ಸುಳ್ಯ, ಪುತ್ತೂರು ಉತ್ತಮ ಮಳೆ: ಪೆರುವಾಜೆ ದೇವಾಲಯ ಜಲಾವೃತ
Team Udayavani, Oct 10, 2020, 9:04 PM IST
ಸುಳ್ಯ/ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಉಭಯ ತಾಲೂಕಿನ ವಿವಿಧೆಡೆ ಶನಿವಾರ ಸಂಜೆ ವೇಳೆ ಉತ್ತಮ ಮಳೆ ಸುರಿದಿದೆ.
ಪುತ್ತೂರು, ಸುಳ್ಯ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಒಂದುವರೆ ತಾಸು ಮಳೆ ಆಗಿದೆ. ಸುಳ್ಯ ತಾಲೂಕಿನ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ಹೊರಾಂಗಣ ಮತ್ತು ಒಳಾಂಗಣಕ್ಕೆ ಮಳೆ ನೀರು ನುಗ್ಗಿ ಕೆಲ ಕಾಲ ಜಲಾವೃತಗೊಂಡಿತು.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬೆಳಿಗ್ಗೆಯಿಂದಲೂ ಮೋಡಕವಿದ ವಾತಾವರಣ ಇದ್ದು ಕೆಲವು ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ.