ಇಕತ್‌ ಅಂದ್ರೆ ಸಖತ್‌ ಇಷ್ಟ!


Team Udayavani, Jun 24, 2020, 4:53 AM IST

ekath-sakath

ಇಂಡೋನೇಷ್ಯಾದ ಅಲಂಕಾರಿಕಾ ತಂತ್ರ ಬಳಸಿ, ನೇಯ್ಗೆಯ ಮುನ್ನ ದಾರಗಳನ್ನು ಟೈ- ಡೈ ಮಾಡಲಾಗುತ್ತದೆ. ವಿಶಿಷ್ಟ ಆಕೃತಿಗಳನ್ನು ಮೂಡಿಸಲು, ಬಟ್ಟೆಯ ಕೆಲವು ಭಾಗಗಳಲ್ಲಿ ದಾರಗಳನ್ನು ಡೈ ಮಾಡಲಾಗುತ್ತದೆ. ಇದೇ ಈ ಬಟ್ಟೆಯ  ವೈಶಿಷ್ಟ್ಯ.

ಕುರ್ತಿ, ಸಾರ್ವಕಾಲಿಕವಾಗಿ ಚಾಲ್ತಿಯಲ್ಲಿರುವ ಉಡುಗೆ. ಹತ್ತಾರು ಬಗೆಯ ಕುರ್ತಿಗಳಲ್ಲಿ ಈಗ ಟ್ರೆಂಡ್‌ ಆಗುತ್ತಿರುವುದು ಇಕತ್‌ ಕುರ್ತಿಗಳು. ನೋಡಲು ಸ್ಟೈಲಿಶ್‌, ತೊಡಲು ಆರಾಮದಾಯಕ- ಇದು ಈ ಉಡುಗೆ ಇಷ್ಟವಾಗಲು ಕಾರಣ.  ಮೂಲತಃ ಇಂಡೋನೇಷ್ಯಾದ ಅಲಂಕಾರಿಕಾ ತಂತ್ರ ಬಳಸಿ, ನೇಯ್ಗೆಯ ಮುನ್ನ ದಾರಗಳನ್ನು ಟೈ- ಡೈ ಮಾಡಲಾಗುತ್ತದೆ. ವಿಶಿಷ್ಟ ಆಕೃತಿಗಳನ್ನು ಮೂಡಿಸಲು, ಬಟ್ಟೆಯ ಕೆಲವು ಭಾಗಗಳಲ್ಲಿ ದಾರಗಳನ್ನು ಡೈ ಮಾಡಲಾಗುತ್ತದೆ. ಇದೇ   ಬಟ್ಟೆಯ ವೈಶಿಷ್ಟ್ಯ. ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಿ, ಚಳಿಗಾಲದಲ್ಲಿ ಬೆಚ್ಚಗಿಡುವ ಹತ್ತಿಯ ಬಟ್ಟೆ ಬಳಸಿ ಈ ಇಕತ್‌ ಕುರ್ತಿಗಳನ್ನು ತಯಾರಿಸಲಾಗುತ್ತದೆ. ಸಾಂಪ್ರದಾಯಿಕ ಕೈಮಗ್ಗದ ಬಟ್ಟೆಗಳಲ್ಲಿ ಇದು ಕೂಡಾ ಒಂದು.

ಎಲ್ಲೆಡೆ ಇದೆ ಇಕತ್‌ ಹವಾ!: ಲ್ಯಾಟಿನ್‌ ಅಮೆರಿಕ, ಇರಾನ್‌, ಥೈಲ್ಯಾಂಡ್‌, ಕಾಂಬೋಡಿಯಾ, ಜಪಾನ್‌, ಭಾರತ ಸೇರಿದಂತೆ ಬಹಳಷ್ಟು ಕಡೆ ಇಕತ್‌ ಬಟ್ಟೆಗಳು ಪ್ರಸಿದ್ಧವಾಗಿವೆ. ಇಕತ್‌ ಬಟ್ಟೆಗಳಿಂದ ಕುರ್ತಿ ಅಷ್ಟೇ ಅಲ್ಲದೆ, ಲಂಗ, ಪ್ಯಾಂಟ್‌,  ಜಾಕೆಟ್‌, ಬ್ಯಾಗ್‌, ಟೋಪಿ, ಪರ್ಸ್‌, ಪಾದರಕ್ಷೆ, ಅಂಗಿ, ಶಾರ್ಟ್ಸ್, ದುಪಟ್ಟಾ, ಚೂಡಿದಾರ, ಸಲ್ವಾರ್‌ ಕಮೀಜ್, ಅನಾರ್ಕಲಿ, ಇತ್ಯಾದಿ ವ‌ಸ್ತ್ರಗಳನ್ನು ತಯಾರಿಸಲಾಗುತ್ತದೆ.

