ಸ್ಲಮ್‌ಗಳೇ ವೈರಸ್‌ನ ಉಗಮ ಸ್ಥಾನಗಳು


Team Udayavani, May 19, 2020, 1:15 PM IST

ಸ್ಲಮ್‌ಗಳೇ ವೈರಸ್‌ನ ಉಗಮ ಸ್ಥಾನಗಳು

ನ್ಯೂಯಾರ್ಕ್‌: ಶ್ರೀಮಂತ ದೇಶಗಳ ಅತ್ಯಾಧುನಿಕ ನಗರಗಳನ್ನು ತತ್ತರಗೊಳಿಸಿದ ಕೋವಿಡ್‌ ವೈರಸ್‌ ಈಗ ಅಭಿವೃದ್ಧಿ ಹೊಂದುತ್ತಿರುವ ಮತ್ತು ಬಡ ದೇಶಗಳ ನಗರಗಳಲ್ಲಿ ರುದ್ರತಾಂಡವ ಪ್ರಾರಂಭಿಸಿದೆ. ಅದರಲ್ಲೂ ಬಡದೇಶಗಳ ನಗರಗಳಲ್ಲಿರುವ ಕೊಳೆಗೇರಿಗಳ ಸ್ಥಿತಿ ಚಿಂತಾಜನಕವಾಗುತ್ತಿದೆ. ಮುಂಬಯಿಯ ಧಾರಾವಿಯಾಗಿರಲಿ, ಬಾಂಗ್ಲಾದೇಶ, ನೈಜೀರಿಯ, ಬ್ರಜಿಲ್‌ನಂಥ ದೇಶವಾಗಿರಲಿ ಕೊಳೆಗೇರಿಗಳಲ್ಲಿ ವಾಸವಾಗಿರುವವರು ಕೋವಿಡ್‌ ಎದುರು ಅಸಹಾಯಕರಾಗಿ ನೆರವಿಗಾಗಿ ಅಂಗಲಾಚುತ್ತಿದ್ದಾರೆ.

ನೀತಿ ರೂಪಣೆಗಾಗಿ ದತ್ತಾಂಶಗಳನ್ನು ಕಲೆ ಹಾಕುವ ಸಲುವಾಗಿ ಕೊಳೆಗೇರಿಗಳ ಸ್ಥಿತಿಗತಿಯ ಅಧ್ಯಯನ ಮಾಡಿದಾಗ ದಯನೀಯವಾದ ಚಿತ್ರಣ ಬಿಚ್ಚಿಕೊಂಡಿದೆ. ಜಗತ್ತಿನಾದ್ಯಂತ ಸುಮಾರು 100 ಕೋಟಿ ಜನರು ಕೊಳೆಗೇರಿಗಳಲ್ಲಿ ವಾಸವಾಗಿದ್ದಾರೆ.

ಕಡಿಮೆ ಖರ್ಚಿನ ಕಚ್ಚಾ ಮನೆಗಳು, ನೈರ್ಮಲ್ಯದ ಕೊರತೆ, ಆರೋಗ್ಯದ ಬಗೆಗೆ ಕಾಳಜಿಯಿಲ್ಲದಿರುವುದು, ಪೋಷಕಾಂಶದ ಕೊರತೆ ಇವೆಲ್ಲ ಎಲ್ಲ ಕೊಳೆಗೇರಿಗಳ ಸಾಮಾನ್ಯ ಲಕ್ಷಣಗಳು. ಕಡು ಬಡವರು ವಾಸವಾಗಿರುವ ಕೊಳೆಗೇರಿಗಳು ಎಂದಿಗೂ ರೋಗುರುಜಿನಗಳಿಗೆ ಮೊದಲು ತುತ್ತಾಗುತ್ತವೆ.

ಕೊಳೆಗೇರಿಗಳ ಅಧ್ಯಯನ ನಡೆಸಿದಾಗ ಅನೇಕ ಕೊಳೆಗೇರಿಗಳಿಗೆ ಇನ್ನೂ ಕೋವಿಡ್‌ ವಿರುದ್ಧ ಹೋರಾಡಲು ಅಗತ್ಯವಿರುವ ಪ್ರಾಥಮಿಕ ಸೌಲಭ್ಯಗಳೂ ತಲುಪಿಲ್ಲ ಎನ್ನುವ ಕಟುಸತ್ಯ ಅನಾವರಣಗೊಂಡಿದೆ. ಆಫ್ರಿಕದ ದೇಶಗಳ ಕೊಳೆಗೇರಿಗಳಲ್ಲಿ ಸೌಲಭ್ಯಗಳ ಕೊರತೆ ಢಾಳಾಗಿಯೇ ರಾಚುತ್ತದೆ.

