ಗೋವಾ ಚಿತ್ರೋತ್ಸವಕ್ಕೆ ಚಾಲನೆ: ಸುವರ್ಣ ಅಧ್ಯಾಯಕ್ಕೆ ಸಂಗೀತ ಮತ್ತು ಸಮ್ಮಾನದ ಮುಕುಟ
ಅಭಿಮಾನಿಗಳ ಋಣ ತೀರಿಸಲು ಸಾಧ್ಯವಿಲ್ಲ : ಸ್ಪೆಷಲ್ ಐಕಾನ್ ಪ್ರಶಸ್ತಿ ವಿಜೇತ ರಜನಿಕಾಂತ್ ವಿನಮ್ರ ನುಡಿ
Team Udayavani, Nov 20, 2019, 6:24 PM IST
ಪಣಜಿ: ಡಾ. ಶ್ಯಾಮಪ್ರಸಾದ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ 50ನೇ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಬುಧವಾರ ಅದ್ಧೂರಿ ಚಾಲನೆ ನೀಡಲಾಯಿತು. ಸಾಂಪ್ರದಾಯಿಕ ರೀತಿಯಲ್ಲಿ ಮುಖ್ಯ ಅತಿಥಿಗಳು ಜ್ಯೋತಿ ಬೆಳಗುವ ಮೂಲಕ ಉತ್ಸವವನ್ನು ಉದ್ಘಾಟಿಸಿದರು. ಆದರೆ ಇಡೀ ಉತ್ಸವಕ್ಕೆ ಖದರ್ ತುಂಬಿದ್ದು ಶಂಕರ್ ಮಹದೇವನ್ ತಂಡದ ಪ್ಯೂಷನ್ ಸಂಗೀತ.
ಮರಾಠಿ ಚಲನ ಚಿತ್ರ ‘ಕತ್ಯಾರ್ ಕಲ್ಜತ್ ಘುಸ್ಲೀ’ಯ ಗಣಪತಿ ಪ್ರಾರ್ಥನಾ ಗೀತೆ ‘ಸೂರ ನಿರಾಗ ಸಹೋ’ದಿಂದ ಆರಂಭಿಸಿದಾಗ ಕರತಾಡನ. ಬಳಿಕ ತಮ್ಮ ಅಮೋಘ ಸಂಗೀತ ಪ್ರದರ್ಶನದ ಮೂಲಕ ಪ್ರೇಕ್ಷಕರನ್ನು ಖುಷಿ ಪಡಿಸಿದರು.
ಈ ಸಂಗೀತ ರಸಸ್ವಾದದ ಬಳಿಕ ಸಚಿವರಾದಿಯಾಗಿ ಮಾತನಾಡಿದರೂ ಮತ್ತೆ ಅಮೋಘ ಕರತಾಡನ, ಸೀಟಿ ಕೇಳಿ ಬಂದಿದ್ದು ಹಿರಿಯ ನಟ ರಜನೀಕಾಂತ್ ಅವರನ್ನು ಸಮ್ಮಾನಿಸಿದ ಸಂದರ್ಭದಲ್ಲಿ. ಸುವರ್ಣ ಮಹೋತ್ಸವದ ಅಂಗವಾಗಿ ರಜನೀಕಾಂತ್ ಅವರನ್ನು ಸಮ್ಮಾನಿಸಲಾಯಿತು. ಆಗ ಜನರೆಲ್ಲಾ ಎದ್ದು ನಿಂತು ಅಭಿನಂದಿಸಿದರು.
ಈ ಗೌರವ ಸ್ವೀಕರಿಸಿ ಉತ್ತರಿಸಿದ ರಜನೀಕಾಂತ್, ಈ ಗೌರವ ನನ್ನ ಚಿತ್ರಗಳ ನಿರ್ಮಾಪಕರಿಗೆ, ನಿರ್ದೆಶಕರಿಗೆ, ತಂತ್ರಜ್ಞರಿಗೆ ಸಲ್ಲಬೇಕು. ಹಾಗೆಯೇ ನನ್ನ ಅಭಿಮಾನಿಗಳನ್ನು ಮರೆಯಲಾರೆ ಎಂದು ವಂದನೆ ಸಲ್ಲಿಸಿದರು. ಜೀವಮಾನ ಸಾಧನೆಗಾಗಿ ಪ್ರಶಸ್ತಿ ಸ್ವೀಕರಿಸಿ ಧನ್ಯವಾದ ಸಲ್ಲಿಸಿದವರು ನಟಿ ಹೆಸ್ಬುಲ್ಲ, ‘ಸಿನಿಮಾ ನನ್ನ ಬದುಕಿನ ಭಾಗ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sidhu Moosewala: ಗಂಡು ಮಗುವಿಗೆ ಜನ್ಮ ನೀಡಿದ ಸಿಧು ಮೊಸೆವಾಲ ತಾಯಿ
Box office: ಸಿದ್ದಾರ್ಥ್ ʼಯೋಧʼ ಎದುರು ಸದ್ದು ಮಾಡದ ಅದಾ ಶರ್ಮಾ ʼಬಸ್ತಾರ್ʼ
“ದೊಡ್ಡ ಸೌತ್ ಸಿನಿಮಾ ಮಾಡುತ್ತಿದ್ದೇನೆ” ಎಂದ ಕರೀನಾ: ಯಶ್ ಜೊತೆ ಬೇಬೋ ನಟಿಸೋದು ಪಕ್ಕಾ?
ಸಟ್ಟೇರುವ ಮುನ್ನವೇ ಬಹುಕೋಟಿ ʼರಾಮಾಯಣʼಕ್ಕೆ ಸಂಕಷ್ಟ: ನಿರ್ಮಾಣದಿಂದ ಹಿಂದೆ ಸರಿದ ನಿರ್ಮಾಪಕ
ನಿಜಕ್ಕೂ ಅಮಿತಾಬ್ ಬಚ್ಚನ್ ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗಿದ್ರಾ? ಬಿಗ್ ಬಿ ಹೇಳಿದ್ದೇನು
MUST WATCH
ಹೊಸ ಸೇರ್ಪಡೆ
ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ
Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ
Bhuvanam gaganam Teaser: ಭುವನಂ ಗಗನಂ ಟೀಸರ್ ಬಂತು
Bharjari Gandu: ಟ್ರೇಲರ್ನಲ್ಲಿ ಭರ್ಜರಿ ಗಂಡು
Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್ನಲ್ಲಿ ಶೂಟಿಂಗ್!