ದಿನಬಳಕೆ ವಸ್ತುಗಳ ದರ ಹೆಚ್ಚಳಕ್ಕೆ ಹೈರಾಣಾದ ಸಾರ್ವಜನಿಕರು
ಅನಿವಾರ್ಯವಾಗಿ ಖರೀದಿಸಬೇಕಾದ ಸ್ಥಿತಿ ಜನರ ಹಿಡಿಶಾಪ
Team Udayavani, Apr 8, 2020, 11:39 AM IST
ಹುಬ್ಬಳ್ಳಿ: ಕೊರೊನಾ ಕಾರಣ ತರಕಾರಿ ಮಾರುಕಟ್ಟೆ-ಸಂತೆಗಳು ರದ್ದಾಗಿದ್ದರೂ ತರಕಾರಿ-ದಿನಸಿ ಸಾಮಗ್ರಿಗಳ ಬೆಲೆ ಹೆಚ್ಚಳದಿಂದ ಜನ ಪರಿತಪಿಸುವಂತಾಗಿದೆ. ತರಕಾರಿ ಹಾಗೂ ದಿನಸಿ ಸಾಮಗ್ರಿಗಳ ಕೊರತೆ ಇದೆ ಎಂಬ ನೆಪದಲ್ಲಿ ಮಾರಾಟಗಾರರು ಹಣ್ಣು, ತರಕಾರಿ, ಪಲ್ಯ, ದಿನಸಿ ಸಾಮಗ್ರಿಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಮುಂದಾಗಿದ್ದಾರೆ. ಅನಿವಾರ್ಯವಾಗಿ ಜನರು ಹೆಚ್ಚಿನ ದರ ನೀಡಿ ಖರೀದಿಸಬೇಕಾದ ಸ್ಥಿತಿ ನಿರ್ಮಾಣಗೊಂಡಿದ್ದು, ಒಂದೆಡೆ ಕೊರೊನಾ ಹಾಗೂ ಇನ್ನೊಂದೆಡೆ ದರ ಹೆಚ್ಚಳಕ್ಕೆ ಜನ ಹಿಡಿಶಾಪ ಹಾಕತೊಡಗಿದ್ದಾರೆ.
5-15ರೂ. ಬೆಲೆ ಏರಿಕೆ: ಲಾಕ್ಡೌನ್ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳು ನಿರೀಕ್ಷಿತ ಮಟ್ಟದಲ್ಲಿ ಮಾರುಕಟ್ಟೆಗೆ ಬರುತ್ತಿಲ್ಲ. ಪ್ರತಿ ಕೆಜಿಗೆ ಸಕ್ಕರೆ 4-5 ರೂ., ತೊಗರಿ ಬೇಳೆ 4-8 ರೂ, ಎಣ್ಣೆ 10-15 ರೂ, ರವಾ-ಅಕ್ಕಿ
ಸೇರಿದಂತೆ ಎಲ್ಲವೂ ಕೆಜಿಗೆ 5 ರಿಂದ 15 ರೂ. ಗಳವರೆಗೆ ಏರಿಕೆ ಕಂಡಿವೆ. ಇನ್ನು ತರಕಾರಿಯೂ ತುಟ್ಟಿಯಾಗಿದ್ದು, ಯಾವುದೇ ತರಕಾರಿಯನ್ನೂ 250 ಗ್ರಾಂಗೆ 15-20 ರೂ.ಗಳಿಗೆ ಮಾರಾಟ
ಮಾಡಲಾಗುತ್ತಿದೆ. ಹಣ್ಣುಗಳ ಬೆಲೆ ದುಪ್ಪಟ್ಟಾಗಿದೆ. ಕಿತ್ತಳೆ 80 ರೂ. ಕೆಜಿ, ದ್ರಾಕ್ಷಿ 80-100 ರೂ.ಗಳು, ಕರಬೂಜ 50 ರೂ. ಗಳಿಗೆ ಒಂದು, ಕಲ್ಲಂಗಡಿ ಸಣ್ಣದು 50ರೂ. ಹಾಗೂ ದೊಡ್ಡದು 80-100 ರೂ., ಸೇಬು 150-180 ರೂ.ಗಳು, ಯಾಲಕ್ಕಿ ಬಾಳೆ ಕೆಜಿ 70 ರೂ.ಗಳಿಗೆ ಮಾರಾಟವಾಗ್ತಿವೆ.
ಬಡಾವಣೆಗೆ ಬರುವಲ್ಲಿ ಹೆಚ್ಚಿನ ದರ: ಜಿಲ್ಲಾಡಳಿತದಿಂದ ಜನರಿಗೆ ಅನಕೂಲವಾಗಲಿ, ಕೊರೊನಾ ತಡೆ ಹಿನ್ನೆಲೆಯಲ್ಲಿ ಯಾರೂ ರಸ್ತೆಗೆ ಇಳಿಯದಿರಲಿ ಎಂದು ಬಡಾವಣೆಗಳಲ್ಲೇ ತರಕಾರಿ, ಹಣ್ಣುಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಿರುವುದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ಮಾರಾಟಗಾರರು ಬೆಲೆ ಏರಿಕೆ ಮೂಲಕ ಜನರಿಗೆ ಹೊರೆ ಹಾಕುತ್ತಿದ್ದಾರೆ.