ಅತಿಯಾದ ಜನದಟ್ಟಣೆ ಕೊಳೆಗೇರಿಗಳ ಮುಖ್ಯ ಸಮಸ್ಯೆ ಹಾಗೂ ಇದುವೇ ಎಲ್ಲ ಸಮಸ್ಯೆಗಳ ಮೂಲ. ಉಳಿದ ಕಡೆಗಳಿಗೆ ಹೋಲಿಸಿದರೆ ಕೊಳೆಗೇರಿಗಳ ಜನಸಾಂದ್ರತೆ ಹತ್ತುಪಟ್ಟು ಹೆಚ್ಚಿರುತ್ತದೆ. ಧಾರಾವಿ ಕೊಳೆಗೇರಿಯಲ್ಲಿ ಪ್ರತಿ ಚದರ ಕಿಲೋಮೀಟರ್‌ಗೆ 97,000 ಮಂದಿ ವಾಸವಾಗಿದ್ದಾರೆ. ಇದೇ ನಗರದ ಉಳಿದ ಭಾಗಗಳಲ್ಲಿರುವುದು ಚದರ ಕಿಲೋಮೀಟರ್‌ಗೆ 11,500 ಮಂದಿ. ಇಂಥ ಕೊಳೆಗೇರಿಗಳಲ್ಲಿ ಸಾಮಾಜಿಕ ಅಂತರ ಪಾಲನೆ ಅಸಾಧ್ಯ. ಕಿಷ್ಕಿಂಧೆಯಂಥ ಬೀದಿಗಳು ಮತ್ತು ಮನೆಗಳಲ್ಲಿ ಜನರು ಒತ್ತೂತ್ತಾಗಿಯೇ ಇರಬೇಕಾಗುತ್ತದೆ. ಕೋವಿಡ್‌ ವೈರಸ್‌ ಹರಡಲು ಇದಕ್ಕಿಂತ ಪ್ರಶಸ್ತವಾದ ಸ್ಥಳ ಇನ್ನೊಂದಿಲ್ಲ.

ಕೊಳೆಗೇರಿಗಳಿಗೆ ಶುದ್ಧವಾದ ಕುಡಿಯುವ ನೀರಿನ ಪೂರೈಕೆ ಒಂದು ಶಾಶ್ವತ ಸಮಸ್ಯೆ. ಜನರಿಗೆ ಖಾಸಗಿ ಶೌಚಾಲಯಗಳು ಇರುವುದಿಲ್ಲ. ಹೆಚ್ಚಿನವರು ಸಾರ್ವಜನಿಕ ಶೌಚಾಲಯಗಳನ್ನೇ ಅವಲಂಬಿಸಬೇಕಾಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ಪದೇಪದೆ ಕೈತೊಳೆಯುವುದು ಸಾಧ್ಯವಾಗದ ಸಂಗತಿ. ಬೊಜ್ಜು, ಮಧುಮೇಹ, ಅಧಿಕ ರಕ್ತದೊತ್ತಡ, ಖನ್ನತೆ ಕೊಳೆಗೇರಿಗಳ ಜನರನ್ನು ಬಾಧಿಸುತ್ತಿರುವ ಸಾಮಾನ್ಯ ಕಾಯಿಲೆಗಳು. ಇಲ್ಲಿನ ಜನರ ರೋಗನಿರೋಧಕ ಶಕ್ತಿಯೂ ಕಡಿಮೆಯಾಗಿರುತ್ತದೆ.

ಬ್ರಜಿಲ್‌ನ ರಿಯೊ ಡಿ ಜನೆರೊ ನಗರದ ಹೊರಭಾಗದಲ್ಲಿರುವ ಜೋಪಡಿಗಳಲ್ಲಿ 67 ಲಕ್ಷ ಮಂದಿ ವಾಸವಾಗಿದ್ದಾರೆ. ಈ ಪೈಕಿ ನೂರಾರು ಮಂದಿಯಲ್ಲಿ ಈಗಾಗಲೇ ಕೋವಿಡ್‌ ಸೋಂಕು ದೃಢಪಟ್ಟಿದೆ. ಆಸ್ಪತ್ರೆಗಳೆಲ್ಲ ಭರ್ತಿಯಾಗಿರುವುದರಿಂದ ಹೊಸದಾಗಿ ಸೋಂಕಿಗೊಳಗಾದವರಿಗೆ ಚಿಕಿತ್ಸೆಯೂ ಸಿಗುತ್ತಿಲ್ಲ.

