ಬಾಣಂತಿ, ಮಗುವನ್ನು ಊರು ತಲುಪಿಸಿ ಮಾನವೀಯತೆ ಮೆರೆದ ಸಾರಿಗೆ ಸಂಸ್ಥೆ ಸಿಬ್ಬಂದಿ

ಒಂದೆರಡು ದಿನಗಳಲ್ಲಿ ನಾರಾಯಣಪುರಕ್ಕೆ ವಸ್ತಿ ಬಸ್‌ ಆರಂಭಿಸುತ್ತೇವೆ.

Team Udayavani, Aug 2, 2021, 6:32 PM IST

ಬಾಣಂತಿ, ಮಗುವನ್ನು ಊರು ತಲುಪಿಸಿ ಮಾನವೀಯತೆ ಮೆರೆದ ಸಾರಿಗೆ ಸಂಸ್ಥೆ ಸಿಬ್ಬಂದಿ

ಮುದ್ದೇಬಿಹಾಳ: ಮುದ್ದೇಬಿಹಾಳದಿಂದ ತಮ್ಮೂರು ನಾರಾಯಣಪುರಕ್ಕೆ ಹೋಗಲು ಬಸ್‌ ಇಲ್ಲದೇ ಬಸ್‌ ನಿಲ್ದಾಣದಲ್ಲಿ ಉಳಿದುಕೊಂಡಿದ್ದ ಬಾಣಂತಿ ಮತ್ತು ಮಗುವನ್ನು ಅವರೂರಿಗೆ ಮುಟ್ಟಿಸುವ ಮಾನವೀಯ ಕೆಲಸವನ್ನು ಸಾರಿಗೆ ಇಲಾಖೆ ಸಿಬ್ಬಂದಿ ಶನಿವಾರ ರಾತ್ರಿ ಮಾಡಿರುವ ಘಟನೆ ಇಲ್ಲಿ ನಡೆದಿದೆ. ತನಗೆ ಡ್ಯೂಟಿ ಇಲ್ಲದಿದ್ದರೂ ಹೆಚ್ಚುವರಿ ಡ್ಯೂಟಿ ಮಾಡಿ ಮಗು ಹಾಗೂ ತಾಯಿಯನ್ನು ಊರು ತಲುಪಿಸಿ ಮಾನವೀಯತೆ ಮೆರೆದ ಚಾಲಕ ರಾಚಪ್ಪ ಹೂಗಾರನ ಬಗ್ಗೆ ಇಲ್ಲೆಲ್ಲ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ಶನಿವಾರ (ಜು. 31) ರಾತ್ರಿ 10 ಗಂಟೆ ಸಮಯ. ಬಸ್‌ ನಿಲ್ದಾಣದಲ್ಲಿ ಒಂದೂವರೆ ತಿಂಗಳ ಆರಾಮ ಇಲ್ಲದ ಮಗುವನ್ನು ಮಡಿಲಲ್ಲಿ ಮಲಗಿಸಿಕೊಂಡು ತನ್ನ ಗಂಡ ಹಾಗೂ ತಾಯಿ ಜೊತೆ ಕುಳಿತಿದ್ದ ಶಂಕ್ರಮ್ಮ ನಾಲತವಾಡಗೆ ತನ್ನೂರು ನಾರಾಯಣಪುರ ಮುಟ್ಟುವ ಚಿಂತೆ ಕಾಡುತ್ತಿತ್ತು. ಕೊರೊನಾ ಕಾರಣದಿಂದ ರಾತ್ರಿ 9:30ಕ್ಕೆ ಮುದ್ದೇಬಿಹಾಳ ಘಟಕದಿಂದ ನಾರಾಯಣಪುರವರೆಗೆ ಹೋಗುತ್ತಿದ್ದ ವಸ್ತಿ ಬಸ್‌ ರದ್ದಾಗಿದೆ. ನಂತರ ರಾತ್ರಿಯೇ ಹೋಗುತ್ತಿದ್ದ ಸೊಲ್ಲಾಪುರ ರಾಯಚೂರು ಬಸ್‌ ಸಹ ರದ್ದಾಗಿದ್ದರಿಂದ ಮಗು ಸಮೇತ ಬಸ್‌ ನಿಲ್ದಾಣದಲ್ಲಿಯೇ ಕಳೆಯಬೇಕಾದ ಸ್ಥಿತಿ.

ವಿಷಯ ಗೊತ್ತಾಗುತ್ತಿದ್ದಂತೆಯೇ ಘಟಕ ವ್ಯವಸ್ಥಾಪಕ ರಾಹುಲ್‌ ಹೊನಸೂರೆ ಅವರಿಗೆ ಹಸಿರು ತೋರಣ ಬಳಗದ ಸದಸ್ಯ ಮಹಾಬಲೇಶ್ವರ ಗಡೇದ ಫೋನ್‌ ಮಾಡಿ ಬಾಣಂತಿ ಹಾಗೂ ಮಗುವನ್ನು ಅವರೂರಿಗೆ ಕಳಿಸುವ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು. ರಾಹುಲ್‌ ಹೊನಸೂರೆ ಅವರು ರಾತ್ರಿಯ ವೇಳೆ ಘಟಕದಲ್ಲಿ ಕರ್ತವ್ಯದ ಮೇಲಿದ್ದ ನಿಯಂತ್ರಣಾಧಿಕಾರಿ ನಿಂಗಣ್ಣ ತಳವಾರ ಅವರಿಗೆ ಸಾಧ್ಯವಾದಷ್ಟೂ ಪ್ರಯತ್ನ ಮಾಡಿ ಯಾವುದಾದರೂ ಬಸ್‌ ಮಾಡಿ ಕಳುಹಿಸುವಂತೆ ಸೂಚಿಸಿದರು.