10 ರೂ. ಕೆಳಗೆ ಏನ್ನನ್ನು ಕೇಳಬೇಡಿ ಎಂದು ಹೇಳುವ ವ್ಯಾಪಾರಿಗಳು, 5ರೂ. ಗೆ ಒಂದು ನಿಂಬೆ ಹಣ್ಣು, 10 ರೂ.ಗಳ ಎರಡು ಕಡ್ಡಿಯಷ್ಟು ಕರಬೇವು, 40 ರೂ. ಗಳಿಗೆ ಕೊತಂಬ್ರರಿ ದೊಡ್ಡ ಸಿವುಡು, 35ರೂ. ಗಳಿಗೆ ಈರುಳ್ಳಿ-ಆಲೂಗಡ್ಡೆ ಮಾರಾಟ ಮಾಡುತ್ತಿರುವುದು ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಹೋಗಿ ಕಡಿಮೆ ಬೆಲೆಗೆ ತರಕಾರಿ ಖರೀದಿಸಿದರಾಯ್ತು ಎಂದುಕೊಂಡು ಜನರು ಮನೆಗಳಿಂದ ಹೊರಬೀಳುತ್ತಿದ್ದಾರೆ. ಇನ್ನೊಂದೆಡೆ ಬಡಾವಣೆಗಳಲ್ಲಿ ತರಕಾರಿ-ಹಣ್ಣು ಮಾರಾಟಕ್ಕೆ ಪರವಾನಗಿ ಪಡೆದಿರುವ
ವ್ಯಾಪಾರಿಗಳು ಯಾವುದೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೆ ಆಗಮಿಸುತ್ತಿರುವುದು ಜನರನ್ನು ಆತಂಕಕ್ಕೀಡು ಮಾಡಿದೆ.
ನುಂಗಲಾರದ ತುತ್ತಾಗಿದೆ..
ಕೊರೊನಾ ಸೋಂಕು ತಡೆಗೆ ಹೋರಾಟ ನಡೆಸುತ್ತಿರುವಾಗಲೇ ಬೆಲೆ ಏರಿಕೆ ಎನ್ನುವುದು ಸಾರ್ವಜನಿಕರನ್ನು ಬಾಧಿಸತೊಡಗಿದೆ. ಏನೇ ಖರೀದಿಸಲು ಹೋದರೂ ಈ ಹಿಂದಿಗಿಂತಲೂ ಹೆಚ್ಚಿನ ಬೆಲೆ ನೀಡಿ ಖರೀದಿಸಬೇಕಾಗಿದೆ. ಸಂಬಂಧಪಟ್ಟವರು ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕು.
ಅಶೋಕ ಚಂದನಮಟ್ಟಿ,
ಸಾರ್ವಜನಿಕ
ಸಾರಿಗೆ ವೆಚ್ಚ ಹೆಚ್ಚು..
ಎಲ್ಲೆಡೆ ಲಾಕ್ಡೌನ್ ಆಗಿರುವುದರಿಂದ ಸಂಚಾರ ಅಸ್ತವ್ಯಸ್ತವಾಗಿದ್ದು, ವಾಹನಗಳ ಓಡಾಟ ಇಲ್ಲವಾಗಿದೆ. ಇದರಿಂದ ಇರುವಷ್ಟು ದಾಸ್ತಾನು ಖಾಲಿ ಮಾಡಲಾಗುತ್ತಿದ್ದು, ಜೊತೆಯಲ್ಲಿಯೇ ಎಪಿಎಂಸಿಯಿಂದ ದಾಸ್ತಾನು ತರಿಸಿಕೊಳ್ಳಬೇಕು. ಇದಕ್ಕಾಗಿ ಸಣ್ಣ ವಾಹನದ ಮೊರೆ ಹೋಗುತ್ತಿದ್ದು, ಅವರು ಬಾಡಿಗೆ ದರವನ್ನು ಏರಿಸಿದ್ದಾರೆ. ಒಂದು ಟನ್ಗೆ ಸುಮಾರು 50-100 ರೂ.ಗಳವರೆಗೆ ಏರಿಕೆ ಮಾಡಿದ್ದು, ಇದರಿಂದ ಅನಿವಾರ್ಯವಾಗಿ ಬೆಲೆ ಏರಿಕೆಯಾಗುತ್ತಿದೆ. ಇದು ಕೂಡಾ ಗ್ರಾಹಕರ ಮೇಲೆ ಬೀಳುತ್ತಿದೆ.
ಹೆಸರು ಹೇಳಲಿಚ್ಛಿಸದ ವ್ಯಾಪಾರಿ
ಬಸವರಾಜ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ
Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ
Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ
Hubli ಅಪಾರ್ಟಮೆಂಟ್ ನಲ್ಲಿ ಸಿಕ್ಕ ಕೋಟಿ ಕೋಟಿ ಹಣ ಬ್ಯಾಂಕ್ ಗೆ ಜಮೆ