ಐಪಿಎಲ್‌ಗಾಗಿ ಕೆರಿಬಿಯನ್‌ ಲೀಗ್‌ನಲ್ಲಿ ಬದಲಾವಣೆ? WIC ಮಂಡಳಿಗೆ ಬಿಸಿಸಿಐ ಮನವಿ


Team Udayavani, May 31, 2021, 12:04 AM IST

ಐಪಿಎಲ್‌ಗಾಗಿ ಕೆರಿಬಿಯನ್‌ ಲೀಗ್‌ನಲ್ಲಿ ಬದಲಾವಣೆ? WIC ಮಂಡಳಿಗೆ ಬಿಸಿಸಿಐ ಮನವಿ

ಹೊಸದಿಲ್ಲಿ: ಐಪಿಎಲ್‌ ಪಂದ್ಯಾವಳಿ ಯೇನೋ ಯುಎಇಯಲ್ಲಿ ಮುಂದುವರಿಯಲಿದೆ ಎಂದು ತೀರ್ಮಾನವಾಯಿತು. ಆದರೆ ಈ ಕ್ಯಾಶ್‌ ರಿಚ್‌ ಟೂರ್ನಿಗೆ ಸಂಬಂಧಿಸಿದಂತೆ ಕೆಲವು ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಬೇಕಾದ ಅಗತ್ಯ ಕಂಡುಬಂದಿದೆ.

ಇದರಲ್ಲಿ ಮುಖ್ಯವಾದುದು ವೆಸ್ಟ್‌ ಇಂಡೀಸ್‌ನಲ್ಲಿ ನಡೆಯುವ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ನ (ಸಿಪಿಎಲ್‌) ದಿನಾಂಕ. ಇದು ಐಪಿಎಲ್‌ಗೆ ಕ್ಲಾಶ್‌ ಆಗಲಿದೆ. ಹೀಗಾಗಿ ಸಿಪಿಎಲ್‌ ಟೂರ್ನಿಯನ್ನು 10 ದಿನ ಬೇಗ ಆರಂಭಿಸುವಂತೆ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿಗೆ ಬಿಸಿಸಿಐ ಮನವಿಯೊಂದನ್ನು ಸಲ್ಲಿಸಲು ನಿರ್ಧರಿಸಿದೆ.

ಐಪಿಎಲ್‌ ಸೆ. 18ರಿಂದ ಅ. 10ರ ತನಕ ನಡೆಯಲಿದೆ. ಇದರ ವೇಳಾಪಟ್ಟಿಯನ್ನು ಬಿಸಿಸಿಐ ಇನ್ನಷ್ಟೇ ಪ್ರಕಟಿಸಬೇಕಿದೆ. ಆದರೆ ಸಿಪಿಎಲ್‌ ಆ. 28ರಿಂದ ಸೆ. 19ರ ತನಕ ನಡೆಯುವುದು ಈಗಾಗಲೇ ಅಧಿಕೃತಗೊಂಡಿದೆ. ಅಂದರೆ ಐಪಿಎಲ್‌ ಮುಂದುವರಿಯಲ್ಪಟ್ಟ ಮರುದಿನ ಸಿಪಿಎಲ್‌ ಫೈನಲ್‌ ನಡೆಯುತ್ತದೆ.

ಇದರಿಂದ ವೆಸ್ಟ್‌ ಇಂಡೀಸ್‌ ಕ್ರಿಕೆಟಿಗರಿಗೆ ಐಪಿ ಎಲ್‌ನಲ್ಲಿ ಪಾಲ್ಗೊಳ್ಳಲು ಸಮಸ್ಯೆಯಾಗಲಿದೆ. ಅಲ್ಲದೇ ಕೆರಿಬಿಯನ್‌ ಆಟಗಾರರನ್ನು ಬಬಲ್‌ ಟು ಬಬಲ್‌ಗೆ ವರ್ಗಾವಣೆ ಮಾಡುವ ಪ್ರಕ್ರಿಯೆಯೂ ನಡೆಯಬೇಕಿದೆ. ಯುಎಇಗೆ ಆಗಮಿಸಿದ ಬಳಿಕ ಮೂರು ದಿನಗಳ ಕ್ವಾರಂಟೈನ್‌ನಲ್ಲೂ ಇರಬೇಕಾ ಗುತ್ತದೆ. ಇದೆಲ್ಲ ಮುಗಿಯುವಾಗ ಆರಂಭಿಕ ಸುತ್ತಿನ ಐಪಿಎಲ್‌ ಪಂದ್ಯಗಳೂ ಮುಗಿದಿರುತ್ತವೆ.

ಇದನ್ನೂ ಓದಿ :ಅಭಿಮಾನಿ ಪ್ರಶ್ನೆಗೆ ಕನ್ನಡದಲ್ಲಿ ಉತ್ತರಿಸಿದ ವಿರಾಟ್‌!

ವಿಂಡೀಸ್‌ ಒಪ್ಪದಿದ್ದರೆ?
ಅಕಸ್ಮಾತ್‌ ಬಿಸಿಸಿಐ ಮತ್ತು ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ ನಡುವಿನ ಮಾತುಕತೆ ವಿಫ‌ಲವಾದರೆ ಆಗ ವಿಂಡೀಸ್‌ ಕ್ರಿಕೆಟಿಗರಿಗೆ ಮೊದಲ ಹಂತದ ಕೆಲವು ಐಪಿಎಲ್‌ ಪಂದ್ಯಗಳು ತಪ್ಪುವುದರಲ್ಲಿ ಅನುಮಾನವಿಲ್ಲ.

ಐಪಿಎಲ್‌ನಲ್ಲಿ ಆಡುತ್ತಿರುವ ವಿಂಡೀಸಿನ ಸ್ಟಾರ್‌ ಕ್ರಿಕೆಟಿಗರೆಂದರೆ ಕೈರನ್‌ ಪೊಲಾರ್ಡ್‌, ಕ್ರಿಸ್‌ ಗೇಲ್‌, ಡ್ವೇನ್‌ ಬ್ರಾವೊ, ಶಿಮ್ರನ್‌ ಹೆಟ್‌ಮೈರ್‌, ಜಾಸನ್‌ ಹೋಲ್ಡರ್‌, ನಿಕೋಲಸ್‌ ಪೂರಣ್‌, ಫ್ಯಾಬಿಯನ್‌ ಅಲನ್‌, ಕೀಮೊ ಪೌಲ್‌, ಸುನೀಲ್‌ ನಾರಾಯಣ್‌ ಮೊದಲಾದವರು.

ಹಾಗೆಯೇ 9ನೇ ಸಿಪಿಎಲ್‌ನಲ್ಲೂ ಕ್ರಿಕೆಟ್‌ ಜಗತ್ತಿನ ಸ್ಟಾರ್‌ ಆಟಗಾರರನೇಕರು ಪಾಲ್ಗೊಳ್ಳುತ್ತಿದ್ದಾರೆ.

ಟಾಪ್ ನ್ಯೂಸ್

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

1-ewqe

Olympics ಅರ್ಹತೆ ತಪ್ಪುವ ಭೀತಿಯಲ್ಲಿ ದೀಪಕ್‌, ಸುಜೀತ್‌

1-wqewqewq

Doping: ಶಾಲು ಚೌಧರಿ ದೋಷಮುಕ್ತ

1-aaaaaawwq

Bumrah ಎಸೆತಕ್ಕೆ ಸ್ವೀಪ್‌ ಶಾಟ್‌: ಅಶುತೋಷ್‌ ಶರ್ಮ ಫುಲ್‌ ಖುಷ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.