂಘದಿಂದ ಕ್ಷೌರ ವ್ಯವಸ್ಥೆ
Team Udayavani, Apr 16, 2020, 4:29 PM IST
ಪಣಜಿ: ಗೋವಾದ ಬಿಚೋಲಿಯ ಲೇಬರ್ ಕ್ಯಾಂಪ್ನಲ್ಲಿರುವ ಕನ್ನಡಿಗ ಕೂಲಿ ಕಾರ್ಮಿಕರಿಗೆ ಅಖಿಲ ಗೋವಾ ಕನ್ನಡ ಮಹಾಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಪೂರ್ಣಗೊಳಿಸಲಾಗುತ್ತಿದೆ. ಗುರುವಾರ ಈ ಕನ್ನಡಿಗರಿಗೆ ಕ್ಷೌರಿಕರನ್ನು ಕರೆಯಿಸಿ ಅಗತ್ಯವಿದ್ದವರಿಗೆ ಕ್ಷೌರ ಮಾಡಿಸಲು ವ್ಯವಸ್ಥೆ ಕಲ್ಪಿಸಲಾಯಿತು.
ಲಾಕ್ಡೌನ್ನಿಂದಾಗಿ ಗೋವಾದಲ್ಲಿ ಸಿಲುಕಿಕೊಂಡಿರುವ ಕೂಲಿ ಕಾರ್ಮಿಕರಿಗೆ ಗೋವಾ ಸರ್ಕಾರ ರಾಜ್ಯದಲ್ಲಿ 10 ಲೇಬರ್ ಕ್ಯಾಂಪ್ಗಳಲ್ಲಿ ವಾಸ್ತವ್ಯ ಮತ್ತು ಊಟದ ವ್ಯವಸ್ಥೆ ಕಲ್ಪಿಸಿದೆ. ಆದರೆ ಬಿಚೋಲಿಯ ಲೇಬರ್ ಕ್ಯಾಂಪ್ನಲ್ಲಿರುವ ಸುಮಾರು 150 ಕನ್ನಡಿಗ ಕೂಲಿ ಕಾರ್ಮಿಕರು ತಮ್ಮನ್ನು ಊರಿಗೆ ಕಳುಹಿಸಿ ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂಬುದಾಗಿ ಪಟ್ಟು ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ಧಾವಿಸಿ ಬಂದ ಅಖಿಲಗೋವಾ ಕನ್ನಡ ಮಹಾಸಂಘ ಈ ಕನ್ನಡಿಗರ ಎಲ್ಲ ಬೇಡಿಕೆಯನ್ನು ಇಲ್ಲಿಯೇ ಈಡೇರಿಸುವುದಾಗಿ ಭರವಸೆ ನೀಡಿತ್ತು. ಅದರಂತೆಯೇ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ್(ರೆಡ್ಡಿ) ತಮ್ಮ ಮನೆಯಿಂದಲೇ ಈ ಕನ್ನಡಿಗರಿಗೆ ಪ್ರತಿದಿನ ಊಟದ ವ್ಯವಸ್ಥೆ ಕಲ್ಪಿಸಿದ್ದಾರೆ. ಇದೀಗ ಇವರಿಗೆ ಹೇರ್ಕಟಿಂಗ್ ಮಾಡಿಸಿಕೊಳ್ಳಲು ಕೂಡ ವ್ಯವಸ್ಥೆ ಕಲ್ಪಿಸಿದ್ದಾರೆ.
ಗೋವಾ ಸರ್ಕಾರವು ಈ ಲೇಬರ್ ಕ್ಯಾಂಪ್ನಲ್ಲಿರುವ ಕನ್ನಡಿಗರಿಗೆ ಊಟದ ವ್ಯವಸ್ಥೆ ಕಲ್ಪಿಸಿತ್ತಾದರೂ ಇವರಿಗೆ ಆ ಊಟ ಸೇರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು. ಇದೀಗ ಈ ಕನ್ನಡಿಗರ ಎಲ್ಲ ಬೇಡಿಕೆಯನ್ನು ಪೂರೈಸಲಾಗುತ್ತಿದ್ದು, ಇವರಿಗೆ ಅಡಿಕೆ-ಎಲೆಯನ್ನು ಕೂಡ ವ್ಯವಸ್ಥೆ ಮಾಡಲಾಗಿದೆ.
ಬಿಚೋಲಿ ಲೇಬರ್ ಕ್ಯಾಂಪ್ನಲ್ಲಿ ಕಲಬುರ್ಗಿಯ ಚಿಂಚೋಳಿ, ಕೊಪ್ಪಳದ ಕುಷ್ಠಗಿ, ವಿಜಯಪುರ ಹೀಗೆ ಉತ್ತರ ಕರ್ನಾಟಕದ ವಿವಿದೆಡೆಯ ಸುಮಾರು 150 ಜನ ಕೂಲಿ ಕಾರ್ಮಿಕರು ತಮ್ಮ ಊರಿಗೆ ತೆರಳಲಾರದಿರುವ ಹಿನ್ನೆಲೆಯಲ್ಲಿ ಗೋವಾ ಸರ್ಕಾರ ಇವರಿಗೆ ಬಿಚೋಲಿಯ ಗ್ವಾಟೆ ಕಾಲೇಜಿನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಿದೆ. ಸದ್ಯ ಈ ಕನ್ನಡಿಗರಿಗೆ ಬೆಳಗಿನ ಉಪಹಾರವನ್ನು ಗೋವಾ ಸರ್ಕಾರ ನೀಡುತ್ತಿದ್ದು, ಮಧ್ಯಾನ್ಹ ಮತ್ತು ಸಂಜೆಯ ಊಟಕ್ಕೆ ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಹನುಮಂತಪ್ಪ ಶಿರೂರ್(ರೆಡ್ಡಿ) ತಮ್ಮ ಮನೆಯಿಂದಲೇ ವ್ಯವಸ್ಥೆ ಮಾಡಿದ್ದಾರೆ. ಇಷ್ಟೇ ಅಲ್ಲದೆಯೇ ಪ್ರತಿದಿನ ಈ ಕನ್ನಡಿಗರ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
MUST WATCH
ಹೊಸ ಸೇರ್ಪಡೆ
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