ಆಲಾರೇ ಆಲಾ… ಅಜಿಂಕ್ಯ ಆಲಾ… : ತವರಿಗೆ ಮರಳಿದ ಕ್ರಿಕೆಟ್‌ ಹೀರೋಗಳು


Team Udayavani, Jan 22, 2021, 6:45 AM IST

ಆಲಾರೇ ಆಲಾ… ಅಜಿಂಕ್ಯ ಆಲಾ… : ತವರಿಗೆ ಮರಳಿದ ಕ್ರಿಕೆಟ್‌ ಹೀರೋಗಳು

ಮುಂಬಯಿ/ಹೊಸದಿಲ್ಲಿ: ಬಲಿಷ್ಠ ಆಸ್ಟ್ರೇಲಿಯ ವಿರುದ್ಧ ಅವರದೇ ನೆಲದಲ್ಲಿ ಟೆಸ್ಟ್‌ ಸರಣಿಯನ್ನು ಗೆದ್ದ ಯುವ ಭಾರತ ತಂಡ ಗುರುವಾರ ತವರಿಗೆ ಬಂದಿಳಿದಿದೆ. ಈ ಸಂದರ್ಭದಲ್ಲಿ ಟೀಮ್‌ ಇಂಡಿಯಾದ ಆಟಗಾರರಿಗೆ ವಿಮಾನ ನಿಲ್ದಾಣದಲ್ಲಿ ಅದ್ಧೂರಿ ಸ್ವಾಗತ ದೊರೆತಿದೆ.

ನಾಯಕ ಅಜಿಂಕ್ಯ ರಹಾನೆ, ರೋಹಿತ್‌ ಶರ್ಮ, ಆರಂಭಿಕ ಆಟಗಾರ ಪೃಥ್ವಿ ಶಾ ಮತ್ತು ಕೋಚ್‌ ರವಿ ಶಾಸ್ತ್ರಿ ಬೆಳಗ್ಗೆ ಬ್ರಿಸ್ಬೇನ್‌ನಿಂದ ಮುಂಬಯಿಗೆ ಆಗಮಿಸಿದರು. ಟೀಮ್‌ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸಿದ ಅಜಿಂಕ್ಯ ರಹಾನೆಗೆ ಭರ್ಜರಿ ಸ್ವಾಗತ ಕೋರಲಾಯಿತು. ಅಪಾರ್ಟ್‌ಮೆಂಟ್‌ನ ನೂರಾರು ನಿವಾಸಿಗಳು ಸೇರಿ ಕಹಳೆ, ವಾದ್ಯ, ತಮಟೆ, ಡೊಳ್ಳು ಹಾಗೂ ತಾಳವಾದ್ಯಗಳೊಂದಿಗೆ ರಹಾನೆ ಅವರನ್ನು ಬರಮಾಡಿಕೊಂಡರು. ಪುತ್ರಿಯನ್ನು ಎತ್ತಿಕೊಂಡ ರಹಾನೆ, ಪತ್ನಿಯೊಂದಿಗೆ ನಿಧಾನವಾಗಿ ಹೆಜ್ಜೆ ಹಾಕುತ್ತಿರುವಂತೆಯೇ ಅಭಿಮಾನಿಗಳು ಪುಷ್ಪವೃಷ್ಟಿಗೈದರು. “ಆಲಾರೇ ಆಲಾ… ಅಜಿಂಕ್ಯ ಆಲಾ…’ (ಬಂದ ಬಂದ… ಅಜಿಂಕ್ಯ ಬಂದ) ಎಂದು ಖುಷಿಯಿಂದ ಕುಣಿದು ಸಂಭ್ರಮಿಸಿದರು.

ಸಾಧನೆಯ ವಿಶೇಷ ಫಲಕ
ಅಜಿಂಕ್ಯ ರಹಾನೆ ಅವರ ಮುಂಬಯಿ ನಿವಾಸದ ಹೊರಗಡೆ ವಿಶೇಷ ಸ್ವಾಗತ ಫಲಕವೊಂದನ್ನು ಇರಿಸಲಾಗಿತ್ತು. ಇದರಲ್ಲಿ “ಡಬ್ಲ್ಯು’ ಎಂದು ಬರೆದು, ಬಳಿಕ ಇಳಿಕೆಯ ಕ್ರಮಾಂಕದಲ್ಲಿ 5 4 3 2 1 0 ಎಂದು ಬರೆಯಲಾಗಿತ್ತು. ಇಲ್ಲಿ “ಡಬ್ಲ್ಯು’ ಎಂಬುದು “ವರ್ಲ್ಡ್ ಕ್ಲಾಸ್‌ ಕ್ಯಾಪ್ಟನ್‌’ ಎಂಬುದನ್ನು ಪ್ರತಿನಿಧಿಸುತ್ತದೆ. ಬಳಿಕ ಒಟ್ಟು ಟೆಸ್ಟ್‌ ನಾಯಕತ್ವ (5), ನಾಯಕನಾಗಿ ಸಾಧಿಸಿದ ಗೆಲುವು (4), ಆಸ್ಟ್ರೇಲಿಯ ವಿರುದ್ಧ ಸಾಧಿಸಿದ ಜಯ (3), ಈ ಸರಣಿಯಲ್ಲಿ ಗೆದ್ದ ಟೆಸ್ಟ್‌ (2), ಡ್ರಾ (1) ಹಾಗೂ ಸೋಲನ್ನು (0) ನಮೂದಿಸುತ್ತದೆ. ಈ ಫಲಕದ ಮುಂದೆ ನಿಂತು ಫೋಟೊ ತೆಗೆಸಿಕೊಂಡ ಬಳಿಕ ರಹಾನೆ ಮನೆಯನ್ನು ಪ್ರವೇಶಿಸಿದರು.
ಮುಂಬಯಿಗೆ ಆಗಮಿಸಿದ ಕ್ರಿಕೆಟಿಗರಿಗೆ 3 ದಿನಗಳ ಹೋಮ್‌ ಕ್ವಾರಂಟೈನ್‌ ಮಾಡುವಂತೆ ಬೃಹನ್ಮುಂಬಯಿ ಪೌರಾಯುಕ್ತ ಇಕ್ಬಾಲ್‌ ಸಿಂಗ್‌ ಚಹಲ್‌ ತಿಳಿಸಿದರು. ಬಳಿಕ ಮಹಾರಾಷ್ಟ್ರ ಸರಕಾರ, ರಾಜ್ಯದ ಕ್ರಿಕೆಟಿಗರಿಗೆ ಹಾಗೂ ಸಿಬಂದಿಗೆ ಈ ಕ್ವಾರಂಟೈನ್‌ನಿಂದ ವಿನಾಯಿತಿ ನೀಡಿದೆ ಎಂದೂ ವರದಿಯಾಗಿದೆ.

