ಸಾಲ ಮನ್ನಾ ನಂಬಿ ಹೆಚ್ಚಿನ ಬಡ್ಡಿ ತೆತ್ತ ರೈತರು


Team Udayavani, Dec 12, 2019, 3:08 AM IST

salamanna

ಹುಬ್ಬಳ್ಳಿ: ರೈತ ಬೆಳೆ ಸಾಲ ಮನ್ನಾ ಎಂಬ ಗೊಂದಲ- ಗೋಜಲು ಸ್ಥಿತಿ ಅನ್ನದಾತರಿಗೆ ನೆಮ್ಮದಿ ತರುವ ಬದಲು ಅವರ ನೆಮ್ಮದಿಯನ್ನೇ ಕಿತ್ತುಕೊಳ್ಳತೊಡಗಿದೆ. ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರಕಾರದಲ್ಲಿ ರೈತರ ಬೆಳೆ ಸಾಲ ಮನ್ನಾ ಕುರಿತು ಮಾಡಿದ ಘೋಷಣೆ ಸತತ ಬರದಿಂದ ಕಂಗೆಟ್ಟಿದ್ದ ರೈತರಲ್ಲಿ ಆಶಾಕಿರಣ ಮೂಡಿಸಿದಂತಾಗಿತ್ತು. ಆದರೀಗ “ಬೆಳೆ ಸಾಲ ಮನ್ನಾ’ ಸರಕಾರದ ಮಾತು ನಂಬಿದ್ದ ರೈತರೀಗ ಎರಡ್ಮೂರು ಪಟ್ಟು ಬಡ್ಡಿ ಕಟ್ಟುವಂತಾಗಿದ್ದು, ಚಾಲ್ತಿ ಖಾತೆದಾರರಿಗೆ ನೀಡುತ್ತೇವೆಂದು ಹೇಳಿದ್ದ 25,000 ರೂ.ಸಹ ಕೈಗೆ ಸಿಗದೆ ಪರದಾಡುವಂತಾಗಿದೆ.

ಸಾಲ ಮನ್ನಾ ಪ್ರಹಸನ: ಮಾಜಿ ಮುಖ್ಯಮಂತ್ರಿ ಎಚ್‌. ಡಿ.ಕುಮಾರಸ್ವಾಮಿ ಅವರು 2018ರ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಎಲ್ಲಾ ಬೆಳೆ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದರು. ಬಹುಮತ ಸಿಗದೆ, ಕಾಂಗ್ರೆಸ್‌ ಜತೆ ಸೇರಿ ಸಮ್ಮಿಶ್ರ ಸರಕಾರ ಮಾಡಿದಾಗಲೂ ಬೆಳೆ ಸಾಲ ಮನ್ನಾ ಕ್ರಮಕ್ಕೆ ಮುಂದಾಗಿದ್ದರು. ರೈತರ ಒಟ್ಟು ಬೆಳೆ ಸಾಲ 48 ಸಾವಿರ ಕೋಟಿ ರೂ.ಎಂದು ಅಂದಾಜಿಸಲಾಗಿತ್ತಾದರೂ, ಅದರಲ್ಲಿ ಅನೇಕ ಏರಿಳಿತ ಕಂಡಿತ್ತು. ಒಟ್ಟು ಸಾಲ ಮನ್ನಾವೋ, 2 ಲಕ್ಷ ರೂ.ವರೆಗೋ ಎಂಬ ಗೊಂದಲದ ಜತೆಗೆ ವಾಣಿಜ್ಯ ಬ್ಯಾಂಕ್‌ಗಳು ಮಾಹಿತಿ ನೀಡುತ್ತಿಲ್ಲವೆಂಬ ಆರೋಪ ಕೇಳಿ ಬಂದಿತ್ತು.

ಹಲವು ಸರ್ಕಸ್‌ಗಳ ನಂತರ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲದ ಗೊಂದಲದ ನಡುವೆಯೂ ಸರಕಾರ ಸಾಲ ಮನ್ನಾ ಅನುಷ್ಠಾನ ಆದೇಶ ಹೊರಡಿಸಿತ್ತು. ಇದಾದ ಕೆಲವು ತಿಂಗಳಲ್ಲಿ ಸಮ್ಮಿಶ್ರ ಸರಕಾರವೇ ಪತನಗೊಂಡಿತ್ತು. ಯಾವ ಜಿಲ್ಲೆಯಲ್ಲಿ ಎಷ್ಟು ರೈತರಿಗೆ ಎಷ್ಟು ಸಾಲ ಮನ್ನಾ ಆಗಿದೆ ಎಂಬುದರ ಮಾಹಿತಿಯನ್ನು ಕುಮಾರಸ್ವಾಮಿಯವರು ಪುಸ್ತಕ ರೂಪದಲ್ಲಿ ಹೊರ ತಂದಿದ್ದಾರೆ. ಆದರೂ, ಹಲವು ರೈತರು ಮಾತ್ರ ಸರಕಾರದ ಮಾತು ನಂಬಿ ನಾವು ಕೆಟ್ಟೇವು ಎಂದು ಹಿಡಿಶಾಪ ಹಾಕುವಂತಾಗಿದೆ.

