ಕರ್ನಾಟಕ ಶಾಸ್ರ್ತೀಯ ಸಂಗೀತದ ಅದ್ಬುತ ಪ್ರತಿಭೆ ಜಯಶ್ರೀ ರಮೇಶ್
Team Udayavani, Mar 9, 2022, 1:57 PM IST
ಕುದೂರು : ಒಂದೇ ಕಲೆಯಲ್ಲಿ ಪ್ರಾವೀಣ್ಯತೆ ಪಡೆಯುವುದು ಕಷ್ಟಕರ ಇನ್ನೂ ಎರಡೆರಡು ಸಂಗೀತ ಕಲೆಯಲ್ಲಿ ನೈಪುಣ್ಯತೆ ಪಡೆಯುವುದು ಅಪರೂಪದ ಸಂಗತಿ ಹೌದು. ಅಂತಹ ಪ್ರತಿಭಾವಂತರಿದ್ದಾರೆ ಅವರೇ ಕುದೂರಿನ ದಿ .ದಿವಂಗತ ಸಾಂಬಶಿವಯ್ಯ ನವರ ಮೊಮ್ಮಗಳು ಜಯಶ್ರೀ ರಮೇಶ್ ವಿದೂಷಿ ಜಯಶ್ರೀ ರಮೇಶ್ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡುಗಾರಿಕೆ ಬಹಳಷ್ಟು ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ.
ವಿದೂಷಿ ಜಯಶ್ರೀ ರಮೇಶ್ ರವರು ಶಾಸ್ತ್ರೀಯ ಸಂಗೀತ ಹಿನ್ನೆಲೆಯ ಕುಟುಂಬದಿಂದ ಬಂದವರು ಈ ಹೀಗಾಗಿ ಸಂಗೀತ ಕಲಿಯುವವರಿಗೆ ಜನ್ಮತಹ ಒಲಿದು ಬಂದಿದೆ ಎಂದರೆ ತಪ್ಪಾಗಲಾರದು. ಜಯಶ್ರೀ ಶ್ರೀಮತಿ ಮೀನಾಕ್ಷಿ ಮತ್ತು ಶ್ರೀ ರಾಮ ಮೂರ್ತಿ ಅವರ ಹಿರಿಯ ಪುತ್ರಿ. ಇವರಿಗೆ ಸಂಗೀತದ ಬಗ್ಗೆ ಆಸಕ್ತಿ ಹಾಗೂ ಪ್ರೇರಣೆ ನೀಡಿದವರು ಇವರ ತಂದೆ ರಾಮಮೂರ್ತಿ ರವರು ಇವರ ತಂದೆ ಪ್ರಸಿದ್ಧ ಮೃದಂಗ ವಾದಕರು ಹಾಗೂ ನಿವೃತ್ತಿ ಸಹಾಯಕ ಮುಖ್ಯ ಅಂಚೆ ಪಾಲಕರು .
ಜಯಶ್ರೀ ರವರು ತಮ್ಮ ಪ್ರಾರಂಭಿಕ ಸಂಗೀತ ಶಿಕ್ಷಣವನ್ನು ಟಿ.ಆರ್ ಗಂಗಾಧರಂ ಬೇತಮಂಗಲ ಇವರ ಬಳಿ ಆರಂಭಿಸಿದರು ಹಾಗೂ ಉನ್ನತ ಶಿಕ್ಷಣವನ್ನು ಶ್ರೀ ಕಂಚಿ ಕಾಮಕೋಟಿ ಪೀಠ ಆಸ್ಥಾನ ವಿದ್ವಾನ್ ವಿ .ರಮೇಶ್ ಬೇತಮಂಗಲ ಪ್ರಸಿದ್ಧ ನಾದಸ್ವರ ವಾದಕರು ಮತ್ತು ಶ್ರೀ ಗಂಗಾಧರ್ ಸ್ಮಾರಕ ಸಂಗೀತ ಪಾಠಶಾಲೆಯ ಪ್ರಾಂಶುಪಾಲರು ಮುಂದುವರಿಸಿದರು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ಸಂಗೀತ ಪರೀಕ್ಷೆಗಳಲ್ಲಿಯೂ ಸಹ ಉತ್ತಮ ಅಂಕ ಪಡೆದಿದ್ದಾರೆ .
ಸಾವಿರದ 1998 ರಿಂದ ತಮ್ಮ ಸಂಗೀತ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ.
ತ್ಯಾಗರಾಜ. ಪುರಂದರದಾಸರ .ಆರಾಧನೆಗಳಿಂದ ಅನೇಕ ಸಂಗೀತ ಕಚೇರಿಗಳನ್ನು ನಾಡಿನಾದ್ಯಂತ ಹಾಗೂ ಹೊರರಾಜ್ಯಗಳಲ್ಲಿ ನೀಡಿರುತ್ತಾರೆ. ಇವರ ಸಂಗೀತ ಸೇವೆಯನ್ನು ಗುರುತಿಸಿ ಅನೇಕ ಸಂಘ-ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ. ಇದರಲ್ಲಿ ಸ್ವರ್ಣಕಲಾಶ್ರೀ ಎಂಬ ಬಿರುದು ಕೂಡ ಬಂದಿದೆ. ಸಂಗೀತ ಕಲಾವಿದರಾಗಿ ಯೇ ಅಲ್ಲದೆ ಸಂಗೀತ ಶಿಕ್ಷಕಿಯಾಗಿ ಮಾರ್ಗದರ್ಶಕರಾಗಿ ಅನೇಕ ಶಿಕ್ಷಕರನ್ನು ತಯಾರು ಮಾಡಿದ್ದಾರೆ ಹಾಗೂ ಮಾಡುತ್ತಲೇ ಇದ್ದಾರೆ.
– ಕೆ.ಎಸ್.ಮಂಜುನಾಥ್ ಕುದೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