IPL 2020: ರಾಜಸ್ಥಾನ್‌ ಔಟ್‌; 4ಕ್ಕೆ ನೆಗೆದ ಕೆಕೆಆರ್‌


Team Udayavani, Nov 1, 2020, 11:41 PM IST

IPL 2020: ರಾಜಸ್ಥಾನ್‌ ಔಟ್‌; 4ಕ್ಕೆ ನೆಗೆದ ಕೆಕೆಆರ್‌

ದುಬಾೖ: ರವಿವಾರ ರಾತ್ರಿಯ ಐಪಿಎಲ್‌ ಮುಖಾಮುಖೀಯಲ್ಲಿ ಕೋಲ್ಕತಾ ನೈಟ್‌ರೈಡರ್‌ಸ್‌ಗೆ 60 ರನ್ನುಗಳಿಂದ ಶರಣಾದ ರಾಜಸ್ಥಾನ್‌ ರಾಯಲ್ಸ್‌ ಕೂಟದಿಂದ ನಿರ್ಗಮಿಸಿದೆ. ಕೆಕೆಆರ್‌ 4ನೇ ಸ್ಥಾನಕ್ಕೆ ನೆಗೆದು ಪ್ಲೇ ಆಫ್‌ ಸ್ಪರ್ಧೆಯಲ್ಲಿ ಉಳಿದುಕೊಂಡಿದೆ. ಮುಂದಿನ ಲೆಕ್ಕಾಚಾರವೆಲ್ಲ ರನ್‌ರೇಟ್‌ ಮೂಲಕ ನಡೆಯಲಿದೆ.

ನಾಯಕ ಇಯಾನ್‌ ಮಾರ್ಗನ್‌ ಅವರ ಜವಾಬ್ದಾರಿಯುತ ಬ್ಯಾಟಿಂಗ್‌ ಸಾಹಸದಿಂದ ಕೋಲ್ಕತಾ 7 ವಿಕೆಟಿಗೆ 191 ರನ್‌ ಪೇರಿಸಿದರೆ, ರಾಜಸ್ಥಾನ್‌ 9 ವಿಕೆಟಿಗೆ 131 ರನ್‌ ಮಾಡಿತು. 8ನೇ ಸೋಲುಂಡ ಸ್ಮಿತ್‌ ಬಳಗ ಅಂತಿಮ ಸ್ಥಾನಕ್ಕೆ ಕುಸಿದಿದೆ. ಘಾತಕ ವೇಗಿ ಪ್ಯಾಟ್‌ ಕಮಿನ್ಸ್‌ ಸರಿಯಾದ ಹೊತ್ತಿನಲ್ಲೇ ಸಿಡಿದು ನಿಂತು ರಾಜಸ್ಥಾನ್‌ ಹಾದಿಗೆ ಕಂಟಕವಾಗಿ ಪರಿಣಮಿಸಿದರು (34ಕ್ಕೆ 4). ವರುಣ್‌ ಚಕ್ರವರ್ತಿ, ಶಿವಂ ಮಾವಿ ತಲಾ 2 ವಿಕೆಟ್‌ ಉಡಾಯಿಸಿದರು. 35 ರನ್‌ ಮಾಡಿದ ಬಟ್ಲರ್‌ ಅವರದೇ ರಾಜಸ್ಥಾನ್‌ ಸರದಿಯ ಗರಿಷ್ಠ ಗಳಿಕೆ.

