ಹೆಬ್ರಿ ಮಿನಿ ವಿಧಾನ ಸೌಧ ಶೀಘ್ರ ಉದ್ಘಾಟನೆ: ಸುನಿಲ್
Team Udayavani, Apr 27, 2022, 5:50 AM IST
ಹೆಬ್ರಿ: ಹೆಬ್ರಿ ತಾಲೂಕು ಆದ ಬಳಿಕ ಅಭಿವೃದ್ಧಿ ಕಾಣುತ್ತಿದ್ದು ಶೀಘ್ರ ಮುಖ್ಯಮಂತ್ರಿಗಳಿಂದ ಮಿನಿ ವಿಧಾನಸೌಧದ ಉದ್ಘಾಟನೆ ನಡೆಯಲಿದೆ.
ತಾಲೂಕು ಕಚೇರಿ ಕಟ್ಟಡದ ಸ್ಥಳವನ್ನು 1.5 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಬಸ್ ತಂಗುದಾಣವಾಗಿ ಮಾಡಲಾಗುವುದು ಎಂದು ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.
ಅವರು ಮಂಗಳವಾರ ಹೆಬ್ರಿ ತಾಲೂಕಿನ ನಾಡಾ³ಲು ಶಿವಪುರ ಮೊದಲಾದ ಪ್ರದೇಶದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು.
ಅಂತರ್ಜಾಲ ಸಮಸ್ಯೆಗೆ ಮುಕ್ತಿ
ಕೂಡ್ಲು ಪರಿಸರ ಅಂತರ್ಜಾಲ ಸಮಸ್ಯೆಯಿಂದಾಗಿ ಬಾಹ್ಯ ಸಂಪರ್ಕಕ್ಕೆ ಅಸಾಧ್ಯವಾಗಿತ್ತು. ಈ ಭಾಗದಲ್ಲಿ ಟವರ್ ನಿರ್ಮಾಣ ಕಷ್ಟ ಸಾಧ್ಯವಾದ್ದರಿಂದ ನಾಡ್ಪಾಲು ಗ್ರಾ.ಪಂ.ನ ವಿಶೇಷ ಮುತುವರ್ಜಿ ಯಲ್ಲಿ 23 ಕಿ.ಮೀ. ಉದ್ದಕ್ಕೆ ಫೈಬರ್ ಕೇಬಲ್ ಮೂಲಕ ಸಮಸ್ಯೆಗೆ ಮುಕ್ತಿ ಒದಗಿಸಲಾಗಿದೆ ಎಂದು ಮೇಗದ್ದೆ, ಕೂಡ್ಲು, ವಣಜಾರು ಪ್ರದೇಶದ ಅಂತರ್ಜಾಲ ಸೇವೆಯನ್ನು ಉದ್ಘಾಟಿಸಿ ಸಚಿವರು ಹೇಳಿದರು.
ಹಳೇ ಸೋಮೇಶ್ವರ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ 3.25 ಲಕ್ಷ ರೂ. ವೆಚ್ಚದ ರಸ್ತೆಗೆ ಗುದ್ದಲಿ ಪೂಜೆ, 1.2 ಕೋ.ರೂ. ವೆಚ್ಚದ ನೆಲ್ಲಿಕಟ್ಟೆ -ಕೂಡ್ಲು ರಸ್ತೆ ಕಾಮಗಾರಿ ವೀಕ್ಷಣೆ, ಶಿವಪುರ-ಕೆರೆಬೆಟ್ಟು ಗ್ರಾಮದ ಕಲ್ಮುಂಡ-ಮುಕ್ಕಾಣಿ ಬಳಿ 1 ಕೋ.ರೂ. ವೆಚ್ಚದ ರಸ್ತೆ ಅಭಿವೃದ್ದಿ, ಖಜಾನೆ ಕೊಡಮಣಿತ್ತಾಯ ದೇವಸ್ಥಾನಕ್ಕೆ ಹೋಗುವ 25 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ಧಿ, 50 ಲ.ರೂ. ವೆಚ್ಚದ ಖಜಾನೆ-ಕಲ್ಮುಂಡ ರಸ್ತೆ ಅಭಿವೃದ್ಧಿ, 50 ಲ.ರೂ. ವೆಚ್ಚದ ಭಟ್ಟಂಬಳ್ಳಿಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಚಿವರು ಗುದ್ದಲಿ ಪೂಜೆ ನೆರವೇರಿಸಿದರು.
ಹೆಬ್ರಿ ತಹಶೀಲ್ದಾರ್ ಪುರಂದರ ಕೆ., ಹೆಬ್ರಿ ತಾ.ಪಂ. ಕಾ.ನಿ. ಅಧಿಕಾರಿ ಶಶಿಧರ್, ನಾಡ್ಪಾಲು ಗ್ರಾ.ಪಂ. ಅಧ್ಯಕ್ಷ ದಿನೇಶ್ ಹೆಗ್ಡೆ, ಉಪಾಧ್ಯಕ್ಷ ನವೀನ್ ಕುಮಾರ್, ಕೂಡ್ಲು ಪರಿಸರ ಅಭಿವೃದ್ಧಿ ಸಮಿತಿ ಅಧ್ಯಕ್ಷ ನವೀನ್ ಕುಮಾರ್ ಶೆಟ್ಟಿ, ಅಧಿಕಾರಿ ಗೌರವ್, ಅನಿಲ್ ಕುಮಾರ್, ರಘುರಾಮ್ ಶೆಟ್ಟಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