ಕ್ರಿಕೆಟ್ನತ್ತ ನನ್ನ ಒಲವು ಹೋಗದಿದ್ದರೆ ನಾನು ಸೈನಿಕನಾಗುತ್ತಿದ್ದೆ: ರೋವ್ಮನ್ ಪೊವೆಲ್
Team Udayavani, May 11, 2022, 5:10 PM IST
ಮುಂಬಯಿ: ಡೆಲ್ಲಿ ಕ್ಯಾಪಿಟಲ್ಸ್ನ ಆಲ್ರೌಂಡರ್ ಆಗಿರುವ ರೋವ್ಮನ್ ಪೊವೆಲ್ ತಮ್ಮ ಜೀವನ ಪ್ರಯಾಣದ ಕಥೆಯನ್ನು ತೆರೆದಿಟ್ಟಿದ್ದಾರೆ.
ಬಡ ಕುಟುಂಬದಿಂದ ಬಂದ ಅವರು ಕ್ರಿಕೆಟ್ ಆಟದ ಕಡೆ ಒಲವು ತೋರಿಸಿದ ಕಾರಣವನ್ನು ತಿಳಿಸಿದ್ದಾರೆ. ಕುಟುಂಬವನ್ನು ಬಡತನದಿಂದ ಹೊರತರುವುದು ಅವರ ಬಾಲ್ಯದ ಕನಸಾಗಿತ್ತು ಮತ್ತು ಅದಕ್ಕಾಗಿ ಕ್ರಿಕೆಟ್ನತ್ತ ನನ್ನ ಒಲವು ಹೋಗದಿದ್ದರೆ ಸೈನಿಕನಾಗುತ್ತಿದ್ದೆ ಎಂದವರು ಬಹಿರಂಗಪಡಿಸಿದರು.
ರೋವ್ಮನ್ ಪೊವೆಲ್ ಡೆಲ್ಲಿ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಈ ಬಾರಿಯ ಐಪಿಎಲ್ನಲ್ಲಿ ಕೆಳ ಕ್ರಮಾಂಕದಲ್ಲಿ ಅವರು ತಂಡದ ಪವರ್ ಹಿಟ್ಟರ್ ಆಗಿದ್ದಾರೆ. ಇಷ್ಟರವರೆಗಿನ ಕೆಲವು ಪಂದ್ಯಗಳಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು.
ಡೆಲ್ಲಿ ಕ್ಯಾಪಿಟಲ್ಸ್ನ ಪೊಡ್ಕಾಸ್ಟ್ನಲ್ಲಿ ಪೊವೆಲ್ ತನ್ನ ಭಾವನಾತ್ಮಕ ಕಥೆಯನ್ನು ಹಂಚಿಕೊಂಡರು. ನಾನು ಜಮೈಕಾದ ಪುಟ್ಟ ಗ್ರಾಮದಿಂದ ಬಂದಿದ್ದೇನೆ. ಅಲ್ಲಿರುವ ಹೆಚ್ಚಿನೆಲ್ಲ ಕುಟುಂಬಗಳಿಗೆ ಕೃಷಿ ಆದಾಯದ ಮೂಲವಾಗಿದೆ. ಬಾಲ್ಯದ ದಿನಗಳಲ್ಲಿರುವಾಗಲೇ ನನಗೊಂಡು ಕನಸು ಇತ್ತು. ಕ್ರಿಕೆಟ್ ಅಥವಾ ಶಿಕ್ಷಣದ ಮೂಲಕ ಕುಟುಂಬವನ್ನು ಬಡತನದಿಂದ ದೂರ ಮಾಡುವುದು ನನ್ನ ಕನಸ್ಸಾಗಿತ್ತು.
ದೇವರ ಕೃಪೆಯಿಂದ ಕ್ರಿಕೆಟ್ ರಂಗದಲ್ಲಿ ನಾನು ಚೆನ್ನಾಗಿ ನಿರ್ವಹಣೆ ನೀಡುತ್ತಿದ್ದೇನೆ. ನಾನು ವೃತ್ತಿಪರ ಕ್ರಿಕೆಟಿಗನಾಗುವ ಮೊದಲು ಸೈನಿಕನಾಗುವ ಬಯಕೆ ಹೊಂದಿದ್ದೆ. ಕ್ರಿಕೆಟ್ ನನ್ನನ್ನು ಹಿಡಿಯದಿದ್ದರೆ ನಾನೀಗ ಸೈನಿಕನಾಗುತ್ತಿದ್ದೆ ಎಂದವರು ಹೇಳಿದರು.
ಕುಟುಂಬದ ಸದಸ್ಯ ಫ್ರಾಂಚೈಸಿ ಜತೆಗೆ ಯಾವ ರೀತಿ ಸಮಯ ಕಳೆಯುತ್ತಿದ್ದೆ ಎಂಬ ವಿಷಯದ ಬಗ್ಗೆ ಮಾತನಾಡಿದ ಪವರ್ ಹಿಟ್ಟರ್ ಪೊವೆಲ್ ಅವರು ತನ್ನನ್ನು ಕುಟುಂಬದ ಸದಸ್ಯರಂತೆ ನೋಡಿಕೊಳ್ಳುತ್ತಿದ್ದಾರೆ ಎಂದರು.
ಆಟಗಾರನೋರ್ವನಿಗೆ ತಂಡದಲ್ಲಿ ಒಳ್ಳೆಯ ವಾತಾವರಣದ ಅಗತ್ಯವಿದೆ ಎಂದು ಒತ್ತಿ ಹೇಳಿದ ಅವರು ಇದು ಆಟಗಾರ ಶ್ರೇಷ್ಠ ನಿರ್ವಹಣೆ ನೀಡಲು ನಿರ್ಣಾಯಕ ಪಾತ್ರ ವಹಿಸಲಿದೆ ಎಂಬುದನ್ನು ಮನದಟ್ಟು ಮಾಡಿದರು.
ಬಹಳಷ್ಟು ದೂರದ ಕೆರಿಬಿಯನ್ನಿಂದ ಬಂದಿರುವ ನನಗೆ ತವರಿನಲ್ಲಿ ಇರುವಂತಹ ಅನುಭವ ಸಿಗುವುದು ಅತ್ಯಗತ್ಯವಾಗಿತ್ತು. ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ನನ್ನನ್ನು ಅವರ ಕುಟುಂಬದ ಸದಸ್ಯರೆಂಬುದನ್ನು ಒಪ್ಪಿಕೊಂಡಿದೆ ಮತ್ತು ತವರಿನಲ್ಲಿ ಇದ್ದೇನೆ ಎಂಬ ಭಾವನೆಯಾಗುತ್ತಿದೆ ಎಂದ ಅವರು ಈ ಭಾವನೆಯೇ ಶ್ರೇಷ್ಠ ನಿರ್ವಹಣೆ ನೀಡಲು ಪ್ರೇರಕ ಶಕ್ತಿಯಾಗಿದೆ ಎಂದರು.
ರಿಷಬ್ ಪಂತ್ ಅವರ ನಡತೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಮೊದಲ ದಿನದಿಂದ ಇಲ್ಲಿಯತನಕ ಅವರು ನನ್ನ ಬೆಂಬಲಕ್ಕೆ ನಿಂತಿದ್ದಾರೆ ಮತ್ತು ಕೆರಿಬಿಯನ್ ಆಟಗಾರರೆಲ್ಲರೂ ಉತ್ತಮ ಆಟಗಾರರು ಎಂದು ಹೇಳುತ್ತ ಬಂದಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