ನೈಜೀರಿಯದ ಲಾಗೋಸ್‌ ನಗರ ಕೋವಿಡ್‌ ವಿರುದ್ಧ ಹೋರಾಡಲಾಗದೆ ಕೈಚೆಲ್ಲಿದೆ. 2.6 ಕೋಟಿ ಜನರು ಈ ನಗರದಲ್ಲಿದ್ದಾರೆ. ಈ ಪೈಕಿ ಮೂರನೇ ಒಂದು ಭಾಗ ಜನರು ವಾಸವಾಗಿರುವುದು 100ಕ್ಕೂ ಅಧಿಕವಿರುವ ಸ್ಲಮ್‌ಗಳಲ್ಲಿ.

ಬಾಂಗ್ಲಾದ ರಾಜಧಾನಿ ಢಾಕಾದಲ್ಲಿ ಕೋವಿಡ್‌ ವೈರಸ್‌ ಕಾಡ್ಗಿಚ್ಚಿನಂತೆ ಹರಲಾರಂಭಿಸಿದೆ. ಇಲ್ಲಿರುವ ರೋಹಿಂಗ್ಯ ನಿರಾಶ್ರಿತರ ಶಿಬಿರಗಳಲ್ಲಿ ವೈರಸ್‌ನ ಭೀತಿ ದಟ್ಟವಾಗಿದೆ.ಢಾಕಾದ 90 ಲಕ್ಷ ಜನಸಂಖ್ಯೆಯಲ್ಲಿ ಶೇ.40 ಮಂದಿ ವಾಸವಾಗಿರುವುದು ಸ್ಲಮ್‌ಗಳಲ್ಲಿ.

ವಿಯೆಟ್ನಾಂ, ಸಿಯೆರಾ ಲಿಯೋನ್‌, ಉಗಾಂಡದಂಥ ಕೆಲವು ಬಡ ರಾಷ್ಟ್ರಗಳು ಹಿಂದಿನ ಅನುಭವಗಳಿಂದ ಪಾಠ ಕಲಿತುಕೊಂಡು ವೈರಸ್‌ ಹಾವಳಿ ಶುರುವಾದಾಗಲೇ ಲಾಕ್‌ಡೌನ್‌ ಮತ್ತಿತರ ಕ್ರಮಗಳನ್ನು ಅನುಸರಿಸಿದ ಕಾರಣ ಬಚಾವಾಗಿವೆ. ಆದರೆ ಎಲ್ಲ ಬಡ ದೇಶಗಳಿಗೆ ಇದು ಸಾಧ್ಯವಾಗಿಲ್ಲ. ಅಂದಿನ ದುಡಿತ ಅಂದಿನ ತುತ್ತಿಗೆ ಸಾಕಾಗುವಂತಿರುವ ಬಡ ದೇಶಗಳಲ್ಲಿ ಲಾಕ್‌ಡೌನ್‌ ಹೇರಿದರೆ ಜನಜೀವನ ಇನ್ನೂ ದುಸ್ತರವಾಗುತ್ತಿತ್ತು.

ಹೆಚ್ಚಿನೆಡೆ ಸರಕಾರಗಳು ಸ್ಲಮ್‌ಗಳಲ್ಲಿ ಕೋವಿಡ್‌ ನಿಗ್ರಹಿಸಲು ಒಂದೋ ಕಠೊರ ಕ್ರಮಗಳನ್ನು ಅನುಸರಿಸುತ್ತಿವೆ ಇಲ್ಲವೇ ಪೂರ್ಣವಾಗಿ ನಿರ್ಲಕ್ಷಿಸಿ ಬಿಟ್ಟಿವೆ.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Heavy Rain: ಮರಳುಗಾಡು ದುಬೈನಲ್ಲಿ ಧಾರಾಕಾರ ಮಳೆ, ಪ್ರವಾಹ ಪರಿಸ್ಥಿತಿ-ಜನಜೀವನ ಅಸ್ತವ್ಯಸ್ತ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

Rain: ವರುಣನ ಆರ್ಭಟಕ್ಕೆ ನಲುಗಿದ ದುಬೈ… ವಿಮಾನ ನಿಲ್ದಾಣ ಜಲಾವೃತ, ಜನಜೀವನ ಅಸ್ತವ್ಯಸ್ಥ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.