ಮಾರ್ಗನ್‌ ಬ್ಯಾಟಿಂಗ್‌ ಅಬ್ಬರ
ಕೆಕೆಆರ್‌ ನಾಯಕ ಮಾರ್ಗನ್‌ ಆಟ ಅತ್ಯಂತ ಸ್ಫೋಟಕವಾಗಿತ್ತು. ಶ್ರೇಯಸ್‌ ಗೋಪಾಲ್‌ ಅವರ ಓವರ್‌ ಒಂದರಲ್ಲಿ 21 ರನ್‌, ಬಳಿಕ ಬೆನ್‌ ಸ್ಟೋಕ್ಸ್‌ ಅವರ ಓವರಿನಲ್ಲಿ 24 ರನ್‌ ಸಿಡಿಸಿ ರಾಜಸ್ಥಾನ್‌ ಮೇಲೆರಗಿ ಹೋದರು. 35 ಎಸೆತಗಳಿಂದ ಅಜೇಯ 68 ರನ್‌ ಬಾರಿಸಿದರು. ಈ ಬಿರುಸಿನ ಆಟದ ವೇಳೆ 6 ಸಿಕ್ಸರ್‌, 5 ಬೌಂಡರಿ ಸಿಡಿಯಲ್ಪಟ್ಟಿತು. ಕೋಲ್ಕತಾ ಮೊದಲ ಓವರಿನಲ್ಲೇ ನಿತೀಶ್‌ ರಾಣಾ ಅವರನ್ನು ಕಳೆದುಕೊಂಡಿತು. ಗಿಲ್‌ (36)-ತ್ರಿಪಾಠಿ (39) ಜೋಡಿ ಯಿಂದ ದ್ವಿತೀಯ ವಿಕೆಟಿಗೆ 72 ರನ್‌ ಹರಿದು ಬಂತು. 12 ಓವರ್‌ಗಳಲ್ಲಿ ತಂಡದ ಮೊತ್ತ ನೂರರ ಗಡಿ ಮುಟ್ಟಿತು. ನಾಯಕ ಮಾರ್ಗನ್‌-ರಸೆಲ್‌ ಒಟ್ಟುಗೂಡಿದ ಬಳಿಕ ಕೆಕೆಆರ್‌ ರನ್‌ಗತಿ ಏರತೊಡಗಿತು.

ಸ್ಕೋರ್‌ ಪಟ್ಟಿ
ಕೋಲ್ಕತಾ ನೈಟ್‌ರೈಡರ್
ಶುಭಮನ್‌ ಗಿಲ್‌ ಸಿ ಬಟ್ಲರ್‌ ಬಿ ತೆವಾತಿಯಾ 36
ನಿತೀಶ್‌ ರಾಣಾ ಸಿ ಸಂಜು ಬಿ ಆರ್ಚರ್‌ 0
ರಾಹುಲ್‌ ತ್ರಿಪಾಠಿ ಸಿ ಉತ್ತಪ್ಪ ಬಿ ಶ್ರೇಯಸ್‌ 39
ನಾರಾಯಣ್‌ ಸಿ ಸ್ಟೋಕ್ಸ್‌ ಬಿ ತೆವಾತಿಯಾ 0
ಇಯಾನ್‌ ಮಾರ್ಗನ್‌ ಔಟಾಗದೆ 68
ದಿನೇಶ್‌ ಕಾರ್ತಿಕ್‌ ಸಿ ಸ್ಮಿತ್‌ ಬಿ ತೆವಾತಿಯಾ 0
ಆ್ಯಂಡ್ರೆ ರಸೆಲ್‌ ಸಿ ಮಿಲ್ಲರ್‌ ಬಿ ತ್ಯಾಗಿ 25
ಪ್ಯಾಟ್‌ ಕಮಿನ್ಸ್‌ ಸಿ ಸಂಜು ಬಿ ತ್ಯಾಗಿ 15
ನಾಗರ್‌ಕೋಟಿ ಔಟಾಗದೆ 1

ಇತರ 7
ಒಟ್ಟು(20 ಓವರ್‌ಗಳಲ್ಲಿ 7 ವಿಕೆಟಿಗೆ) 191
ವಿಕೆಟ್‌ ಪತನ: 1-1, 2-73, 3-73, 4-94, 5-99, 6-144, 7-184.

