ಪಾಪಿಗಳ ಸಂಹರಿಸಿ ಹೀರೋ ಆದ ಸಜ್ಜನರ

ಉ.ಕರ್ನಾಟಕದ ಕುವರನ ಸಾಧನೆಗೆ ಜನತೆಯ ಬಹುಪರಾಕ್‌; ಎರಡು ಎನ್‌ಕೌಂಟರ್‌ನಲ್ಲೂ ಮೆಚ್ಚುಗೆ

Team Udayavani, Dec 7, 2019, 5:06 AM IST

sw-50

ರೋಣ: ತಾಲೂಕಿನ ಅಸೂಟಿ ಗ್ರಾಮದಲ್ಲಿ ಹೈದರಾಬಾದ್‌ ಪೊಲೀಸ್‌ ಅಧಿ ಕಾರಿ ವಿಶ್ವನಾಥ ಸಜ್ಜನರ ಅವರ ಮನೆ.

ಹುಬ್ಬಳ್ಳಿ: ಹೈದರಾಬಾದ್‌ನಲ್ಲಿ ಪಶು ವೈದ್ಯೆ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ ನಾಲ್ವರು ಪಾಪಿಗಳ ಎನ್‌ಕೌಂಟರ್‌ ನೇತೃತ್ವ ವಹಿಸಿದ್ದ, ಕನ್ನಡಿಗ ವಿಶ್ವನಾಥ ಸಜ್ಜನರ, ದೇಶದ “ಹೀರೋ’ ಆಗಿ ಹೊರಹೊಮ್ಮಿದ್ದಾರೆ. ಸಜ್ಜನರ ನಡೆಸಿದ ಎರಡು ಮಹತ್ವದ ಎನ್‌ಕೌಂಟರ್‌ಗಳಲ್ಲೂ ಆಂಧ್ರ ಹಾಗೂ ದೇಶಾದ್ಯಂತ ಮೆಚ್ಚುಗೆ-ಸಂಭ್ರಮಾಚಣೆ ವ್ಯಕ್ತವಾಗಿದೆ. ವಿಶ್ವನಾಥ ಸಜ್ಜನರ ಪ್ರಸ್ತುತ ಸೈಬರಾಬಾದ್‌ ಪೊಲೀಸ್‌ ಆಯುಕ್ತರಾಗಿದ್ದಾರೆ. ಪಶು ವೈದ್ಯೆ ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳ ಎನ್‌ಕೌಂಟರ್‌
ಮೂಲಕ ಅವಿಭಜಿತ ಆಂಧ್ರಪ್ರದೇಶಕ್ಕೆ ಸೀಮಿತವಾಗಿದ್ದ ಸಜ್ಜನರ ಸಾಹಸ ಕೀರ್ತಿ, ಇಡೀ ದೇಶಕ್ಕೆ ವ್ಯಾಪಿಸುವಂತಾಗಿದೆ.

ಕನ್ನಡದ ಹೆಮ್ಮೆಯ ಪುತ್ರ: ವಿಶ್ವನಾಥ ಸಜ್ಜನರ ಅವಿಭಜಿತ ಆಂಧ್ರಪ್ರದೇಶದಲ್ಲಿ ಎನ್‌ಕೌಂಟರ್‌
ಸ್ಪೆಷಲಿಸ್ಟ್‌ ಹಾಗೂ ಖಡಕ್‌ ಅಧಿಕಾರಿ ಎಂದೇ ಖ್ಯಾತಿ ಪಡೆದಿದ್ದಾರೆ. ಕನ್ನಡದ ಹೆಮ್ಮೆಯ ಪುತ್ರರೊಬ್ಬರು
ತೆಲುಗು ನೆಲದಲ್ಲಿ ವಿಜೃಂಭಿಸುತ್ತಿರುವುದು, ಅಲ್ಲಿನ ಕಾನೂನು-ಸುವ್ಯವಸ್ಥೆ ಸಮರ್ಪಕ ನಿರ್ವಹಣೆ
ನಿಟ್ಟಿನಲ್ಲಿ ಮೆಚ್ಚುಗೆ ರೂಪದ ಕಾರ್ಯ ನಿರ್ವಹಿಸುತ್ತಿರುವುದು ಸಹಜವಾಗಿಯೇ ಕನ್ನಡ ನಾಡಿಗೆ ಹೆಮ್ಮೆಯ ವಿಷಯವಾಗಿದೆ.