ಚಂದದ ಜ್ಯುವೆಲರಿ ತೊಡಿ…: ಇಕತ್‌ ಕುರ್ತಿಗಳ ಜೊತೆ ಸಾಂಪ್ರದಾಯಿಕ ಆಭರಣಗಳು ಚೆನ್ನಾಗಿ ಕಾಣುತ್ತವೆ. ಬೆಳ್ಳಿ ಅಥವಾ ಆಕ್ಸಿಡೈಸ್ಡ್‌ ಜರ್ಮನ್‌ ಸಿಲ್ವರ್‌ನ ಜುಮ್ಕಿ, ಅಫ್ಘಾನ್‌ ಚಾಂದ್‌ ಬಾಲಿ, ಶಾಂಡೇಲಿಯರ್‌ (ನೇತಾಡುವ) ಕಿವಿ ಓಲೆ,  ತೊಟ್ಟರೆ ಚೆನ್ನ. ಬೆಳ್ಳಿ ಅಥವಾ ಬೆಳ್ಳಿಯನ್ನು ಹೋಲುವ ಬಳೆಗಳು, ಸರ, ಉಂಗುರ, ಕಾಲ್ಗೆಜ್ಜೆ, ಹೇರ್‌ ಆಕ್ಸೆಸರೀಸ್‌, ಸೊಂಟ ಪಟ್ಟಿ ತೊಡಬಹುದು. ಹಾಗೆಯೇ ಕೊಲ್ಹಾಪುರಿ ಚಪ್ಪಲಿ, ಜುತ್ತಿ, ಮೋಜ್ರಿಯಂಥ ಭಾರತೀಯ ಶೈಲಿಯ  ಪಾದರಕ್ಷೆಗಳು ಇಕತ್‌ ಡ್ರೆಸ್‌ಗೆ ಚೆನ್ನಾಗಿ ಹೊಂದುತ್ತವೆ.

ಶೂ ತೊಟ್ಟರೆ ಹೇಗೆ?: ಜೀನ್ಸ್‌ (ಡೆನಿಮ್‌ ಪ್ಯಾಂಟ್‌) ಜೊತೆ ಕುರ್ತಿ ತೊಡುವು ದಾದರೆ ಶೂಸ್‌, ಸ್ನೀಕರ್ಸ್‌ ಅಥವಾ ಬೂಟ್‌ ಚೆನ್ನ. ಇವು ಗಳಿಗೆ ಕಾಲರ್‌ ಇರಲೇ ಬೇಕೆಂ ದಿಲ್ಲ. ಇರುವುದಾದರೆ, ಚೈನೀಸ್‌ ಕಾಲರ್‌ ಚೆನ್ನಾಗಿ ಕಾಣುತ್ತದೆ.  ತೋಳುಗಳೂ ಅಷ್ಟೇ- ಉದ್ದ, ಕಾಲು, ಅರ್ಧ, ಮುಕ್ಕಾಲು, ಅಥವಾ ಸ್ಲಿವ್‌ಲೆಸ್‌- ಹೀಗೆ ಎಲ್ಲ ಬಗೆಯ ಆಯ್ಕೆಗಳಿವೆ.

ಸಮಂತಾ ಕಾರಣ: ಇಕತ್‌ ಕುರ್ತಿಗಳು ಈಗ ಟ್ರೆಂಡ್‌ ಆಗಲು ಕಾರಣ, ಬಹುಭಾಷಾ ನಟಿ ಸಮಂತಾ ಅಕ್ಕಿನೇನಿ. ಇಕತ್‌ ಕುರ್ತಿ ತೊಟ್ಟು ತೋಟಗಾರಿಕೆ ಮಾಡುತ್ತಿರುವ ಚಿತ್ರವನ್ನು ಸಮಂತಾ, ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ  ಹಂಚಿಕೊಂಡಿದ್ದಾರೆ. ಅದರಿಂದ ಪ್ರೇರಿತರಾದ ಜನ, ಇಕತ್‌ ಕುರ್ತಿ ತೊಟ್ಟು ಪೋಸು ಕೊಡುತ್ತಿದ್ದಾರೆ. ಹಾಗಾಗಿ, ಈ ದಿರಿಸು ಈಗ ಟ್ರೆಂಡ್‌ ಆಗುತ್ತಿದೆ. ಇದನ್ನು, ಪುರುಷರು ಕೂಡಾ ತೊಡಬಹುದು. ಮ್ಯಾಚಿಂಗ್‌ ಪ್ಯಾಂಟ್‌ ಅಥವಾ ಪ್ಲೇನ್‌  ಲೆಗಿಂಗ್ಸ್‌, ಚೂಡಿದಾರದ ಪ್ಯಾಂಟ್‌, ಪಲಾಝೊ, ಧೋತಿ, ಹ್ಯಾರೆಮ್‌ ಪ್ಯಾಂಟ್‌ ಜೊತೆ ಇದನ್ನು ಧರಿಸಬಹುದು.

* ಅದಿತಿಮಾನಸ ಟಿ.ಎಸ್.

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.