ಸರಗಳ್ಳತನ ಮಾಡುತ್ತಿದ್ದ ಇರಾನಿ ಗ್ಯಾಂಗ್ನ ಮೂವರ ಸೆರೆ
Team Udayavani, Oct 29, 2020, 12:48 PM IST
ಧಾರವಾಡ: ಹು- ಧಾ ಅವಳಿನಗರದಲ್ಲಿ ಸರಗಳ್ಳತನ ಮಾಡಿ ಪರಾರಿ ಆಗುತ್ತಿದ್ದ ಇರಾಣಿ ತಂಡದ ಮೂವರನ್ನು ಕಲಘಟಗಿ ರಸ್ತೆಯ ಗಿರಿನಗರ ಕ್ರಾಸ್ ಬಳಿ ವಿದ್ಯಾಗಿರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರ ಮೂಲದ ಅಲಿರಾಜಾ ಇರಾಣಿ (27), ಬೀದರ ಜಿಲ್ಲೆಯ ಬಿಲಾಲ ಇರಾಣಿ (21) ಹಾಗೂ ಮಧ್ಯಪ್ರದೇಶ ಮೂಲದ
ಗುಲಾಮಅಲಿ ಇರಾಣಿ (29) ಬಂಧಿತರು.
ಈ ಮೂವರು ಇರಾಣಿ ಗ್ಯಾಂಗಿಗೆ ಸೇರಿದವರಾಗಿದ್ದು, ಈ ಆರೋಪಿಗಳಿಂದ 1 ಕೆಟಿಎಂ ಬೈಕ್, 3 ಮೊಬೈಲ್ಗಳು, 13.190 ಗ್ರಾಂ.
ಬಂಗಾರ ಸೇರಿ ಒಟ್ಟು 1,44,440 ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಅವಳಿನಗರ ವಿವಿಧ ಬಡಾವಣೆಗಳಲ್ಲಿ ಕಳೆದ ಹಲವು ದಿನಗಳಿಂದ ನಡೆದ ಸರಗಳ್ಳತನದಲ್ಲಿ ಇರಾಣಿ ಗ್ಯಾಂಗ್ ತೊಡಗಿತ್ತು. ಈ ಗ್ಯಾಂಗ್ ಬಗ್ಗೆ ಮಾಹಿತಿ ಕಲೆ ಹಾಕಿ ಮೂವರನ್ನು ಬಂಧಿಸಲಾಗಿದೆ ಎಂದು ಎಸಿಪಿ ಅನುಷಾ ತಿಳಿಸಿದ್ದಾರೆ.
ಇದನ್ನೂ ಓದಿ:ಬಿಜೆಪಿ ಹಿರಿಯ ಮುಖಂಡ, ಗುಜರಾತ್ ಮಾಜಿ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್ ಇನ್ನಿಲ್ಲ
ಅಕ್ರಮ ಮದ್ಯ ವಶ: ಆರೋಪಿ ಪರಾರಿ
ಹುಬ್ಬಳ್ಳಿ: ಇಲ್ಲಿನ ಸೆಟ್ಲಮೆಂಟ್ ಗಂಗಾಧರ ನಗರದಲ್ಲಿ ರಸ್ತೆ ಬದಿ ಮಂಗಳವಾರ ಸಂಜೆ ಅಕ್ರಮವಾಗಿ ವಿವಿಧ ಬಗೆಯ ಮದ್ಯದ ಟೆಟ್ರಾ ಪಾಕೆಟ್ಗಳನ್ನು ಮಾರಾಟ ಮಾಡುತ್ತಿದ್ದಾಗ ಬೆಂಡಿಗೇರಿ ಪೊಲೀಸರು ದಾಳಿ ಮಾಡಿ, ಅಂದಾಜು 3,015ರೂ. ಮೌಲ್ಯದ
94 ಟೆಟ್ರಾ ಪಾಕೆಟ್ಗಳನ್ನು ವಶಪಡಿಸಿಕೊಂಡಿದ್ದಾರೆ. ಸೆಟ್ಲಮೆಂಟ್ ಬಾಟರ ಓಣಿಯ ಸುನೀಲ ಎಸ್. ಕಂಜರಬಾಟ ಪರಾರಿಯಾಗಿದ್ದಾನೆ. ಬೆಂಡಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ಮದ್ಯ ಮಾರಾಟ: ಓರ್ವನ ಬಂಧನ: ಇಲ್ಲಿನ ಕೇಶ್ವಾಪುರ ಗಾಂಧಿವಾಡ ವೃತ್ತದ ಚರ್ಚ್ ಹತ್ತಿರ ಬುಧವಾರ ಬೆಳಗ್ಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಓರ್ವನನ್ನು ಕೇಶ್ವಾಪುರ ಪೊಲೀಸರು ಬಂಧಿಸಿ, ಆತನಿಂದ ಅಂದಾಜು 2500ರೂ.
ಮೌಲ್ಯದ 5.5ಲೀಟರ್ ಮದ್ಯದ ಟೆಟ್ರಾ ಪಾಕೆಟ್ಸ್, 450 ರೂ. ವಶಪಡಿಸಿಕೊಂಡಿದ್ದಾರೆ. ಗಾಂಧಿವಾಡದ ಕುಬೇಂದ್ರ ಎ. ಚವ್ಹಾಣ ಬಂಧಿತನಾಗಿದ್ದು, ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿಯರು ಕಾಣೆ: ಕೇಶ್ವಾಪುರ ಠಾಣೆ ವ್ಯಾಪ್ತಿಯ ಪ್ರಕಾಶ ಕಾಲೋನಿ ಮತ್ತು ಸಿಮೆಂಟ್ ಚಾಳನಲ್ಲಿ ಯುವತಿಯರಿಬ್ಬರು ಪ್ರತ್ಯೇಕವಾಗಿ ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ಅವರ ಪಾಲಕರು ತಮ್ಮ ಮಕ್ಕಳನ್ನು ಹುಡುಕಿ ಕೊಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ.
ಸಂಚಾರ ಉಲ್ಲಂಘನೆ: ಸಂಚಾರ ನಿಯಮ ಉಲ್ಲಂಘಿ ಸಿದವರ ಮೇಲೆ ಪೊಲೀಸರು ಮಂಗಳವಾರ 412 ಪ್ರಕರಣಗಳನ್ನು ದಾಖಲಿಸಿಕೊಂಡು, ಒಟ್ಟು 2,15,750 ರೂ. ದಂಡ ವಿಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