ವಿಶ್ವನಾಥ ಸಜ್ಜನರ ಮೂಲತ: ಗದಗ ಜಿಲ್ಲೆ ರೋಣ ತಾಲೂಕಿನ ಅಸೂಟಿಯವರಾಗಿದ್ದು, ನಂತರ ಅವರ
ಕುಟುಂಬ ಹುಬ್ಬಳ್ಳಿಗೆ ಸ್ಥಳಾಂತರಗೊಂಡಿದ್ದರಿಂದ ಪ್ರೌಢಶಿಕ್ಷಣವನ್ನು ಹುಬ್ಬಳ್ಳಿಯ ವಿಜಯನಗರದ ಲಯನ್ಸ್‌ ಆಂಗ್ಲ ಮಾಧ್ಯಮ ಶಾಲೆಯಲ್ಲಿ, ಪಿಯು ಹಾಗೂ ಪದವಿ ಶಿಕ್ಷಣವನ್ನು ಜಗದ್ಗುರು ಗಂಗಾಧರ ವಾಣಿಜ್ಯ ಕಾಲೇಜಿನಲ್ಲಿ ಮುಗಿಸಿದ್ದರು. ಮುಂದೆ, ಧಾರವಾಡದ ಕವಿವಿಯಲ್ಲಿ ಎಂಬಿಎ ಪದವಿ ಪಡೆದಿದ್ದರು.
ವಿದ್ಯಾರ್ಥಿಯಾಗಿದ್ದಾಗಲೇ ನಾಯಕತ್ವ ಗುಣ ಹೊಂದಿದ್ದ ಅವರು, ರಾಜಕೀಯಕ್ಕೆ ವಾಲಬಹುದು
ಎಂಬುದು ಹಲವರ ನಿರೀಕ್ಷೆ ಇತ್ತಾದರೂ, ಆಡಳಿತಾತ್ಮಕ ಸೇವೆ ಅವರನ್ನು ಸೆಳೆದಿತ್ತು. ದೆಹಲಿಗೆ
ತೆರಳಿ ಐಎಎಸ್‌ ಕೋಚಿಂಗ್‌ ಪಡೆದಿದ್ದರಾದರೂ, 1996ರಲ್ಲಿ ಐಪಿಎಸ್‌ಗೆ ಆಯ್ಕೆಯಾಗಿದ್ದು,
ಆಂಧ್ರಪ್ರದೇಶ ಕೇಡರ್‌ ಅಧಿಕಾರಿಯಾಗಿದ್ದರು. ಆಂಧ್ರಪ್ರದೇಶದಲ್ಲಿ ಅತ್ಯಂತ ಸೂಕ್ಷ್ಮ ವೆಂದೇ ಪರಿಗಣಿಸಲ್ಪಡುವ ಕಡಪಾ ಜಿಲ್ಲೆಯ ಪುಲಿವೆಂದುಲದಲ್ಲಿ ಡಿವೈಎಸ್‌ಪಿಯಾಗಿ ಸೇವೆ ಆರಂಭಿಸಿದ್ದರು.