ತಣ್ಣನೆ ಗಾಳಿ ಬೀಸುತ್ತ ಚಳಿಯಲ್ಲಿ ಚಡಪಡಿಸುತ್ತಿದ್ದ ಮಗುವನ್ನು ಕಂಡಾಕ್ಷಣ ನಿಂಗಣ್ಣ ತಳವಾರ ಅವರು ತಡ ಮಾಡದೇ ಅವರಿವರನ್ನು ವಿಚಾರಿಸುತ್ತ ನಡೆದರು. ಹೊರಗಿನಿಂದ ಬಂದು ವಸ್ತಿ ಮಾಡಿರುವ ಬಸ್‌ನವರು ಈ ಕೆಲಸ ಮಾಡಲು ಒಪ್ಪುವುದಿಲ್ಲ ಸರ್‌, ನಮ್ಮ ಡಿಪೋದವರೇ ಇದನ್ನು ಮಾಡಬೇಕು ಎಂದು ಅಲ್ಲಿಗೆ ಬೇರೆ ಕಡೆ ಒಪ್ಪಂದದ ಮೇಲೆ (ಸಿಸಿ) ಹೊರಟಿದ್ದ ಆರ್‌.ಎಸ್‌. ಹೂಗಾರ ಅವರನ್ನು ಒಪ್ಪಿಸಿದ ತಳವಾರ ಅವರು ಸ್ವತಃ ಬಾಣಂತಿ ಸಮೇತ ಬಸ್‌ಗಾಗಿ ಕಾಯುತ್ತಿದ್ದ 13 ಜನರಿಗೆ ತಾವೇ ಟಿಕೇಟ್‌ ಕೊಟ್ಟು ಊರು ತಲುಪಿಸುವ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದರು.

ರಾತ್ರಿ 8:30ರ ನಂತರ ನಾಲತವಾಡ, ವೀರೇಶ ನಗರ, ನಾರಾಯಣಪುರಕ್ಕೆ ಹೋಗುವವರಿಗೆ ಮೊದಲು ಇದ್ದ 9:30ರ ನಾರಾಯಣಪುರ ವಸ್ತಿ ಬಸ್‌ ಮತ್ತೆ ಶುರು ಮಾಡಬೇಕು. ಇದರಿಂದ ವ್ಯಾಪಾರ ವಹಿವಾಟು ಮುಗಿಸಿ ಊರಿಗೆ ಹೋಗುವವರಿಗೆ ಅನುಕೂಲ ಆಗುತ್ತದೆ.
ಶರಣು ಚಿನಿವಾರ, ನಾಲತವಾಡ ನಿವಾಸಿ

ವಿಜಯಪುರದಿಂದ ನಾಲತವಾಡಕ್ಕೆ ಹೋಗಬೇಕೆಂದಿದ್ದ ನಮಗೆ ಹತ್ತೇ ನಿಮಿಷದಲ್ಲಿ ನಮ್ಮೂರಿಗೆ ಹೋಗುವ ಬಸ್‌ ತಪ್ಪಿತು. ನಾವೇನು ಎಲ್ಲಿಯಾದರೂ ವಾಸ್ತವ್ಯ ಮಾಡಬಹುದಿತ್ತು, ಆದರೆ ಬಡ ಬಾಣಂತಿ ಮತ್ತು ಮಗುವಿನ ಸ್ಥಿತಿ ಬೇರೆಯಾಗಿತ್ತು. ಅವರ ಸ್ಥಿತಿ ನೋಡಿ ಅಪ ರಾತ್ರಿಯಲ್ಲಿಯೂ ಬಸ್‌ ಅನುಕೂಲ ಮಾಡಿದ ಘಟಕ ವ್ಯವಸ್ಥಾಪಕರಿಗೂ, ನಿಯಂತ್ರಣಾ ಧಿಕಾರಿಗಳಿಗೆ ಹಾಗೂ ಚಾಲಕರ ಕೆಲಸ ಮಾಡಿದ ರಾಚಪ್ಪ ಹೂಗಾರ ಅವರಿಗೂ ಪುಣ್ಯ ಬರಲಿ.
ಬಸಣ್ಣ ಮೇಗಲಮನಿ,
ಬಟ್ಟೆ ವ್ಯಾಪಾರಸ್ಥರು, ನಾಲತವಾಡ

ಕೊರೊನಾ ಸಂಬಂಧ ಬಹಳಷ್ಟು ಬಸ್‌ಗಳನ್ನು ರದ್ದು ಮಾಡಲಾಗಿದೆ. ಒಂದೆರಡು ದಿನಗಳಲ್ಲಿ ನಾರಾಯಣಪುರಕ್ಕೆ ವಸ್ತಿ ಬಸ್‌ ಆರಂಭಿಸುತ್ತೇವೆ.
ರಾಹುಲ್‌ ಹೊನಸೂರೆ,
ಘಟಕ ವ್ಯವಸ್ಥಾಪಕ, ಮುದ್ದೇಬಿಹಾಳ

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

1-wqqw

Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

IPL: ಇಂಪ್ಯಾಕ್ಟ್ ಪ್ಲೇಯರ್‌ ನಿಯಮಕ್ಕೆ ಅಕ್ಷರ್‌ ಪಟೇಲ್‌ ಕೂಡ ವಿರೋಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.