ಬಿದಿರ ಕೊರಡು ಕೊನರದೇಕೆ?


Team Udayavani, Jan 12, 2021, 12:43 PM IST

ಬಿದಿರ ಕೊರಡು ಕೊನರದೇಕೆ?

ಮೈಸೂರಿನಲ್ಲಿ ರಾಜಪುರೋಹಿತರ ವಂಶದಲ್ಲಿ ಹುಟ್ಟಿದ ವ್ಯಕ್ತಿ. ಐದನೇ ವಯಸ್ಸಿನಲ್ಲೇ ಪಿತೃವಿಯೋಗ. ಆದರೂ ತನ್ನ ಕುಲಗೌರವದ ಬಗ್ಗೆ, ಕುಟುಂಬದ ಘನತೆಯ ಬಗ್ಗೆ ಅತ್ಯಂತ ಸ್ಪಷ್ಟ ಕಲ್ಪನೆಯಿದ್ದ ಹುಡುಗ. ಹನ್ನೆರಡನೇ ವಯಸ್ಸಿಗೆ ರಾಮಾಯಣ, ಮಹಾಭಾರತ, ಭಾಗವತಗಳನ್ನು ಅರೆದುಕುಡಿದಿದ್ದ ನಿಶಿತಮತಿ. ಹದಿನೈದರ ವಯಸ್ಸಿಗಾಗಲೇ ಹಳೆಗನ್ನಡದ
ಛಂದಸ್ಸು, ವ್ಯಾಕರಣಗಳನ್ನೆಲ್ಲ ಆಮೂಲಾಗ್ರ ಓದಿ ತಿಳಿದು ಸ್ವತಃ ತಾನೂ ಕಾವ್ಯರಚನೆ ಮಾಡುತ್ತಿದ್ದ ಪ್ರತಿಭಾವಂತ! ಅವರು ದೇವುಡು. ನರಸಿಂಹ ಶಾಸ್ತ್ರೀ ಎಂಬುದು ಅವರ ನಾಮಧೇಯ.

ಮನೆತನದ ಹೆಜ್ಜೆಗುರುತುಗಳಲ್ಲೇ ಮುನ್ನಡೆದಿದ್ದರೆ ದೇವುಡು, ತಮ್ಮ ತಂದೆ-ತಾತಂದಿರಂತೆ ತಾವೂ ಆಸ್ಥಾನ ವಿದ್ವಾಂಸರಾಗಿ ಜೀವನ ಕಳೆಯುತ್ತಿದ್ದರೇನೋ. ಆದರೆ ಅವರದು ಹಲವು ದಿಕ್ಕಿಗೆ ಹರಿಯುವ ಬಹುಮುಖ ಪ್ರತಿಭೆ. ಬೆಂಗಳೂರಿಗೆ ಬಂದರು, ಮಕ್ಕಳ ಪತ್ರಿಕೆ ಮಾಡಿದರು, ಧಾರ್ಮಿಕ-ಸಾಮಾಜಿಕ ಕಾದಂಬರಿಗಳನ್ನು ಬರೆದರು, ಪತ್ರಿಕೆಯಲ್ಲಿ ಕಾದಂಬರಿಯನ್ನು ಧಾರಾವಾಹಿಯಾಗಿ ಪ್ರಕಟಿಸುವ ಸಂಪ್ರದಾಯಕ್ಕೆ ಚಾಲನೆ ಕೊಟ್ಟರು, ಸಿನೆಮಾ ಕ್ಷೇತ್ರಕ್ಕೆ ನುಗ್ಗಿದರು, ಚಿತ್ರಗಳನ್ನು ಸ್ವತಃ ನಿರ್ಮಾಣ ಮಾಡಿದರು, ಶಾಲೆ ಕಟ್ಟಿ ಬೆಳೆಸಿದರು, ನಾಟಕರಂಗದಲ್ಲಿ ಕೈಯಾಡಿಸಿದರು, ವಿಶ್ವವಿದ್ಯಾಲಯದಲ್ಲಿ ಸರಣಿ ಉಪನ್ಯಾಸಗಳನ್ನು ಮಾಡಿದರು, ಸಂಸ್ಕೃತದ ಪ್ರಚಾರಕ್ಕೆ ಹಗಲಿರುಳು ಶ್ರಮಿಸಿದರು, ರಾಜ್ಯದ ಪಠ್ಯಪುಸ್ತಕ ರಚನೆಯ ಸಮಿತಿಯಲ್ಲಿ ಗುರುತರವಾದ ಪಾತ್ರ ವಹಿಸಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬ ಮಾತಿಗೆ ಮನುಷ್ಯಪ್ರಪಂಚದ ಒಂದು ಸಂವಾದೀ ಉದಾಹರಣೆಯಿದ್ದರೆ ಅದು ಇವರೇ ಎನ್ನುವಷ್ಟು ಅವರ ಪ್ರತಿಭೆಗೆ ನೂರು ದಿಕ್ಕು, ಸಾವಿರ ದೆಸೆ.