ಎರಡು ಎನ್‌ಕೌಂಟರ್‌ಗಳಲ್ಲೂ ಮೆಚ್ಚುಗೆ: ಅವಿಭಜಿತ ಆಂಧ್ರಪ್ರದೇಶದಲ್ಲಿ ಸಜ್ಜನರ ಅವರು
ಅನಂತಪುರ, ವಾರಂಗಲ್‌, ನಲ್ಗೊಂಡ ಇನ್ನಿತರ ಕಡೆ ಎಸ್‌ಪಿ ಆಗಿ ಸೇವೆ ಸಲ್ಲಿಸಿದ್ದು, ಆಂಧ್ರಪ್ರದೇಶ
ವಿಭಜನೆಯಾಗಿ ತೆಲಂಗಾಣ ರಾಜ್ಯ ಉದಯಿಸಿದ ನಂತರ ತೆಲಂಗಾಣ ರಾಜ್ಯದ ಪೊಲೀಸ್‌
ಅಧಿಕಾರಿಯಾಗಿ ಐಜಿ ಕೇಡರ್‌ಗೆ ಬಡ್ತಿ ಹೊಂದಿದ್ದರು. 2018ರ ಮಾರ್ಚ್‌ನಲ್ಲಿ ಸೈಬರಾಬಾದ್‌ ಪೊಲೀಸ್‌ ಆಯುಕ್ತರಾಗಿ ನೇಮಕಗೊಂಡಿದ್ದರು.

ವಾರಂಗಲ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ವೇಳೆ 2008ರಲ್ಲಿ ಸಜ್ಜನರ
ನಡೆಸಿದ ಆ ಒಂದು ಎನ್‌ಕೌಂಟರ್‌, ಅವರನ್ನು ಇಡೀ ಅವಿಭಜಿತ ಆಂಧ್ರಪ್ರದೇಶದ “ಹೀರೋ’ನನ್ನಾಗಿ ಮಾಡಿತ್ತು. 2008ರಲ್ಲಿ ಯುವತಿಯೊಬ್ಬರ ಮೇಲೆ ಮೂವರು ದುಷ್ಕರ್ಮಿಗಳು ಆ್ಯಸಿಡ್‌ ದಾಳಿ ಮಾಡಿದ್ದರು.
ಈ ಪ್ರಕರಣ ಇಡೀ ಆಂಧ್ರಪ್ರದೇಶದಲ್ಲಿ ಸಂಚಲನ ಸೃಷ್ಟಿಸಿತ್ತು. ಸಾರ್ವಜನಿಕ ವಲಯದಲ್ಲಿ ಬಹುದೊಡ್ಡ
ವಿರೋಧಕ್ಕೆ ಕಾರಣವಾಗಿತ್ತು. ಘಟನೆ ನಡೆದ ಕೇವಲ ಎರಡು ದಿನಗಳಲ್ಲಿಯೇ ಜಿಲ್ಲಾ ಪೊಲೀಸ್‌
ವರಿಷ್ಠಾಧಿಕಾರಿಯಾಗಿದ್ದ ಸಜ್ಜನರ, ಪ್ರಕರಣದ ಮೂವರು ಆರೋಪಿಗಳಾದ ಶ್ರೀನಿವಾಸ, ಹರಿಕೃಷ್ಣ
ಹಾಗೂ ಸಂಜಯ ಅವರನ್ನು ಎನ್‌ಕೌಂಟರ್‌ ಮಾಡಿದ್ದರು. ಈ ಎನ್‌ಕೌಂಟರ್‌ಗೆ ಇಡೀ ಆಂಧ್ರಪ್ರದೇಶದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ 2019, ನ.27ರಂದು ಹೈದರಾಬಾದ್‌ ಹೊರವಲಯದಲ್ಲಿ ನಡೆದ ಪಶುವೈದ್ಯೆಯ ಅತ್ಯಾಚಾರದ ನಾಲ್ವರು ದುಷ್ಕರ್ಮಿಗಳ ಎನ್‌ ಕೌಂಟರ್‌ಗೆ ನೇತೃತ್ವ ವಹಿಸಿದ್ದು ಸಹ ವಿಶ್ವನಾಥ ಸಜ್ಜನರ. ಈ ಕಾರ್ಯಕ್ಕೆ ಇಡೀ ದೇಶಾದ್ಯಂತ ಬಹುದೊಡ್ಡ ಮೆಚ್ಚುಗೆ ವ್ಯಕ್ತವಾಗಿದೆ.

