ಲಂಚ ಪಡೆದಿದ್ದರೆ ರಾಜಕೀಯ ನಿವೃತ್ತಿ; ಹಾಲಪ್ಪ ಹರತಾಳು ಸವಾಲು
Team Udayavani, Aug 23, 2021, 4:34 PM IST
ಸಾಗರ: ಓಸಿ ಮಟ್ಕಾ, ಗಾಂಜಾ ಮತ್ತು ಮರಳು ಸಾಗಾಣಿಕೆಯಲ್ಲಿ ನಾನು ಅಥವಾ ನನ್ನ ಹಿಂಬಾಲಕರು, ಪಕ್ಷದ ಕಾರ್ಯಕರ್ತರು ಒಂದು ರೂಪಾಯಿ ಲಂಚ ಪಡೆದಿದ್ದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ಅದಕ್ಕೆ ಅವರು ಸಾಕ್ಷ್ಯ ಕೊಡುವುದು ಬೇಡ. ಆತ್ಮಸಾಕ್ಷಿಯ ಆಧಾರದಲ್ಲಿ ಖಾಸಗಿಯಾಗಿ ಹೇಳಿದರೂ ಸಾಕು ಎಂದು ಶಾಸಕ, ಎಂಎಸ್ಐಎಲ್ ಅಧ್ಯಕ್ಷ ಹಾಲಪ್ಪ ಹರತಾಳು ಸವಾಲು ಹಾಕಿದರು.
ಸೋಮವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ನಾನು ಪೊಲೀಸ್ ಇಲಾಖೆಯಲ್ಲಿ ದುಡ್ಡು ತೆಗೆದುಕೊಂಡಿದ್ದೇನೆ ಎಂದರೆ ಬಾಯಲ್ಲಿ ಹುಳ ಬೀಳುತ್ತದೆ. ಪೊಲೀಸ್ ಇಲಾಖೆಯಲ್ಲಿ ಅವರದ್ದೇ ಸಂಬಂಧಿಕರು, ಸ್ನೇಹಿತರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಿಂದೆಲ್ಲ ಲಂಚ ಪಡೆದಿರುವವರಿಗೆ ಇಂತಹ ಅನುಮಾನಗಳು ಹುಟ್ಟುವುದು ಸಹಜ. ಪೊಲೀಸ್, ರೆವಿನ್ಯೂ ಇಲಾಖೆಯವರಿಂದ ವರ್ಗಾವಣೆಯ ವ್ಯವಹಾರವನ್ನೂ ಮಾಡಿ ಹಣ ಪಡೆದಿಲ್ಲ ಎಂದು ಪರೋಕ್ಷವಾಗಿ ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರನ್ನು ಛೇಡಿಸಿದರು.
ಇದನ್ನೂ ಓದಿ :ಕಣಕುಂಬಿ, ಆಲಮಟ್ಟಿ, ತಲಕಾಡು ಹಾಗೂ ಸಕಲೇಶಪುರದಿಂದ ಜೆಡಿಎಸ್ ಪಾದಯಾತ್ರೆ: ಎಚ್ ಡಿಕೆ
ಓಸಿ, ಮಟ್ಕಾ, ಲಿಕ್ಕರ್, ಮರಳು, ಗಾಂಜಾದವರ ಹಣ ಪಡೆಯುವುದು ಎಂದರೆ ಹಣ ಮಲದಲ್ಲಿರುವ ಹಣ ಪಡೆದಂತೆ. ಓಸಿ. ಮತ್ತು ಗಾಂಜಾವನ್ನು ನೂರಕ್ಕೆ ನೂರರಷ್ಟು ನಿರ್ಮೂಲನೆಗೆ ಪೊಲೀಸರು ಮುಂದಾಗಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