ಮಲೆನಾಡ ಗಂಗೆ ಎಂದೇ ಪ್ರಸಿದ್ದಿ ಪಡೆದ ಹೇಮಾವತಿ ನದಿ ಉಗಮವಾಗಿದ್ದೇ ಇಲ್ಲಿ


Team Udayavani, Nov 27, 2020, 5:13 PM IST

ಮಲೆನಾಡ ಗಂಗೆ ಎಂದೇ ಪ್ರಸಿದ್ದಿ ಪಡೆದ ಹೇಮಾವತಿ ನದಿ ಉಗಮವಾಗಿದ್ದೇ ಇಲ್ಲಿ

ಪಶ್ಚಿಮ ಘಟ್ಟಗಳ ಸೌಂದರ್ಯ ಸ್ವರ್ಗದ ದ್ವಾರ, ಕಾಫಿ ಕಣಜವಾದ ಚಿಕ್ಕಮಗಳೂರು ಸುಂದರ ಸ್ಥಳಗಳ ತವರೂರು. ಸ್ವತ್ಛ ಗಾಳಿ ಸೇವನೆಯ ಮಲೆನಾಡು ನಿರ್ಮಲ ನಿಸರ್ಗ ತಾಣಗಳ ನೇಲೆಬೀಡು. ಹೇಮಾವತಿ ಉಗಮ ಸ್ಥಾನವಾದ ಚಿಕ್ಕಮಗಳೂರು ಜಿಲ್ಲೆಯ ಸ್ವರ್ಗದಂತಿದೆ. ಪಶ್ವಿ‌ಮ ಘಟ್ಟಗಳ ಸೌಂದರ್ಯ ಕರುನಾಡಿನ ಮೂಲ ಚೇತನ ಸಾನಿಧ್ಯ.

ಮಲೆನಾಡಿನ ಸೌಂದರ್ಯದ ಬೊಕ್ಕಸದಲ್ಲಿ ಪ್ರಸಿದ್ಧ ಪ್ರವಾಸಿ ತಾಣಗಳ ಸಾಲಿನಲ್ಲಿ ಹೇಮಾವತಿ ನದಿ ಮೂಲವು ಒಂದಾಗಿದೆ. ಹೇಮಾವತಿ ನದಿಯು ಮೂಡಿಗೆರೆ ತಾಲೂಕಿನ ಜವಳಿ ಎಂಬಲ್ಲಿ ಉಗಮವಾಗುತ್ತದೆ. ನದಿ ಮೂಲ ಮತ್ತು ಋಷಿ ಮೂಲ ಹುಡುಕಬಾರದು ಎಂಬ ನಾಣ್ಣುಡಿಯಂತೆ ಹೇಮಾವತಿ ನದಿ ಮೂಲದ ಜಾಡು ಕೂಡ ಕೂತುಹಲ ಮೂಡಿಸುತ್ತದೆ.
ಶ್ರೀ ಮಹಾಗಣಪತಿ ದೇವಸ್ಥಾನದ ಸನ್ನಿದಾನದಲ್ಲಿ ಹನಿ ಹನಿಯ ರೂಪದಲ್ಲಿ ತೊಟ್ಟಿರುವ ಹೇಮಾವತಿ ಗ್ರಾಮದ ಬೆಟ್ಟದ ಮೇಲಿಂದ ಇಳಿದು ನದಿಯಾಗಿ ಹರಿದು ಮೂಡಿಗೆರೆ ಮತ್ತು ಹಾಸನ ಸೇರಿದಂತೆ ನಾಲ್ಕು ಜಿಲ್ಲೆಗಳ ರೈತರ ಪಾಲಿನ ಜೀವದಾತೆಯಾಗಿದ್ದಾಳೆ ಮಲೆನಾಡ ಗಂಗೆ ಹೇಮಾವತಿ.

