ಬಿಡುಗಡೆ ಆಯ್ತು ಐಫೋನ್‌ ಕಾರ್‌ ಕೀ!

ಇನ್ನು ಕೀ ಹಂಗಿಲ್ಲದೇ ಐಫೋನ್‌ ಬಳಸಿಯೇ ಕಾರ್‌ ಸ್ಟಾರ್ಟ್‌ ಮಾಡಬಹುದು!

Team Udayavani, Jul 17, 2020, 12:27 PM IST

ಬಿಡುಗಡೆ ಆಯ್ತು ಐಫೋನ್‌ ಕಾರ್‌ ಕೀ!

ಮುಂಬೈ: ಹಲವು ದಿನಗಳಿಂದ ಆ್ಯಪಲ್‌, ಐಫೋನ್‌ನ ಹೊಸ ಆಪರೇಟಿಂಗ್‌ ಸಿಸ್ಟಮ್‌ ಬಿಡುಗಡೆ ಮಾಡುವುದಾಗಿ ಹೇಳುತ್ತಲೇ ಇತ್ತು. ಅದೀಗ ಸಾಕಾರವಾಗಿದೆ.
ಒಎಸ್‌ 13.6 ಬಿಡುಗಡೆಯಾಗಿದೆ. ಇದರೊಂದಿಗೆ ಹಲವು ದಿನಗಳಿಂದ ಬಹಳ ಕುತೂಹಲ ಮೂಡಿಸಿದ್ದ ವಿಶಿಷ್ಟ ಸೌಲಭ್ಯಗಳೂ ಗ್ರಾಹಕರಿಗೆ ಸಿಕ್ಕಿವೆ. ಅದರಲ್ಲಿ ಅತಿಮುಖ್ಯವಾಗಿರುವುದು ಐಫೋನ್‌ ಕಾರ್‌ ಕೀ! ಇದನ್ನು ಸಕ್ರಿಯ ಮಾಡಿಕೊಂಡರೆ, ಬಾಗಿಲು ಮುಟ್ಟದೇ ಕಾರು ತೆರೆಯಬಹುದು, ಕೀ ಬಳಸದೇ ಸ್ಟಾರ್ಟ್‌ ಮಾಡಬಹುದು! ಸದ್ಯ ಈ ಸೌಲಭ್ಯಕ್ಕೆ ಪೂರಕ ವಾಗಿ ರುವುದು 2021ರಲ್ಲಿ ಬಿಡು ಗಡೆಯಾಗಲಿರುವ ಬಿಎಂಡಬ್ಲ್ಯೂ 5ನೇ ಆವೃತ್ತಿಯ ಕಾರುಗಳು ಮಾತ್ರ! ಮುಂದಿನ ದಿನಗಳಲ್ಲಿ ಈ ಸರಣಿಗೆ ಇನ್ನಷ್ಟು ಕಂಪನಿಗಳು ಸೇರಿಕೊಳ್ಳಬಹುದು.

ಏನಿದು ಕಾರ್‌ ಕೀ ಸೌಲಭ್ಯ?
ಐಫೋನ್‌ನ ನೂತನ 14ನೇ ಆವೃತ್ತಿಯ (13.6) ಆಪರೇಟಿಂಗ್‌ ಸಿಸ್ಟಮ್‌ ಮೂಲಕ ಆ್ಯಪಲ್‌ ಸಂಸ್ಥೆ ಬಿಡುಗಡೆ ಮಾಡಿರುವ ಸೌಲಭ್ಯ. ಕೇವಲ ಮೊಬೈಲ್‌ನ ಒಂದು ಸ್ಪರ್ಶದ ಮೂಲಕ ಕಾರಿನ ಬಾಗಿಲು ತೆರೆಯುತ್ತೆ - ಮುಚ್ಚಿಕೊಳ್ಳುತ್ತದೆ. ಕಾರು ಸ್ಟಾರ್ಟ್‌ ಕೂಡಾ ಆಗುತ್ತದೆ. ಈ ಸೌಲಭ್ಯ ಎಲ್ಲ
ಐಫೋನ್‌ಗಳಲ್ಲಿ ಲಭ್ಯವಿಲ್ಲ. ಐಫೋನ್‌ ಎಸ್‌ಇ 2ನೇ ಆವೃತ್ತಿ, 11 ಪ್ರೊ, 11ಪ್ರೊ ಮ್ಯಾಕ್ಸ್‌, ಐಫೋನ್‌ 1, ಫೋನ್‌ ಎಕ್ಸ್‌ಎಸ್‌, ಎಕ್ಸ್‌ಎಸ್‌ ಮ್ಯಾಕ್ಸ್‌, ಎಕ್ಸ್‌ ಆರ್‌ ಆವೃತ್ತಿಗಳಲ್ಲಿ ಮಾತ್ರ ಲಭ್ಯ. ಇದೇ ಸೌಲಭ್ಯವನ್ನು ಆ್ಯಪಲ್‌ ವಾಚ್‌ನಲ್ಲೂ ಪಡೆಯಬಹುದು. ಅದಕ್ಕಾಗಿ ಆ್ಯಪಲ್‌ 5ನೇ ಕೈಗಡಿಯಾರ ಸರಣಿ ನಿಮ್ಮ ಲ್ಲಿ ರಬೇಕು, ಅದರ ಒಎಸ್‌ 6.2.8 ಅಥವಾ ಅದರ ನಂತರದ್ದು ಆಗಿರಬೇಕು. ವಿಶೇಷವೆಂದರೆ ನೀವು ಈ ಡಿಜಿಟಲ್‌ ಕಾರ್‌ ಕೀಯನ್ನು ಸಂದೇಶದ ಮೂಲಕ ಐದು ಜನರಿಗೆ ಕಳುಹಿಸಬಹುದು. ಅವರು ನಿಮ್ಮ ಕಾರನ್ನು ಅದರ ಮೂಲಕವೇ ಚಲಾಯಿಸಬಹುದು! ನೀವು ದೂರದಲ್ಲೇ ಕುಳಿತು ಆ್ಯಪಲ್‌ ವ್ಯಾಲೆಟ್‌ ಮೂಲಕ ಕಾರನ್ನು ನಿಯಂತ್ರಿಸಲೂ ಅವಕಾಶವಿದೆ.