ಬೌಲಿಂಗ್‌:
ಜೋಫ್ರ ಆರ್ಚರ್‌ 4-0-19-1
ವರುಣ್‌ ಆರನ್‌ 2-0-22-0
ಶ್ರೇಯಸ್‌ ಗೋಪಾಲ್‌ 3-0-44-1
ಬೆನ್‌ ಸ್ಟೋಕ್ಸ್‌ 3-0-40-0
ರಾಹುಲ್‌ ತೆವಾತಿಯಾ 4-0-25-3
ಕಾರ್ತಿಕ್‌ ತ್ಯಾಗಿ 4-0-36-2

ರಾಜಸ್ಥಾನ್‌ ರಾಯಲ್ಸ್‌
ರಾಬಿನ್‌ ಉತ್ತಪ್ಪ ಸಿ ನಾಗರ್‌ಕೋಟಿ ಬಿ ಕಮಿನ್ಸ್‌ 6
ಬೆನ್‌ ಸ್ಟೋಕ್ಸ್‌ ಸಿ ಕಾರ್ತಿಕ್‌ ಬಿ ಕಮಿನ್ಸ್‌ 18
ಸ್ಟೀವನ್‌ ಸ್ಮಿತ್‌ ಬಿ ಕಮಿನ್ಸ್‌ 4
ಸಂಜು ಸ್ಯಾಮ್ಸನ್‌ ಬಿ ಕಾರ್ತಿಕ್‌ ಬಿ ಮಾವಿ 1
ಜಾಸ್‌ ಬಟ್ಲರ್‌ ಸಿ ಕಮಿನ್ಸ್‌ ಬಿ ಚಕ್ರವರ್ತಿ 35
ರಿಯಾನ್‌ ಪರಾಗ್‌ ಸಿ ಕಾರ್ತಿಕ್‌ ಬಿ ಕಮಿನ್ಸ್‌ 0
ರಾಹುಲ್‌ ತೆವಾತಿಯಾ ಸಿ ಕಾರ್ತಿಕ್‌ ಬಿ ಚಕ್ರವರ್ತಿ 31
ಶ್ರೇಯಸ್‌ ಗೋಪಾಲ್‌ ಔಟಾಗದೆ 23
ಜೋಫ್ರ ಆರ್ಚರ್‌ ಸಿ ಮಾವಿ ಬಿ ನಾಗರ್‌ಕೋಟಿ 6
ಕಾರ್ತಿಕ್‌ ತ್ಯಾಗಿ ಸಿ ಮತ್ತು ಬಿ ಮಾವಿ 2
ವರಣ್‌ ಆರನ್‌ ಔಟಾಗದೆ 0

ಇತರ 5
ಒಟ್ಟು( 20 ಓವರ್‌ಗಳಲ್ಲಿ 9 ವಿಕೆಟಿಗೆ) 131
ವಿಕೆಟ್‌ ಪತನ: 1-19, 2-27, 3-32, 4-32, 5-37, 6-80, 7-105, 8-125, 9-129.

ಬೌಲಿಂಗ್‌:
ಪ್ಯಾಟ್‌ ಕಮಿನ್ಸ್‌ 4-0-34-4
ಶಿವಂ ಮಾವಿ 4-1-15-2
ವರುಣ್‌ ಚಕ್ರವರ್ತಿ 4-0-20-2
ಸುನೀಲ್‌ ನಾರಾಯಣ್‌ 4-0-37-0
ಕಮಲೇಶ್‌ ನಾಗರ್‌ಕೋಟಿ 4-0-24-1

ಟಾಪ್ ನ್ಯೂಸ್

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

1-ewqe

Olympics ಅರ್ಹತೆ ತಪ್ಪುವ ಭೀತಿಯಲ್ಲಿ ದೀಪಕ್‌, ಸುಜೀತ್‌

1-wqewqewq

Doping: ಶಾಲು ಚೌಧರಿ ದೋಷಮುಕ್ತ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.