ಭಾರಿ ಮಳೆಗೆ ನೆಲಕಚ್ಚಿದ ಮನೆಗಳು: ಬದುಕು ಬೀದಿಪಾಲು
Team Udayavani, Sep 30, 2020, 4:43 PM IST
ಕಲಾದಗಿ: ಉತ್ತರಿ ಹಾಗೂ ಹಸ್ತಾ ಮಳೆ ಸುರಿದು ರೈತರು ಬೆಳೆ ಹಾನಿ ನಷ್ಟ ಅನುಭವಿಸಿದ್ದಾರೆ. ಹೋಬಳಿ ವ್ಯಾಪ್ತಿಯಲ್ಲಿ ನಲವತ್ತಕ್ಕೂ ಹೆಚ್ಚು ಮನೆಗಳು ಬಿದ್ದು ಜನರು ಬೀದಿ ಬದುಕು ಸಾಗಿಸುವಂತೆ ಮಾಡಿದೆ. ಲಾಕ್ಡೌನ್ ನಿಂದ ಮಾರುಕಟ್ಟೆ ಸಿಗದೆ ನಷ್ಟ ಅನುಭವಿಸಿದ್ದ ರೈತನಿಗೆ ಮತ್ತೆ ಈಗ ಮುಂಗಾರು ಬೆಳೆ ಫಸಲು ಕಟಾವಿಗೆ ಬಂದಿದ್ದ ಸಂದರ್ಭದಲ್ಲಿ ಸತತ ಸುರಿದ ಮಳೆ ಬೆಳೆ ಹಾನಿಯನ್ನು ಉಂಟುಮಾಡಿ ಗಾಯದ ಮೇಲೆ ಬರೆ ಎಳೆದಿದೆ. ಜತೆಗೆ ಗ್ರಾಮೀಣ ಪ್ರದೇಶದಲ್ಲಿನ ಮಣ್ಣಿನ ಮನೆಗಳು ನೆಲಕಚ್ಚಿವೆ. ಹೋಬಳಿ ವ್ಯಾಪ್ತಿಯ ತುಳಸಿಗಿರಿ ಗ್ರಾಮದಲ್ಲಿ 14 ಮನೆಗಳು, ಖಜ್ಜಿಡೋಣಿ 1, ಗದ್ದನಕೇರಿ ತಾಂಡಾದಲ್ಲಿ 6, ದೇವನಾಳ 2, ಚಿಕ್ಕಸಂಶಿ 3, ಹಿರೇಸಂಶಿ 7, ಗೊವಿಂದಕೊಪ್ಪ 1, ಹಿರೇಶೆಕೇರಿ 7, ಚಿಕ್ಕಶೆಲ್ಲಿಕೇರಿ 3, ಯಂಕಂಚಿ 2 ಮನೆ ಸೇರಿ ಒಟ್ಟು 46 ಮನೆಗಳು ಬಿದ್ದಿವೆ.
ಜೀವನ ಬದುಕಿಗೆ ಇದ್ದ ಒಂದೇ ಮನೆ ಸತತವಾಗಿ ಸುರಿದ ಮಳೆಗೆ ಬಿದ್ದಿದೆ. ಇನ್ನು ಎಲ್ಲಿ ವಾಸ ಮಾಡುವುದು ಎಂಬ ಚಿಂತೆ ಕಾಡುತ್ತಿದೆ. ಸದ್ಯ ತಗಡಿನ ಸಣ್ಣ ಶೆಡ್ನಲ್ಲಿ ವಾಸ ಮಾಡುತ್ತಿದ್ದೇವೆ. ಸರಕಾರ ಕೂಡಲೇ ಪರಿಹಾರ ಧನ ನೀಡಿ ಬದುಕು ಕಟ್ಟಿಕೊಳ್ಳಲು ಅನುಕೂಲ ಮಾಡಬೇಕು.
– ದುಂಡಪ್ಪ ಮರಪುಲಿ, ಹಿರೇಶೆಲ್ಲಿಕೇರಿ ಗ್ರಾಮಸ್ಥ
ಕಲಾದಗಿ ಹೋಬಳಿ ವ್ಯಾಪ್ತಿಯಲ್ಲಿ ಕಳೆದೊಂದು ವಾರದಲ್ಲಿ ಹತ್ತು ಗ್ರಾಮದಲ್ಲಿ ಒಟ್ಟು 46 ಮನೆಗಳು ಬಿದ್ದಿದ್ದು, ಹಾನಿಯ ವರದಿಯನ್ನು ಬಾಗಲಕೋಟೆ ತಹಶೀಲ್ದಾರ್ಗೆ ನೀಡಲಾಗಿದೆ.
– ಆರ್.ಆರ್.ಕುಲಕರ್ಣಿ, ಕಂದಾಯ ನಿರೀಕ್ಷಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
MUST WATCH
ಹೊಸ ಸೇರ್ಪಡೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್