ಪುರಾಣದಲ್ಲಿ ಹೇಮಾವತಿ ನದಿಯ ಬಗ್ಗೆ ಉಲ್ಲೇಖವಿದೆ. ಸತ್ಯ ಕಾಮ ಎಂಬಾತ ಗೌತಮ ಮಹರ್ಷಿಗಳ ಬಳಿ ಬಂದು ತನ್ನನ್ನು ಶಿಷ್ಯನಾಗಿ ಸ್ವೀಕರಿಸಿ ಎಂದು ವಿನಂತಿಸಿದಂತೆ ಗೌತಮ ಮಹರ್ಷಿಗಳು ಆತನ ಗೋತ್ರ ವಿಚಾರಿಸಿದಾಗ ಅವನಿಗೆ ಅದು ತಿಳಿಯದೇ ಇದ್ದುದರಿಂದ ಆತನ ತಾಯಿ ಬಳಿ ವಿಚಾರಿಸಿ ಬಾ ಎನ್ನುತ್ತಾರೆ. ತಾಯಿಗೂ ಕೂಡ ತಿಳಿಯದೇ ಇದ್ದುದರಿಂದ ಗೋತ್ರದ ವಿಚಾರ ತನ್ನ ತಾಯಿಗೂ ಅರಿವಿಲ್ಲವೆಂದು ಹೇಳುತ್ತಾನೆ. ಆಗ ಮಹರ್ಷಿ ತನ್ನ ದಿವ್ಯ ದೃಷ್ಠಿಯಿಂದ ಸತ್ಯಕಾಮನ ಪೂರ್ವಪರ ತಿಳಿದು ಕೊಂಡು ಅವನ ತಂದೆ ಒಬ್ಬ ಬ್ರಾಹ್ಮಣನಾಗಿದ್ದು,ಇವನನ್ನು ಶಿಷ್ಯನಾಗಿ ಸ್ವೀಕರಿಸುವುದಾಗಿ ತಿಳಿಸುತ್ತಾನೆ. ಅನಂತರ ಸತ್ಯಕಾಮನಿಗೆ ಬ್ರಹ್ಮೋಪದೇಶ ಮಾಡಿ ಆತನಿಗೆ ಮೂನ್ನೂ ಹಸುಗಳನ್ನು ಕೊಟ್ಟು ಈ ಹಸುಗಳು ಒಂದು ಸಾವಿರ ಆಗುವ ತನಕ ನೋಡಿಕೊಳ್ಳುವಂತೆ ಹೇಳುತ್ತಾನೆ.

ಸತ್ಯ ಕಾಮನು ಹಸುಗಳನ್ನು ಕಾಡಿಗೆ ಕೊಂಡೊಯ್ಯೊತ್ತಾನೆ. ಪಂಚ ಭೂತಗಳಾದ ಭೂಮಿ, ವಾಯು,ಅಗ್ನಿ, ನೀರು, ಆಕಾಶ ಆತನಿಗೆ ಬ್ರಹ್ಮಸ್ವರ ಜ್ಞಾನವನ್ನು ಮತ್ತು ಅಧಿಶಕ್ತಿಯ ಪರಿಚಯವನ್ನು ಒದಗಿಸುತ್ತದೆ. ಪಂಚ ಭೂತಗಳಿಂದ ಬ್ರಹ್ಮಸ್ವರ ಉಪದೇಶವನ್ನು ಪಡೆದುಕೊಂಡು ಹಸುವಿನೊಂದಿಗೆ ತಪಸ್ವಿಗೆ ತೆರಳುತ್ತಾನೆ. ಹಾಗೇ ತಪಸ್ವಿಗೆ ಕುಳಿತ ಸ್ಥಳವೇ ಈಗೀನ ಜಾವಳಿ ಸಮೀಪದ ಹೇಮಾವತಿ ಗುಡ್ಡ ಎಂಬ ಇತಿಹಾಸವಿದೆ. ಸತ್ಯ ಕಾಮ ಸ್ಥಾಪಿಸಿದ ಆಶ್ರಮದ ಬಳಿ ( ಈಗಿನ ಹೇಮಾವತಿ) ನೀರಿಲ್ಲದೆ ಇರುವುದನ್ನು ಗಮನಿಸಿ ಶಿವನ ಶಿರದಿಂದ ಹರಿಯುವ ಗಂಗೆಯನ್ನು ಕರುಣಿಸುವಂತೆ ಪಾವರ್ತಿಯನ್ನು ಪ್ರಾರ್ಥಿಸಿ ತಪಸ್ಸಿಗೆ ಕುಳಿತುಕೊಳ್ಳುತ್ತಾನೆ. ತನ್ನ ತಪಸ್ಸು ನಿರ್ವಿಘ್ನವಾಗಿ ನಡೆಯಲಿ ಎಂದು ತಪಶಕ್ತಿಯಿಂದ ಗಣಪತಿಯನ್ನು ಸೃಷ್ಟಿಸಿಕೊಂಡು ಪೂಜಿಸುತ್ತಾನೆ.

