ನಾನು “ಧ್ಯಾನಸ್ಥ’ಳಾದೆ…


Team Udayavani, Jul 8, 2020, 5:07 AM IST

anu-dhyana

ಕೆಲವು ತಿಂಗಳ ಹಿಂದೆ ಯಾವುದೋ ಕಾರಣಕ್ಕೆ ಪ್ಯಾನಿಕ್‌ ಅಟ್ಯಾಕ್‌ಗೆ ಒಳಗಾಗಿದ್ದೆ. ಆಗ ಡಾಕ್ಟರ್‌ ಧ್ಯಾನ, ಪ್ರಾಣಾಯಾಮ ಮಾಡಿ ಅಂತ ಸಲಹೆ ಮಾಡಿದ್ದರು. ಆದರೆ, ದಿನ ನಿತ್ಯದ ಒತ್ತಡದ ಮಧ್ಯೆ ಅದನ್ನು ಪಾಲಿಸಲು ಆಗಿರಲಿಲ್ಲ.  ಐದಾರು ದಿನ ಧ್ಯಾನಕ್ಕೆ ಕುಳಿತು, ತೂಕಡಿಸಿ ತೂಕಡಿಸಿ ಧ್ಯಾನ ಕಾರ್ಯಕ್ರಮಕ್ಕೆ ಇತಿಶ್ರೀ ಹಾಡಿದ್ದೆ. ಮಾಡಬೇಕಾಗಿರೋ ಕೆಲಸಗಳಿಗೇ ಸಮಯ ಸಾಕಾಗ್ತಾ ಇಲ್ಲ. ಇನ್ನು, ಕಣ್ಮುಚ್ಚಿ ಸುಮ್ಮನೆ ಕೂರಲು ಸಮಯವೆಲ್ಲಿದೆ ಅಂತ ನಂಗೆ ನಾನೇ  ಸಮಾಧಾನ ಮಾಡಿಕೊಂಡಿದ್ದೆ.

ಆದರೆ, ಎಲ್ಲ ಕೆಲಸಗಳಿಗೂ ಸಮಯ ಸಿಗುವ ಸಂದರ್ಭವೂ ಬಂತು. ಏಕಾಏಕಿ ಲಾಕ್‌ಡೌನ್‌ ಆಗಿ ಮನೆಯಲ್ಲಿ ಕೂರಬೇಕಾಯ್ತು. ನಿತ್ಯದ ಎಲ್ಲಾ ಕೆಲಸ ಮುಗಿಸಿದ ಮೇಲೂ ಸ್ವಲ್ಪ ಸಮಯ ಉಳಿಯುತ್ತಿತ್ತು.  ಈ ಸಮಯದಲ್ಲಿ ಧ್ಯಾನ ಮಾಡ್ಲಾ ಅಂತ ನನ್ನನ್ನು ನಾನೇ ಕೇಳಿಕೊಂಡೆ. ಟ್ರೈ ಮಾಡಿ ನೋಡು ಅಂದಿತು ಮನಸ್ಸು. ಇನ್ನುಮುಂದೆ, ಮನೆಯಲ್ಲಿ ಎಲ್ಲರೂ ಏಳುವ ಮೊದಲು ಧ್ಯಾನ ಮಾಡುವುದು ಅಂತ ಪ್ಲಾನ್‌ ಮಾಡಿಕೊಂಡೆ.

ಮೊದಲ ದಿನ ಪದ್ಮಾಸನದಲ್ಲಿ ಕುಳಿತುಕೊಳ್ಳಲಾಗದೆ,  ಐದು ನಿಮಿಷಕ್ಕೇ ಕಾಲು ಜೋಮು ಹಿಡಿಯಿತು. ಹಿಂದೆಯೇ, ಕೋವಿಡ್‌ 19 ಬಂದರೆ, ಕೆಲಸ ಹೋದರೆ ಅಂತೆಲ್ಲಾ ಕೆಟ್ಟ ಯೋಚನೆಗಳು ಬಂದು ಆಗಲ್ಲಪ್ಪ ಅಂತ ಎದ್ದು ಹೋದೆ. ಮರುದಿನವೂ ಛಲ ಬಿಡದೆ ಕುಳಿತೆ. ಕಾಲು ನೋವು, ತಲೆಯಲ್ಲಿ ಓಡುವ ನೂರಾರು ಯೋಚನೆ ಗಳು, ತೂಕಡಿಕೆ… ಒಂದು ವಾರವೆಲ್ಲ ಇದೇ ಹಾಡು. ಅಬ್ಬಬ್ಟಾ, ಸುಮ್ಮನೆ ಕಣ್ಮುಚ್ಚಿ ಕುಳಿತುಕೊಳ್ಳಲೂ ಎಷ್ಟು ಕಷ್ಟ!

