ರೈಲು ಮಾದರಿಯಲ್ಲಿ ಹಂಪಿ ಸ್ಮಾರಕ ವೀಕ್ಷಣೆ
Team Udayavani, Aug 4, 2021, 6:37 PM IST
ಹೊಸಪೇಟೆ: ಪ್ರವಾಸಿಗರು ಇನ್ನುಂದೆ ರೈಲಿನಲ್ಲಿ ಆಸೀನರಾದ ಅನುಭೂತಿಯೊಂದಿಗೆ ಹಂಪಿ ಐತಿಹಾಸಿಕ ಸ್ಮಾರಕಗಳ ವೀಕ್ಷಣೆ ಮಾಡಬಹುದು.
ಹೌದು! ಎರಡು ಬೋಗಿವುಳ್ಳ ಡೀಸೆಲ್ ರೈಲು ಮಾದರಿಯ ವಾಹನದಲ್ಲಿ ಕುಳಿತು ಪ್ರಸಿದ್ಧ ಸ್ಮಾರಕ ದರ್ಶನ ಪಡೆಯುವ ಭಾಗ್ಯ ಇದೀಗ ಪ್ರವಾಸಿಗರಿಗೆ ದೊರೆತಿದೆ. ಈ ಮೂಲಕ ಬಹುದಿನದ “ಹಂಪಿ ಆನ್ ವ್ಹೀಲ್ಸ್’ ಯೋಜನೆ ಸಾಕಾರಗೊಂಡಿದೆ.
ಹಂಪಿ ವಿಶ್ವ ಪರಂಪರೆ ಪ್ರದೇಶಾಭಿವೃದ್ಧಿ ನಿರ್ವಾಹಣಾ ಪ್ರಾಧಿಕಾರದೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಬೆಂಗಳೂರು ಮೂಲದ ಪ್ರಿವಲೆನ್ಸ್ ಗ್ರೀನ್ ಸಲ್ಯೂಶನ್ ಸಂಸ್ಥೆ ಎರಡು ಬೋಗಿವುಳ್ಳ ಡೀಸೆಲ್ ರೈಲನ್ನು ಹಂಪಿಯಲ್ಲಿ ಓಡಾಡಿಸುತ್ತಿದೆ.
ಸ್ಮಾರಕ ದರ್ಶನ: ಹಂಪಿ ಶ್ರೀವಿರೂಪಾಕ್ಷೇಶ್ವರ ದೇಗುಲದ ರಥಬೀದಿಯಿಂದ ಆರಂಭಗೊಳ್ಳುವ ಪ್ರಯಾಣವು ಎದುರು ಬಸವಣ್ಣ ಮಂಟಪ,
ಕಡಲೆ ಕಾಳು ಗಣಪ, ಸಾಸಿವೆ ಕಾಳು ಗಣಪ,ಶ್ರೀಕೃಷ್ಣ ದೇಗುಲ, ಬಡವಿ ಲಿಂಗ, ಉಗ್ರ ನರಸಿಂಹ, ಹಜಾರ ರಾಮ ದೇಗುಲ, ಉದ್ದಾನ
ವೀರಭದ್ರೇಶ್ವರ ದೇಗುಲ, ನೆಲಸ್ತರದ ಶಿವ ದೇಗುಲ, ಕಮಲ ಮಹಲ್, ಆನೆಲಾಯ,ಮಹಾನವಮಿ ದಿಬ್ಬ, ರಾಣಿಯರ ಸ್ನಾನಗೃಹದಿಂದ
ಗೆಜ್ಜಲ ಮಂಟಪದವರೆಗೆ ಸಾಗಲಿದೆ. ಗೆಜ್ಜಲ ಮಂಟಪದಿಂದ ವಿಜಯ ವಿಠಲ, ಕಲ್ಲಿನತೇರು, ಪುರಂದರದಾಸರ ಮಂಟಪಗಳನ್ನು ಬ್ಯಾಟರಿ
ಚಾಲಿತ ವಾಹನದಲ್ಲಿ ತೆರಳಿ ನೋಡುವ ವ್ಯವಸ್ಥೆ ಕೂಡ ಮಾಡಲಾಗಿದೆ. ಇದಕ್ಕಾಗಿ ಎರಡು ಬ್ಯಾಟರಿ ಚಾಲಿತ ವಾಹನಗಳನ್ನು ಕಾಯ್ದಿರಿಸಲಾಗಿದೆ.