ತಂದೆಯ ಸಮಾಧಿಗೆ ಸಿರಾಜ್‌ ನಮನ
ಇನ್ನೊಂದೆಡೆ ವೇಗಿ ಮೊಹಮ್ಮದ್‌ ಸಿರಾಜ್‌ ಸ್ಮರಣೀಯ ಪ್ರವಾಸ ಮುಗಿಸಿದ ಸಂಭ್ರಮದಲ್ಲಿದ್ದರೂ ಹೈದರಾಬಾದ್‌ಗೆ ಕಾಲಿಟ್ಟೊಡನೆಯೇ ಭಾವುಕರಾದರು. ಮನೆಗೆ ಮರಳದೆ ನೇರವಾಗಿ ತಂದೆಯ ಸಮಾಧಿಯತ್ತ ತೆರಳಿ, ಪುಷ್ಪಗಳನ್ನಿರಿಸಿ ಪ್ರಾರ್ಥನೆ ಸಲ್ಲಿಸಿದರು.

ಸಿರಾಜ್‌ ಆಸ್ಟ್ರೇಲಿಯ ಪ್ರವಾಸದಲ್ಲಿದ್ದಾಗ ತಂದೆ ಮೃತ ರಾಗಿದ್ದರು. ಆದರೆ ದೇಶ ಸೇವೆ ಮುಖ್ಯ ಎಂದು ಅಲ್ಲೇ ಉಳಿದ ಸಿರಾಜ್‌, ಇದೀಗ ತಂದೆ ಇಹಲೋಕ ತ್ಯಜಿಸಿದ 63 ದಿನಗಳ ಬಳಿಕ ತವರಿಗೆ ಬಂದು ಅವರ ಸಮಾಧಿಗೆ ಪೂಜೆ ಸಲ್ಲಿಸಿದರು. ಮಗ ದೇಶವನ್ನು ಪ್ರತಿನಿಧಿಸಬೇಕು, ಇದನ್ನು ಕಂಡು ತಾನು ಸಂಭ್ರಮಿಸಬೇಕು ಎಂಬುದು ಬಾಡಿಗೆ ರಿಕ್ಷಾ ಓಡಿಸುತ್ತಿದ್ದ ಸಿರಾಜ್‌ ತಂದೆಯ ದೊಡ್ಡ ಕನಸಾಗಿತ್ತು.

ಬೆಂಗಳೂರಿಗೆ ಬಂದಿಳಿದ ನಟರಾಜನ್‌
ತಮಿಳುನಾಡಿನ ಟಿ. ನಟರಾಜನ್‌ ಆಸ್ಟ್ರೇಲಿಯದಿಂದ ನೇರವಾಗಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಬಳಿಕ ತಮ್ಮ ತವರಾದ ಸೇಲಂಗೆ ತೆರಳಿದರು. ಈ ವೇಳೆ ನಟರಾಜನ್‌ ಅವರೀಗೆ ತವರಿನ ಅಭಿಮಾನಿಗಳು ಅದ್ಧೂರಿ ಸ್ವಾಗತಗೈದರು. ರಿಷಭ್‌ ಪಂತ್‌ ಬೆಳಗ್ಗೆ ಹೊಸದಿಲ್ಲಿಗೆ ಬಂದಿಳಿದರು.

ವಿರಾಟ್‌-ಅನುಷ್ಕಾ ಪ್ರತ್ಯಕ್ಷ!
ಕಾಕತಾಳೀಯವೆಂಬಂತೆ, ತಂದೆಯಾದ ಬಳಿಕ ಇದೇ ಮೊದಲ ಬಾರಿಗೆ ವಿರಾಟ್‌ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಕೊಹ್ಲಿ ಮರಳಿ ಟೀಮ್‌ ಇಂಡಿಯಾದ ಚುಕ್ಕಾಣಿ ಹಿಡಿಯಲಿದ್ದು, ಪ್ರವಾಸಿ ಇಂಗ್ಲೆಂಡ್‌ ಎದುರಿನ ಸರಣಿಗೆ ಸಜ್ಜಾಗಲಿದ್ದಾರೆ.

ಟಾಪ್ ನ್ಯೂಸ್

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

26

ಅಮೆರಿಕ ತಂಡಕ್ಕೆ ಸ್ಟುವರ್ಟ್‌ ಕೋಚ್‌!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ

1aaa

Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್‌ನಿಂದ ಹೊರಬಿದ್ದ ಶ್ರೀಶಂಕರ್‌

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Virat Kohli: ಜೈಪುರದಲ್ಲಿ ಕೊಹ್ಲಿ ಪ್ರತಿಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.