ಕೊಕ್ಕೆ ತಂತ್ರ: ಸಹಕಾರಿ ಹಾಗೂ ವಾಣಿಜ್ಯ ಬ್ಯಾಂಕ್‌ಗಳಲ್ಲಿ ಸಾಲ ಪಡೆಯುವ ರೈತರು, ಹಳೆ ಸಾಲದ ಬಡ್ಡಿ ಪಾವತಿಸಿ ಮತ್ತೆ ಸಾಲ ನವೀಕರಣ ಇಲ್ಲವೇ ಸಾಲ ಪಾವತಿಸಿ ಹೊಸ ಸಾಲ ಪಡೆಯುತ್ತಿದ್ದರು. ಯಾವಾಗ ಸರಕಾರ ಸಾಲ ಮನ್ನಾ ಘೋಷಣೆ ಮಾಡಿತೋ ಅಲ್ಲಿಂದಲೇ ಸಾಲ ಇಲ್ಲವೆ ಬಡ್ಡಿ ಮರುಪಾವತಿ ಸ್ಥಗಿತಗೊಳಿಸಿದ್ದರು. ಸಾಲ ಮನ್ನಾದ ಗೊಂದಲ ಮುಗಿಯುವುದರೊಳಗೆ ವರ್ಷ ಕಳೆದಿತ್ತು. ಸಾಲದ ಬಡ್ಡಿ ಹೇರಿಕೆಯಾಗಿತ್ತು. ಮೂರು ಲಕ್ಷ ರೂ.ಸಾಲ ಪಡೆದ ರೈತ, ವಾರ್ಷಿಕ 26 ಸಾವಿರ ರೂ.ಬಡ್ಡಿ ಕಟ್ಟುತ್ತಿದ್ದ. ಇದೀಗ 80 ಸಾವಿರ ರೂ.ಬಡ್ಡಿ ಪಾವತಿಸುವಂತಾಗಿದೆ.

ಇನ್ನೊಂದು ಕಡೆ, ಚಾಲ್ತಿ ಸಾಲಗಾರರಿಗೆ ಹಾಗೂ ಈಗಾಗಲೇ ಸಾಲ ಮರುಪಾವತಿಸಿದವರಿಗೆ ಪ್ರೋತ್ಸಾಹ ಧನವಾಗಿ 25,000 ರೂ.ಗಳನ್ನು ನೀಡುವುದಾಗಿಯೂ ಸರಕಾರ ಘೋಷಿಸಿತ್ತು. ಅದಾದರೂ ಬಂದೀತಲ್ಲ ಎಂದು ಅನೇಕ ರೈತರು ಕಾಯ್ದು ಕುಳಿತಿದ್ದು, ಹಲವರಿಗೆ ಇದುವರೆಗೂ ನಯಾ ಪೈಸೆ ಬಂದಿಲ್ಲ. 25 ಸಾವಿರ ರೂ.ಪ್ರೋತ್ಸಾಹ ಧನವಾದರೂ ನೀಡಿ ಎಂದು ರೈತರು ಕೇಳಿದರೆ, ಅಧಿಕಾರಿಗಳು ಕೊಕ್ಕೆ ಮೇಲೆ ಕೊಕ್ಕೆ ಹಾಕುತ್ತಿದ್ದಾರೆ. ನಿಮ್ಮ ಪಡಿತರ ಕಾರ್ಡ್‌ ಇಲ್ಲವೆಂದು, ಹೊಸ ಕಾರ್ಡ್‌ ತರಬೇಕೆಂದು, ಉತಾರದಲ್ಲಿನ ಹೆಸರು ಕೊಂಚ ಬದಲು ಇದೆ ಎಂದು, ಸರ್ವೇ ನಂಬರ್‌ ತಪ್ಪಿದೆ ಎಂದು, ಭೂಮಿ ಯೋಜನೆಯಡಿ ಲಿಂಕ್‌ ಆಗಿಲ್ಲವೆಂದು..ಹೀಗೆ ಒಂದಲ್ಲ ಒಂದು ತಕರಾರು ತೆಗೆಯುವ ಮೂಲಕ ರೈತರನ್ನು ಸಾಗ ಹಾಕತೊಡಗಿದ್ದಾರೆ ಎಂಬುದು ಅನೇಕ ರೈತರ ಆಕ್ರೋಶ.