ಇದನ್ನೂ ಓದಿ:ಜಿಲ್ಲಾದ್ಯಂತ ನೈಟ್ ಕರ್ಫ್ಯೂ ಜಾರಿ
ದರ ಎಷ್ಟು?
ಶ್ರೀ ವಿರೂಪಾಕ್ಷೇಶ್ವರ ರಥಬೀದಿಯಲ್ಲಿ ಟಿಕೆಟ್ ಕೌಂಟರ್ ತೆರೆಯಲಾಗಿದ್ದು, ಎರಡು ಬೋಗಿಯ ರೈಲಿನಲ್ಲಿ 20 ಜನರು ಕುಳಿತು ತೆರಳಬಹುದು. 18 ವರ್ಷ ಮೇಲ್ಪಟ್ಟವರಿಗೆ ತಲಾ ಒಬ್ಬರಿಗೆ 354 ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ. ಇನ್ನೂ 5 ವರ್ಷದೊಳಗಿನ ಮಕ್ಕಳು ಉಚಿತವಾಗಿ ಪ್ರಯಾಣಿಸಬಹುದು. 6 ವರ್ಷದಿಂದ 17 ವರ್ಷದ ಮಕ್ಕಳಿಗೆ ತಲಾ 177 ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ. ನಿತ್ಯ ಬೆಳಗ್ಗೆ 8 ಗಂಟೆಯಿಂದ ಆರಂಭಗೊಳ್ಳುವ ರೈಲು ಪ್ರಯಾಣ ಸಂಜೆ 6 ಗಂಟೆಗೆ ಕೊನೆಗೊಳ್ಳಲಿದೆ. ಜಮ್ಮು ಕಾಶ್ಮೀರದ ವೈಷ್ಣೋದೇವಿ ದೇಗುಲದ ದರ್ಶನಕ್ಕೆ ಇದೇ ಸಂಸ್ಥೆ ಭಕ್ತರಿಗೆ ರೈಲಿನ ವ್ಯವಸ್ಥೆ ಕಲ್ಪಿಸಿದೆ. ಇನ್ನೂ ಬೆಂಗಳೂರಿನ ಲಾಲ್ಬಾಗ್ನಲ್ಲೂ ಸದ್ಯದಲ್ಲೇ ಚುಕುಬುಕು ರೈಲಿನ ವ್ಯವಸ್ಥೆ ಮಾಡಲಿದೆ.ಈಗ ಹಂಪಿಯಲ್ಲಿ ಚುಕುಬುಕು ರೈಲಿನ ವ್ಯವಸ್ಥೆ ಕಲ್ಪಿಸಿದ್ದು, ಪ್ರವಾಸಿಗರು ಹರ್ಷಿತರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ayodhya Ram Mandir ದೇಶದಲ್ಲಿ ಧರ್ಮ ಜಾಗೃತಿ ಪರ್ವ: ಪೇಜಾವರ ಶ್ರೀ
BJP ರೈತಮೋರ್ಚಾ ರಾಜ್ಯಾಧ್ಯಕ್ಷ ಭವಿಷ್ಯವಾಣಿ;ಎಂಪಿ ಚುನಾವಣೆ ನಂತರ ಕಾಂಗ್ರೆಸ್ ದೇಶದಲ್ಲಿರೊಲ್ಲ
Hosapete: ಮಕರ ಸಂಕ್ರಾತಿ: ದಕ್ಷಿಣಕಾಶಿ ಹಂಪಿಗೆ ಪ್ರವಾಸಿಗರ ದಂಡು!
Hospet: ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ… ಲಾಡ್ಜ್ ಮಾಲೀಕ ಸೇರಿ ಇಬ್ಬರು ವಶಕ್ಕೆ
Ayodhya: ರಾಮಮಂದಿರ ಉದ್ಘಾಟನೆಗೆ ಕಾಂಗ್ರೆಸ್ ಬಹಿಷ್ಕಾರ: ಶ್ರೀರಾಮುಲು ಆಕ್ರೋಶ