ಅವಿಭಜಿತ ಆಂಧ್ರಪ್ರದೇಶ, ನಕ್ಸಲ್‌ ಪೀಡಿತವಾಗಿತ್ತು. ಆ ಸಂದರ್ಭದಲ್ಲೂ ಸಜ್ಜನರ, ನಕ್ಸಲ್‌
ನಿಗ್ರಹದಲ್ಲಿ ತಮ್ಮದೇ ವಿಶಿಷ್ಟ ಸಾಧನೆ ತೋರಿದ್ದರು. ಸ್ವಯಂ ಘೋಷಿತ ಉಗ್ರ ಸಂಘಟನೆಯೊಂದನ್ನು
ರಚಿಸಿಕೊಂಡು, ಭಯೋತ್ಪಾದಕ ಕೃತ್ಯಗಳಿಗೆ ಮುಂದಾಗಿದ್ದ ಐವರನ್ನು ದಮನ ಮಾಡಿದ್ದರು.
ಮಾದಕದ್ರವ್ಯ ಮಾರಾಟ ದಂಧೆ, ಜಪಾನ್‌ ಲೈಫ್ ಹೆಸರಲ್ಲಿ ಜನರಿಗೆ ಟೋಪಿ ಪ್ರಕರಣ, ಸೈಬರ್‌ ಕ್ರೈಂ
ವಿಷಯವಾಗಿ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಪ್ರಕರಣಗಳನ್ನು ಬಯಲಿಗೆಳೆದಿದ್ದರು. ಶುಕ್ರವಾರ
ನಡೆದ ನಾಲ್ವರು ಪಾಪಿಗಳ ಎನ್‌ಕೌಂಟರ್‌ ಸಜ್ಜನರ ಅವರಿಗೆ ರಾಷ್ಟ್ರಮಟ್ಟದಲ್ಲಿ ಬಹುದೊಡ್ಡ ಹೆಸರು
ತಂದುಕೊಟ್ಟಿದೆ.

ಕಾಲೇಜು ಸ್ನೇಹಿತ ವಿಶ್ವನಾಥ ಸಜ್ಜನರ ಶಿಸ್ತಿನ ಅಧಿಕಾರಿ ಎಂಬುದಕ್ಕೆ ಹೆಮ್ಮೆ ಇದೆ. ಸೈಬರ್‌ ಅಪರಾಧದಲ್ಲಿ ಹೆಚ್ಚಿನ ನೈಪುಣ್ಯತೆ ತೋರಿದ್ದರು. ಉನ್ನತ ಸ್ಥಾನದಲ್ಲಿದ್ದರೂ ಅತ್ಯಂತ ಸರಳ ವ್ಯಕ್ತಿತ್ವ
ಅವರದ್ದು, ಇಂದಿಗೂ ನನ್ನೊಂದಿಗೆ ಉತ್ತಮ ಸ್ನೇಹ ಇಟ್ಟುಕೊಂಡಿದ್ದಾರೆ. ಹುಬ್ಬಳ್ಳಿಗೆ ಬಂದಾಗಲೊಮ್ಮೆ ಭೇಟಿಯಾಗುತ್ತೇವೆ. ಈ ಎನ್‌ಕೌಂಟರ್‌ ನೇತೃತ್ವ ವಹಿಸಿದ್ದವನು ನನ್ನ ಸ್ನೇಹಿತ ಹಾಗೂ ಕನ್ನಡದ ಪುತ್ರ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ ಇದೆ.
– ವೀರಣ್ಣ ಸವಡಿ, ಮಾಜಿ ಮಹಾಪೌರ.

ಅಮರೇಗೌಡ ಗೋನವಾರ

ಟಾಪ್ ನ್ಯೂಸ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್‌ರಿಂದ ಪರಿಶೀಲನೆ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್‌ ಸಿಟಿ ಅಧಿಕಾರಿ ಶ್ರೀನಿವಾಸ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.