ಸಾಲ ಮನ್ನಾ ಎಂಬ ಸರಕಾರದ ಮಾತು ನಂಬಿ ನಾವು ಕೆಟ್ಟಿàವ್ರಿ. ಮನ್ನಾ ಆಗುತ್ತಂತ ನಂಬಿ ಹೆಚ್ಚಿನ ಬಡ್ಡಿ ತುಂಬೀವಿ. 25 ಸಾವಿರ ಹಣವಾದರೂ ಬರುತ್ತೆ ಅಂದ್ರೆ, ಅದಕ್ಕಾ ಇಲ್ಲಸಲ್ಲದ ಕೊಕ್ಕೆ ಹಾಕಿ ವಾಪಸ್‌ ಕಳ್ಸಾಕತ್ಯಾರ. ಹಿಂಗಾದ್ರ ರೈತರು ಬದುಕೋದಾದ್ರು ಹ್ಯಾಂಗ್ರಿ.
-ಹನುಮಂತ ಬೂದಿಹಾಳ, ಕೋಳಿವಾಡ ರೈತ

ಬೆಳೆ ಸಾಲ ಮನ್ನಾ ಎಂಬ ಘೋಷಣೆ ಅಡಿ ರೈತರಿಗೆ ದೊಡ್ಡ ಅನ್ಯಾಯ ಮಾಡಲಾಗಿದೆ. ಎರಡು ಲಕ್ಷ ಸಾಲ ಪಡೆದಿರುವ ಅನೇಕ ರೈತರು ಮನ್ನಾಕ್ಕೆ ಎಲ್ಲ ಅರ್ಹತೆ ಇದ್ದರೂ, ಅಂತಹವರ ಖಾತೆಗೆ ಕೇವಲ 25 ಸಾವಿರ ರೂ.ಹಾಕಿ ಸರಕಾರ ಕೈತೊಳೆದು ಕೊಂಡಿದೆ. ಇನ್ನು ಕೆಲವರಿಗೆ 25 ಸಾವಿರ ರೂ. ಸಹ ಬಂದಿಲ್ಲ.
-ಚಾಮರಸ ಪಾಟೀಲ, ಗೌರವಾಧ್ಯಕ್ಷ, ರಾಜ್ಯ ರೈತಸಂಘ-ಹಸಿರುಸೇನೆ

* ಅಮರೇಗೌಡ ಗೋನವಾರ

ಟಾಪ್ ನ್ಯೂಸ್

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

1-ckm-rsrt-close

Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ‌ ಎಲ್ಲ ಹೋಂ ಸ್ಟೇ, ರೆಸಾರ್ಟ್‌ ಬಂದ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ckm-rsrt-close

Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ‌ ಎಲ್ಲ ಹೋಂ ಸ್ಟೇ, ರೆಸಾರ್ಟ್‌ ಬಂದ್!

ಯತ್ನಾಳ್

Loksabha Election; ಈಶ್ವರಪ್ಪ ಬಂಡಾಯವನ್ನು ರಾಜಾಹುಲಿ ಶಮನ ಮಾಡಲಿ: ಯತ್ನಾಳ್

ಶಿವಮೊಗ್ಗ: ಅಪ್ಪ ಮಕ್ಕಳ ಶಿಕಾರಿ ನಾನು ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ

ಶಿವಮೊಗ್ಗ: ಅಪ್ಪ ಮಕ್ಕಳ ಶಿಕಾರಿ ನಾನು ಮಾಡುತ್ತೇನೆ… ವಿಜಯೇಂದ್ರ ವಿರುದ್ಧ ಈಶ್ವರಪ್ಪ ಕಿಡಿ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

ಲೋಕಸಭೆ ಚುನಾವಣೆ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ದೊಡ್ಡ ಪರಿಣಾಮ ಬೀರಲಿದೆ: ಬೊಮ್ಮಾಯಿ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

LS polls: ನಾಳೆ ಸಿಎಂ, ಡಿಸಿಎಂ ಭೇಟಿಯಾಗಿ ಕಾಂಗ್ರೆಸ್ ಸೇರ್ಪಡೆ ಬಗ್ಗೆ ತೀರ್ಮಾನ; ಸಂಗಣ್ಣ

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Bigg Boss OTT ಸೀಸನ್‌ -3 ಅನೌನ್ಸ್:‌ ಈ ಬಾರಿ ಮತ್ತೆ ಸಲ್ಮಾನ್‌ ಖಾನ್ ನಿರೂಪಣೆ

Loksabha

Udupi Chikmagalur Lok Sabha Election: ಮಹಿಳಾ ಮತದಾರರೇ ಅಧಿಕ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

ಮೂಡಿಗೆರೆ: ನೆಮ್ಮದಿ ಕಳೆದುಕೊಂಡ ಜನರಿಂದ ತಕ್ಕ ಉತ್ತರ- ಕೆ.ಜಯಪ್ರಕಾಶ್‌ ಹೆಗ್ಡೆ

3-

ಕಾರ್ಯಕರ್ತರ ಸಭೆ; ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಗೆ ಬೆಂಬಲ ನೀಡಿ ಗೆಲ್ಲಿಸುವಂತೆ ಮನವಿ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.