ಗಂಗಾವತಿ: ಗಣೇಶ ಹೋದ ಜೋಕುಮಾರ ಸ್ವಾಮಿ ಬಂದ
Team Udayavani, Sep 21, 2021, 3:32 PM IST
ಗಂಗಾವತಿ: ಗಣೇಶ ಚತುರ್ಥಿ ನಂತರ ಜೋಕುಮಾರಸ್ವಾಮಿ ಜಗತ್ತಿಗೆ ಧಾವಿಸುತ್ತಾನೆ. ಜೋಕುಮಾರಸ್ವಾಮಿ ಬರುವಾಗ ನೈಸರ್ಗಿಕವಾಗಿ ಮಳೆಯಾಗುತ್ತದೆ ಇದನ್ನು ಜನರು ಕೆಟ್ಟದ್ದನ್ನ ಹೋಗಲಾಡಿಸಿ ಜನತೆಗೆ ಜೋಕುಮಾರಸ್ವಾಮಿ ಶುಭ ತರುತ್ತಾನೆ ಎಂಬ ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ .
ಸುಖ ಸಮೃದ್ಧಿಯನ್ನು ಸಂಕೇತವೇ ಜೋಕುಮಾರನ ಆಗಮನ ಎಂದು ಜಾನಪದರ ನಂಬಿಕೆಯಾಗಿದೆ.
ಪ್ರತಿ ವರ್ಷ ಗಣೇಶ ಚತುರ್ಥಿಯ ನಂತರ ಜೋಕುಮಾರ ಸ್ವಾಮಿಯ ಜನನವಾಗುತ್ತದೆ ನಿತ್ಯ ಸುಮಂಗಲಿಯರು ಜೋಕುಮಾರಸ್ವಾಮಿಗೆ ಅಲಂಕರಿಸಿ ಬುಟ್ಟಿಯಲ್ಲಿಟ್ಟುಕೊಂಡು ಮನೆಮನೆಗೆ ಹೋಗಿ ಭಿಕ್ಷೆಯನ್ನು ಬೇಡುತ್ತಾರೆ ಜೋಕುಮಾರ ಹಾಡನ್ನ ಹಾಡುತ್ತಾರೆ.
ಗಣೇಶ ಸವಿಸವಿಯಾದ ಕಡುಬಿನ ಭೋಜನ ಸವಿದು ಹೋದರೆ ಜೋಕಮಾರಸ್ವಾಮಿಗೆ ನುಚ್ಚು ಪುಂಡಿಪಲ್ಯ ಕಟಕು ರೊಟ್ಡಿ. ಮೆಣಸಿನಕಾಯಿ ಉಪ್ಪು ಇವೇ ನೈವೇದ್ಯ ಮನೆ ಮನೆಗೆ ಸುತ್ತಿ ಜನರು ಪಡುವ ಕಷ್ಟಗಳನ್ನು ನೋಡಿ ಅವುಗಳನ್ನು ಶಿವನಿಗೆ ತಿಳುಸುತ್ತಾನೆ .
ಜೋಕುಮಾರ ಸ್ವಾಮಿ ಹೋದ ನಂತರ ಮಳೆಯಾಗುತ್ತದೆ ಎಂಬುದು ಜನರ ನಂಬಿಕೆ.
ಜೋಕುಮಾರನ್ಮು ಬೇವಿನತಪ್ಪಲ ತುಂಬಿದ ಬುಟ್ಟಿಯಲ್ಲಿಟ್ಡುಕೊಂಡು ಮನೆ ಮನೆಗೆ ತೆರಳಿ ಜೋಕುಮಾರ ಬಂದಾಗ ಜೋಕಾಮಾರಾ ಎಂದು ಜೋಕಮಾರ ಗುಣಗಾನದ ಹಾಡು ಹಾಡುವ ಮಹಿಳೆಯರು ಜನರಿಂದ ನೈವೇದ್ಯ ಪಡೆದು. ಬೇವಿನ ಎಲೆಯಲ್ಲಿ ಕಾಡಿಗೆಯನ್ನು ನೀಡುತ್ತಾರೆ .
ಇದನ್ನೂ ಓದಿ : ಪುತ್ತೂರು:ಹೋಟೆಲ್ ನಲ್ಲಿ ಭಿನ್ನಕೋಮಿನ ಯವಕ-ಯುವತಿಗೆ ಹಲ್ಲೆ ಆರೋಪ:ಹಿಂದೂಸಂಘಟನೆಯ ಇಬ್ಬರ ಬಂಧನ
ಜಮೀನಿನಲ್ಲಿ ಹೊಳಿದರೆ ಉತ್ತಮ ಫಸಲು ನೀಡುತ್ತದೆ. ಮಕ್ಕಳು ಹಣೆಗೆ ಹಚ್ಚಿದರೆ ಕೆಟ್ಟ ದೃಷ್ಟಿ ಬೀಳುವುದಿಲ್ಲ ಎಂಬುದು ನಂಬಿಕೆ ಹೀಗೆ ಏಳುದಿನಗಳವರೆಗೆ ಊರು ಸುತ್ತುವ ಜೋಕುಮಾರ ಕುರಿತು ಜನಪದದಲ್ಲಿ ಅನೇಕ ಕಥೆಗಳು ಹಾಸುಹೊಕ್ಕಾಗಿವೆ. ಹುಣ್ಣೆಮೆ ಹಿಂದಿನ ರಾತ್ರಿ ಜೋಕುಮಾರನ ತಲೆ ಒಡೆದು ಹಳ್ಳಿಯಲ್ಲಿ ಇಡುವ ಪದ್ದತಿ ಇದೆ ಜೋಕುಮಾರ ಸ್ಬಾಮಿಯ ಆಚರಣೆ
ಉತ್ತರ ಕರ್ನಾಟಕದಲ್ಲಿ ಆಚರಣೆಯಲ್ಲಿದೆ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