ಬಹುಕಾಲ ತಪಸ್ಸು ಮಾಡಿದ ಅನಂತರ ಪಾವರ್ತಿಯು ಪ್ರತ್ಯಕ್ಷಳಾಗಿ ವರ ಬೇಡುವಂತೆ ಹೇಳುತ್ತಾಳೆ. ತನ್ನ ಹಸುಗಳಿಗೆ ಕುಡಿಯಲು ನೀರಿಲ್ಲ ಹಾಗಾಗಿ ಇಲ್ಲಿ ನೀರನ್ನು ಕರುಣಿಸಿ ಎಂದಾಗ ಹಿಮ ಕರಗಿ ದಂಡಕಾರಣ್ಯದ ಮೂಲಕ ಒಣ ಭೂಮಿಯಲ್ಲಿ ಹರಿಯಲಿ ಎಂದು ವರವನ್ನು ಕೊಟ್ಟಳು.

ಹೀಗೆ ಹಿಮಗಡ್ಡೆಗಳು ಕರಗಿ ನೀರಾಗಿ ಹರಿಯಲಾರಂಭಿಸಿದವು. ಈಗಿನ ಹಾಸನ ಜಿಲ್ಲೆ ಅಂದಿನ ದಂಡಕಾರಣ್ಯದ ಒಂದು ಭಾಗವಾಗಿತ್ತು. ಹಿಮವಾಹಿನಿಯೂ ಹರಿದು ದಂಡಕಾರಣ್ಯದ ಒಣ ಭೂಮಿಯನ್ನು ಪ್ರವೇಶಿಸುತ್ತಿದ್ದಂತೆ ಅಲ್ಲಿನ ಜೀವನವೇ ಬದಲಾಯಿತು. ಹೀಗೆ ಹೇಮವಾಹಿನಿ ನದಿಯು ಕಾಲ ಕ್ರಮೇಣ ಹೇಮಾವತಿ ನದಿ ಎಂದಾಯಿತು.

ಹೇಮಾವತಿ ನದಿಯು ಕಾವೇರಿ ನದಿಯ ಮುಖ್ಯ ಉಪನದಿಗಳೊಂದು ಚಿಕ್ಕಮಗಳೂರು ಜಿಲ್ಲೆ ಜಾವಳಿಯಲ್ಲಿ ಉಗಮಿಸುವ ಈ ನದಿ ಹಾಸನ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಹರಿದು, ಕೃಷ್ಣ ರಾಜ ಪೇಟೆ ತಾಲೂಕಿನ ಅಂಬಿಗರ ಹಳ್ಳ ಬಳಿ ಯ ಸಂಗಮದಲ್ಲಿ ಕಾವೇರಿ ನದಿಯನ್ನು ಸೇರುತ್ತದೆ.

– ಯಶಸ್ವಿನಿ ಸುರೇಂದ್ರ ಗೌಡ, ಜ್ಞಾನ ಜ್ಯೋತಿ ಟಿ.ಎಂ.ಎಸ್‌ ಕಾಲೇಜು, ಚಿಕ್ಕಮಗಳೂರು

ಟಾಪ್ ನ್ಯೂಸ್

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-uv-fusion

Relationships: ಆಕೆಯ ಸುಂದರ ಬದುಕಿಗೆ ಇಷ್ಟೇ ಸಾಕಲ್ಲವೇ…

7-uv-fusion

Poetry: ಸಾಹಿತ್ಯ ಲೋಕದ ಭಾವಯಾನ ‘ಕವನ’

9-uv-fusion

Sirsi festival: ಶಿರಸಿ ಜಾತ್ರೆ ಎಂದರೆ, ಸುಮ್ಮನೆ ಅಲ್ಲ !

8-uv-fusion

UV Fusion: ಅವಳು

6-nss-camp

NSS Camp: ಜೀವನ ಮೌಲ್ಯ ಕಲಿಸಿದ ಎನ್‌ಎಸ್‌ಎಸ್‌ ಶಿಬಿರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.