ಡಿಕೆ ಶಿವಕುಮಾರ್ ತಿಹಾರ್ ನಿಂದ ಇಂದೇ ಬಿಡುಗಡೆಯಾಗುತ್ತಾರಾ? ಮುಂದಿನ ಪ್ರಕ್ರಿಯೆ ಏನು
Team Udayavani, Oct 23, 2019, 3:00 PM IST
ನವದೆಹಲಿ: ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಬುಧವಾರ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಆದರೆ ಡಿಕೆಶಿ ಇಂದೇ ತಿಹಾರ್ ಜೈಲಿನಿಂದ ಬಿಡುಗಡೆಯಾಗುತ್ತಾರಾ? ಮುಂದಿನ ಪ್ರಕ್ರಿಯೆಗಳೇನು?
ದೆಹಲಿ ಹೈಕೋರ್ಟ್ ಜಾಮೀನು ನೀಡಿರುವ ತೀರ್ಪಿನ ಪ್ರತಿಯನ್ನು ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಗೆ ತಲುಪಿಸಬೇಕು. ವಿಶೇಷ ಕೋರ್ಟ್ ನಿಂದ ಡಿಕೆಶಿ ಬಿಡುಗಡೆ ಮಾಡುವಂತೆ ತಿಹಾರ್ ಜೈಲಿಗೆ ಆದೇಶವನ್ನು ರವಾನಿಸಬೇಕು.
ವಿಶೇಷ ಕೋರ್ಟ್ ಮುಂದೆ ಇಬ್ಬರು ಶ್ಯೂರಿಟಿಗಳನ್ನು ಹಾಜರುಪಡಿಸಬೇಕು. 25 ಲಕ್ಷ ರೂಪಾಯಿ ಬಾಂಡ್ ನೀಡಬೇಕು. ಕೋರ್ಟ್ ಗೆ ಪಾಸ್ ಪೋರ್ಟ್ ಅನ್ನು ಒಪ್ಪಿಸಬೇಕು. ಈ ಎಲ್ಲಾ ಪ್ರಕ್ರಿಯೆಗಳನ್ನು ಇಂದೇ ಪೂರ್ಣಗೊಳಿಸಿದರೆ ಡಿಕೆ ಶಿವಕುಮಾರ್ ತಿಹಾರ್ ಜೈಲುವಾಸದಿಂದ ಮುಕ್ತಗೊಳ್ಳಲಿದ್ದಾರೆ.
ಇಲ್ಲದಿದ್ದಲ್ಲಿ ಗುರುವಾರ ಈ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರವೇ ಡಿಕೆಶಿ ತಿಹಾರ್ ಜೈಲಿನಿಂದ ಬಿಡುಗಡೆಗೊಳ್ಳಲಿದ್ದಾರೆ.