ಎಲ್ಲವೂ ಸರಿ ಇದ್ದಿದ್ದರೆ…


Team Udayavani, May 20, 2020, 4:54 AM IST

yellavu

“ಎಲ್ಲವೂ ಸರಿ ಇದ್ದಿದ್ದರೆ, ಇಷ್ಟೊತ್ತಿಗೆ ನಾನು ಸಾವಿರ ಹಪ್ಪಳ ಮಾಡ್ತಿದ್ದೆ ಗೊತ್ತಾ…’ ಬೆಂಗಳೂರಿನ ಉರಿ ಬಿಸಿಲನ್ನು ದಿಟ್ಟಿಸುತ್ತಾ ಹೀಗಂತ ಅದೆಷ್ಟು ಬಾರಿ ಹೇಳಿದ್ದೇನೋ  ಲೆಕ್ಕವಿಲ್ಲ. “ಬಿಡು ಮಾರಾಯ್ತಿ, ಮುಂದಿನ ವರ್ಷವೂ ಹಲಸಿನ  ಕಾಯಿ ಇರುತ್ತೆ. ಬಿಸಿಲಂತೂ ಇದ್ದೇ ಇರುತ್ತೆ. ಆಗ ಹಪ್ಪಳ ಮಾಡುವಿಯಂತೆ, ಈಗ ಸುಮ್ಮನಾಗು’ ಎಂದು ರೇಗುತ್ತಾರೆ ಯಜಮಾನರು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಯುಗಾದಿ ಹಬ್ಬಕ್ಕೆ ನಾನು ಊರಿಗೆ ಹೋಗ್ಬೇಕಿತ್ತು.

ಏಪ್ರಿಲ್‌   ಮೊದಲ ವಾರ ನಡೆಯಲಿದ್ದ ಅಕ್ಕನ ಮಗಳ ಮದುವೆ ಮುಗಿಸಿ, ಅಮ್ಮ- ಅತ್ತಿಗೆಯ ಜೊತೆ ಸೇರಿ, ವರ್ಷ ಕ್ಕಾಗುವಷ್ಟು ಹಲಸಿನ ಹಪ್ಪಳ, ಚಿಪ್ಸ್, ಸಂಡಿಗೆ ಮಾಡ ಬೇಕಿತ್ತು. ಅಟ್ಟದ ಮೇಲಿರುವ ಚನ್ನೆಮಣೆ ತೆಗೆದು, ಮಕ್ಕಳಿಗೆ ಆಟ ಕಲಿಸಬೇಕಿತ್ತು.  ಮಾವಿನ ಹಣ್ಣಿನಿಂದ ಮಾಡಿದ, ಅಮ್ಮನ ಕೈ ರುಚಿಯ ಸೀಕರಣೆ ಸವಿಯ ಬೇಕಿತ್ತು. ಕಾಡಿನ ಹಣ್ಣುಗಳನ್ನು ಮಕ್ಕಳಿಗೆ ಪರಿಚಯಿಸಬೇಕಿತ್ತು. ಉಪ್ಪಿನಕಾಯಿ ಮಾಡುವುದನ್ನು, ಅತ್ತೆ ಯಿಂದ ಹೇಳಿಸಿಕೊಳ್ಳಬೇಕಿತ್ತು.

ಮಕ್ಕಳ  ರಜೆ ಮುಗಿ ಯುವತನಕ ಊರಲ್ಲೇ ಇದ್ದು, ಆಮೇಲೆ ಹಪ್ಪಳ, ಸಂಡಿಗೆಯ ಗಂಟಿನೊಂದಿಗೆ ಬೆಂಗಳೂರು ಬಸ್ಸು ಹತ್ತಬೇಕಿತ್ತು… ಆದರೆ, ಮಾರ್ಚ್‌ ಮೊದಲ ವಾರವೇ, ಕೊರೊನಾ ಭಾರತದ ದಾರಿ ಹಿಡಿದು ಬಂದಿತ್ತು. ಇದ್ದಕ್ಕಿದ್ದಂತೆ,  ಮಕ್ಕಳಿಗೆ ಎಕ್ಸಾಮ್‌ ಇಲ್ಲ ಅಂತ ಘೋಷಿಸಲಾಯ್ತು. ಯಜಮಾನರ ಆಫೀಸಿನಲ್ಲೂ ವರ್ಕ್‌ ಫ್ರಮ್‌ ಹೋಂ ಬಗ್ಗೆ ಮಾತು ಕೇಳಿ ಬಂತು. “ಈಗಲೇ ಊರಿಗೆ ಹೋಗೋದು ಬೇಡ.

