ಭಾರತ-ಲಂಕಾ ವಿಶ್ವಕಪ್ ಫೈನಲ್ ಫಿಕ್ಸ್ !
ಶ್ರೀಲಂಕಾ ಮಾಜಿ ಕ್ರೀಡಾ ಸಚಿವರ ಸ್ಫೋಟಕ ಹೇಳಿಕೆ
Team Udayavani, Jun 19, 2020, 5:54 AM IST
ಕೊಲಂಬೊ: ಕ್ರಿಕೆಟ್ನಲ್ಲಿ ಯಾವಾಗ ಮ್ಯಾಚ್ ಫಿಕ್ಸಿಂಗ್, ಸ್ಪಾಟ್ ಫಿಕ್ಸಿಂಗ್ ಅವ್ಯವಹಾರಗಳು ಕಾಣಿಸಿಕೊಂಡವೋ, ಅಂದಿನಿಂದ ಪ್ರತಿಯೊಂದು ಗೆಲವು ಮತ್ತು ಸೋಲನ್ನು ಅನುಮಾನದಿಂದಲೇ ಕಾಣಬೇಕಾದ ಪರಿಸ್ಥಿತಿ ಎದುರಾಗಿದೆ.
ಇದೀಗ 2011ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಸರದಿ. ಮುಂಬಯಿಯಲ್ಲಿ ನಡೆದ ಭಾರತ-ಶ್ರೀಲಂಕಾ ನಡುವಿನ ಈ ಮುಖಾಮುಖೀ ಫಿಕ್ಸ್ ಆಗಿತ್ತು ಎಂಬುದಾಗಿ ಲಂಕೆಯ ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಅಲುತಗಾಮಗೆ ಸ್ಫೋಟಕ ಹೇಳಿಕೆ ಯೊಂದನ್ನು ನೀಡಿದ್ದಾರೆ!2011ರ ವಿಶ್ವಕಪ್ ಫೈನಲ್ ವೇಳೆ ಮಹಿಂದಾನಂದ ಶ್ರೀಲಂಕಾದ ಕ್ರೀಡಾ ಸಚಿವ ರಾಗಿದ್ದರು. ಮಹೇಂದ್ರ ಸಿಂಗ್ ಧೋನಿ ಪಡೆ ಈ ಪಂದ್ಯವನ್ನು 6 ವಿಕೆಟ್ಗಳಿಂದ ಗೆದ್ದಿತ್ತು. ಭಾರತ 28 ವರ್ಷಗಳ ಬಳಿಕ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಹೊರಗಿನವರು ಭಾಗಿ
“ಇದರಲ್ಲಿ ಕ್ರಿಕೆಟಿಗರೂ ಸೇರಿಕೊಂಡಿದ್ದಾರೆ ಎಂದು ಹೇಳಲು ನಾನು ಬಯಸುವುದಿಲ್ಲ. ಆದರೆ ಖಂಡಿತವಾಗಿಯೂ ಹೊರಗಿನ ಕೆಲವು ನಿರ್ದಿಷ್ಟ ತಂಡಗಳು ಫಿಕ್ಸಿಂಗ್ನಲ್ಲಿ ಭಾಗಿ ಯಾಗಿವೆ’ ಎಂಬುದಾಗಿ “ನ್ಯೂಸ್ ಫಸ್ಟ್’ಗೆ ನೀಡಿದ ಸಂದರ್ಶನದಲ್ಲಿ ಮಾಜಿ ಸಚಿವ ಮಹಿಂದಾನಂದ ಹೇಳಿದ್ದಾರೆ.
“ಇದನ್ನು ನಾನು ಕ್ರೀಡಾ ಸಚಿವನಾಗಿದ್ದಾಗಲೇ ಹೇಳಿದ್ದೆ. ದೇಶದ ಹಿತಾಸಕ್ತಿಯಿಂದ ಇದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಷಯವನ್ನು ಬಹಿ ರಂಗಗೊಳಿಸಲಾಗದು. ಅಲ್ಲದೇ ಇದಕ್ಕೆ ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯೂ ಇದೆ. ಆದರೆ ಈ ಪಂದ್ಯವನ್ನು ಶ್ರೀಲಂಕಾ ಗೆಲ್ಲಬಹುದಿತ್ತು, ಅಷ್ಟೇ…’ ಎಂದು ದ್ವೀಪರಾಷ್ಟ್ರದ ಮಾಜಿ ಕ್ರೀಡಾ ಸಚಿವರು ಹೇಳಿದರು.
ತವರಲ್ಲೇ ವಿಶ್ವಕಪ್
ಈ ಪಂದ್ಯವನ್ನು ಗೆಲ್ಲುವ ಮೂಲಕ ತವರಲ್ಲೇ ವಿಶ್ವಕಪ್ ಎತ್ತಿದ ಮೊದಲ ತಂಡವೆಂಬ ಹಿರಿಮೆಗೆ ಭಾರತ ಭಾಜನವಾಯಿತು. ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಅವರಿಗೆ ವಿಶ್ವಕಪ್ ಟ್ರೋಫಿಯನ್ನು ಅರ್ಪಿಸಬೇಕೆಂಬ ಎಷ್ಟೋ ವರ್ಷಗಳ ಯೋಜನೆ ಅವರ ಹುಟ್ಟೂರಿನ ಅಂಗಳದಲ್ಲೇ ಸಾಕಾರಗೊಂಡಿತ್ತು.
ಜಯವರ್ಧನ, ಸಂಗಕ್ಕರ ಕಿಡಿ
ಮಾಜಿ ಕ್ರೀಡಾ ಸಚಿವರ ಈ ಹೇಳಿಕೆಗೆ ಅಂದಿನ ಲಂಕಾ ತಂಡದ ಸದಸ್ಯ ಮಾಹೇಲ ಜಯವರ್ಧನ, ನಾಯಕ ಕುಮಾರ ಸಂಗಕ್ಕರ ಕಿಡಿಕಾರಿದ್ದಾರೆ. “ಚುನಾವಣೆ ಹತ್ತಿರ ಬರುತ್ತಿದೆ. ಇದಕ್ಕಾಗಿ ನಾನಾ ರೀತಿಯ ಸರ್ಕಸ್ ಕೂಡ ಆರಂಭವಾದಂತಿದೆ. ವಿಶ್ವಕಪ್ ಫೈನಲ್ ಫಿಕ್ಸ್ ಆಗಿದೆ ಎಂಬುದನ್ನು ಅವರು ಸೂಕ್ತ ಸಾಕ್ಷ್ಯಾಧಾರಗಳ ಸಹಿತ ನಿರೂಪಿಸಲಿ’ ಎಂದು ಜಯವರ್ಧನ ಸವಾಲೆಸೆದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ
ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಅಗತ್ಯ ಒಲಿಂಪಿಕ್ಸ್ನಿಂದ ಹೊರಬಿದ್ದ ಶ್ರೀಶಂಕರ್
MUST WATCH
ಹೊಸ ಸೇರ್ಪಡೆ
Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!
Kushtagi:ವಿದ್ಯುತ್ದೀಪದ ಕಂಬಗಳಿಗೆ ಬಲ್ಬ್ ಅಳವಡಿಸುವ ವೇಳೆ ಅವಘಡ; ಪುರಸಭೆ ಸಿಬ್ಬಂದಿಗೆ ಗಾಯ
Festivals: ಹಬ್ಬಗಳು ಮರೆಯಾಗುತ್ತಿವೆಯೇ?
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!