ಛೇ, ಏನೇನೆಲ್ಲಾ  ಮಾಡುವ ನನಗೆ ಸುಮ್ಮನೆ ಕುಳಿತುಕೊಳ್ಳಲು ಆಗುವುದಿಲ್ಲ ಅಂದರೆ ಎಂಥಾ ನಾಚಿಕೆಗೇಡು. ಇಲ್ಲ ಇಲ್ಲ, ಹೇಗಾದರೂ ಮಾಡಿ ಧ್ಯಾನ ಮಾಡಲು ಕಲಿಯಲೇಬೇಕು ಅಂತ ನಿರ್ಧರಿಸಿದೆ. ಬಹಳ ವರ್ಷಗಳಿಂದ ಧ್ಯಾನ ಮಾಡುತ್ತಿರುವ  ಹಿರಿಯರೊಬ್ಬರ ಬಳಿ, ಸಮಸ್ಯೆ ಹೇಳಿಕೊಂಡಾಗ ಅವರು ಕೆಲವು ಟಿಪ್ಸ್‌ಗಳನ್ನು ಹೇಳಿದರು. “ಮೊದಲ ದಿನವೇ ಅರ್ಧ ಗಂಟೆ ಧ್ಯಾನ ಮಾಡಲು ಯಾರಿಗೂ ಆಗೋದಿಲ್ಲಮ್ಮಾ. ಮೊದಲು ಪದ್ಮಾಸನದಲ್ಲಿ ಕಣ್ಣು ಬಿಟ್ಟು ಕುಳಿತುಕೊಳ್ಳಲು  ಕಲಿ.

ಐದು ನಿಮಿಷ ಕುಳಿತಲ್ಲಿಂದ ಏಳದಿರುವುದೇ ದೊಡ್ಡ ಸಾಧನೆ. ಆಮೇಲೆ ಕಣ್ಣು ಮುಚ್ಚಿ ಕುಳಿತುಕೋ. ಯೋಚನೆಗಳು ಬಂದರೂ ಪರವಾಗಿಲ್ಲ. ಕ್ರಮೇಣ ಅಭ್ಯಾಸವಾಗುತ್ತೆ. ಮೊದಲ ದಿನವೇ ಅರ್ಧ ಗಂಟೆ ಧ್ಯಾನ ಮಾಡೋಕೆ ಋಷಿಗಳಿಗೂ ಆಗೋದಿಲ್ಲ ಅಂದರು’…  ಸತ್ಯ ಹೇಳ್ತೀನಿ, ಅವರ ಮಾತನ್ನು ಚಾಚೂ ತಪ್ಪದೆ ಪಾಲಿಸುತ್ತಾ, ಎರಡು ತಿಂಗಳಲ್ಲಿ ಧ್ಯಾನಕ್ಕೆ ಹೊಂದಿಕೊಂಡಿದ್ದೇನೆ. ಆ ಏಳೆಂಟು ನಿಮಿಷ ಬೇರೆ ಯಾವುದರ ಬಗ್ಗೆ ಯೋಚಿಸದೆ, ಉಸಿರಾಟವನ್ನು  ಗಮನಿಸಲು ಕಲಿತಿದ್ದೇನೆ. ಥ್ಯಾಂಕ್ಸ್‌ ಟು  ಲಾಕ್‌ಡೌನ್‌!

* ಪ್ರೇಮಾ ನಾಗರಾಜ್

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.