ವರ್ಕ್‌ ಫ್ರಮ್‌ ಹೋಂ ಕೊಡುತ್ತಾರಾ ಅಂತ ನೋಡಿಕೊಂಡು,  ಯುಗಾದಿ ಹಿಂದಿನ ದಿನ ಎಲ್ಲಾ ಒಟ್ಟಿಗೆ ಹೊರ ಡೋಣ’ ಅಂದ್ರು ಮನೆಯವರು. ಜನತಾ ಕರ್ಫ್ಯೂ ಅಂತ ಒಂದು ದಿನ ಒಳಗಿದ್ದವರು, ವಾರವಲ್ಲ, ತಿಂಗಳುಗಟ್ಟಲೆ ಗೃಹ ಬಂಧಿಗಳಾಗ್ತಿವಿ ಅಂತ ಗೊತ್ತಿದ್ದಿದ್ದರೆ… ಆನಂತರದ ಒಂದೂವರೆ ತಿಂಗಳ ಬಗ್ಗೆ  ಹೇಳಬಾರದು ಬಿಡಿ. ಅದಾಗಲೇ ಊರಿಗೆ  ಹೋಗಿದ್ದ ಅಕ್ಕ, ತಂಗಿ, ಅವರ ಮಕ್ಕಳು, ಹಳ್ಳಿಯ ಬೆಟ್ಟ-ಗುಡ್ಡಗಳನ್ನೆಲ್ಲ ಹತ್ತಿ,

ಕಾಡಿನ ಹಣ್ಣುಗಳನ್ನೆಲ್ಲ ತಿಂದು, ಹಲಸಿನ ಚಿಪ್ಸ್, ಹಪ್ಪಳ ಮಾಡಿ, ನನ್ನ ಹೊಟ್ಟೆ ಉರಿಸಲೆಂದೇ ಹತ್ತಾರು ಫೋಟೋ  ಕಳಿಸುತ್ತಿದ್ದರು; “ನೀನೊಬ್ಬಳೇ ಮಿಸ್ಸಿಂಗ್‌ ಕಣೇ’ ಅನ್ನೋ ಕ್ಯಾಪ್ಶನ್‌ ಜೊತೆಗೆ. ಕೆಲವೊಮ್ಮೆ ವಿಡಿಯೋ ಕಾಲ್‌ ಮಾಡಿಯೂ, ನನ್ನ ಬೇಸರವನ್ನು ಇನ್ನಷ್ಟು ಹೆಚ್ಚಿಸುತ್ತಿದ್ದರು. ಅವರ ಸಂಭ್ರಮವನ್ನೆಲ್ಲ ನೋಡಿ, ಮನಸ್ಸು ಹೇಳುತ್ತಿತ್ತು:  ಎಲ್ಲವೂ ಅಂದುಕೊಂಡಂತೆಯೇ ಆಗಿದ್ದರೆ, ನಾನೂ ಅವರೊಂದಿಗೆ ಇರಬೇಕಿತ್ತು…

* ರಶ್ಮಿ ಎ.ಪಿ.

ಟಾಪ್ ನ್ಯೂಸ್

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

14-

Kasaragodu: ಹಣದ ವಿವಾದ: ಪೆಟ್ರೋಲ್‌ ಸುರಿದು ಮಹಿಳೆಯ ಕೊಲೆಗೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.