ಹೇಗೆ ಸಕ್ರಿಯಗೊಳಿಸುವುದು?
– ಈ ಸೌಲಭ್ಯವನ್ನು ಸಕ್ರಿಯಗೊಳಿಸುವ ಮುನ್ನ, ನಿಮ್ಮ ಕಾರು ಇದಕ್ಕೆ ಸ್ಪಂದಿಸುತ್ತದೆಯಾ ಎನ್ನುವುದನ್ನು ತಿಳಿದುಕೊಳ್ಳಿ.
– ಡಿಜಿಟಲ್‌ ಕಾರ್‌ ಕೀಗೆ ನಿಮ್ಮ ಕಾರು ಸ್ಪಂದಿಸುತ್ತದೆ ಎನ್ನುವುದು ಖಚಿತವಾದರೆ, ಮೊಬೈಲ್‌ನಲ್ಲಿ ನಿಮ್ಮ ಕಾರಿನ ಆ್ಯಪ್‌ ತೆರೆಯಿರಿ. ಸೂಚನೆ ಪಾಲಿಸಿ ಕಾರ್‌ ಕೀ
ರಚನೆ ಪ್ರಕ್ರಿಯೆ ಮುಗಿಸಿ. ಆಗ ಕಾರ್‌ ಆ್ಯಪ್‌, ಆ್ಯಪಲ್‌ ವ್ಯಾಲೆಟ್‌ಗೆ ಕೀಯನ್ನು ರವಾನಿಸುತ್ತದೆ.
– ಡಿಜಿಟಲ್‌ ಕೀ ಸಿಕ್ಕ ನಂತರ, ಐಫೋನ್‌ ಅನ್ನು ಕಾರಿನ ಎನ್‌ಎಫ್ಸಿ (ನಿಯರ್‌ ಫಿಲ್ಡ್‌ ಕಮ್ಯುನಿಕೇಶನ್‌, ಇದೊಂದು ಸಾಧನ) ಸಮೀಪ ಇಡಿ. ಐಫೋನ್‌ ಮತ್ತು
ಕಾರ್‌ ಸಂಪರ್ಕಗೊಳ್ಳುವವರೆಗೆ ಕಾಯಿರಿ.
-ಈ ಪ್ರಕ್ರಿಯೆ ಮುಗಿದ ನಂತರ, ಡನ್‌ ಎಂಬ ಗುಂಡಿಯನ್ನು ಒತ್ತಿ. ಅಲ್ಲಿಗೆ ಡಿಜಿಟಲ್‌ ಕೀ ಬಳಕೆಗೆ ಮುಕ್ತ.

ಟಾಪ್ ನ್ಯೂಸ್

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

kejriwal 2

Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ

Devon Conway ruled out of IPL 2024

CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ

1—-wewewqe

Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ

raj k shilpa

ED; ರಾಜ್ ಕುಂದ್ರಾ ಅವರ 97 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ

LokSabha Election; ಕಾಂಗ್ರೆಸ್ ಪರ ನಟ ದರ್ಶನ್ ಪ್ರಚಾರಕ್ಕೆ ಕುಮಾರಸ್ವಾಮಿ ಪ್ರತಿಕ್ರಿಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ

Mahindra XUV 300 ಹೆಸರು ಬದಲು…ಈಗ XUV 3XO; ಏ.29ಕ್ಕೆ ಮಾರುಕಟ್ಟೆಗೆ ಬಿಡುಗಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-asasa

Delhi ; ಬಿಕಿನಿಯಲ್ಲೇ ಬಸ್ ಹತ್ತಿದ ಮಹಿಳೆ; ವಿಡಿಯೋ ವೈರಲ್

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

kejriwal 2

Diabetes ಇದ್ದರೂ ಕೇಜ್ರಿವಾಲ್ ಸಿಹಿ ಹೆಚ್ಚೆಚ್ಚು ತಿನ್ನುತ್ತಿದ್ದಾರೆ!: ಕೋರ್ಟ್ ಗೆ ಇಡಿ

Devon Conway ruled out of IPL 2024

CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.