ಇದನ್ನೂ ಓದಿ: devudu narasimha sastry

ದೇವುಡು ಅವರು ಮೈಸೂರಿನಲ್ಲಿದ್ದ ಸಂದರ್ಭ. ಅವರಿಗೆ 18ರ ಹರೆಯ. ಮೈಸೂರಿನ ಕೇಂದ್ರವೃತ್ತದಲ್ಲಿ ಓರ್ವ ಪಾದ್ರಿ ಮತಭಾಷಣ ಮಾಡುತ್ತಿದ್ದ. ನೂರಾರು ಮಂದಿ ಸೇರಿದ್ದರು. ಗುಂಪು ಕಂಡು ಹುರುಪುಗೊಂಡ ಪಾದ್ರಿ ತನ್ನ ಮತಪ್ರಚಾರದ ಭಾಷಣ ಕೈಬಿಟ್ಟು ಹಿಂದೂ ಧರ್ಮದ ಅವಹೇಳನಕ್ಕೆ ನಿಂತುಬಿಟ್ಟ. “ನಿಮ್ಮ ದೇವರು ಕೃಷ್ಣ ಕೊಳಲು ಹಿಡಿದಿದ್ದಾನೆ. ಅವನು
ಕೊಳಲೂದಿದರೆ ಬತ್ತಿದ ನದಿಗಳಲ್ಲಿ ಪ್ರವಾಹ ತುಂಬುತ್ತಂತೆ. ಬಾಡಿದ ಹೂಗಳು ಅರಳಿ ನಿಲ್ತಾವಂತೆ. ಪಾಳುಬಿದ್ದ ಹೊಲಗದ್ದೆಯಲ್ಲಿ ಬೆಳೆ ಬರುತ್ತಂತೆ.

ಕೊರಡು ಕೂಡ ಕೊನರುತ್ತಂತೆ, ಎಲೆ-ಚಿಗುರು ಬಿಡುತ್ತಂತೆ. ಅದೆಲ್ಲ ಹೌದೇ ಆಗಿದ್ದರೆ ಆತನ ಕೈಯಲ್ಲಿರುವ ಆ ಬಿದಿರು ಕೊಳವೆ ಕೊಳಲಿನಲ್ಲೂ ಎಲೆ ಹೂಗಳೆಲ್ಲ ಬರಬೇಕಿತ್ತಲ್ಲ? ಅದೇಕೆ ಇನ್ನೂ ಬಿದಿರಾಗಿಯೇ ಉಳಿದಿದೆ?” ಎಂದು ಕೆಣಕಿದ. ನೆರೆದಿದ್ದ ಮಂದಿಗೆ ಇದರಿಂದ ಸಂಕಟವೇನೋ ಆಯಿತು, ಆದರೆ ಪಾದ್ರಿಯ ಪ್ರಶ್ನೆಗೆ ಬದಲು ಹೇಳಲು ಆಗಲಿಲ್ಲ. ಮೌನವಾಗಿದ್ದ ಆ
ಗುಂಪಿನಿಂದ ಈ ಹದಿನೆಂಟರ ಹುಡುಗ ಮುಂದೆ ಬಂದ. “ಮಹನೀಯರೇ, ಕೃಷ್ಣನ ಕೊಳಲು ಯಾಕೆ ಕೊನರುವುದಿಲ್ಲ ಎಂದು ಕೇಳುತ್ತಿದ್ದೀರಿ. ಕೃಷ್ಣನ ಸ್ಪರ್ಷಮಾತ್ರದಿಂದ ಸತ್ತಂತೆ ಮಲಗಿದವರು ಎದ್ದುಬರುವ ಪವಾಡ ನಡೆಯುತ್ತದೆ. ಅಂಥಾದ್ದರಲ್ಲಿ, ಅವನ ಕೈಯೊಳಗಿರುವ ಬಿದಿರು ಚಿಗುರದೆ ಹೋದೀತೇ? ಆದರೆ ಆ ಬಿದಿರಿಗೂ ಭಯ ಇದೆ. ತಾನು ಚಿಗುರಿ ಹೂ-ಕಾಯಿ ಬಿಟ್ಟರೆ ಕೃಷ್ಣ ಎಲ್ಲಿ ತನ್ನನ್ನು ಎಸೆದು ಬೇರೊಂದು ಬಿದಿರ ಕೊಳವೆ ಎತ್ತಿಕೊಳ್ಳುತ್ತಾನೋ ಎಂದು ಹೆದರಿ ಆ ಕೊಳಲು ಕೊನರದೆ ಹಾಗೇ ಉಳಿದಿದೆ’ ಎಂದು ಎದೆಸೆಟೆಸಿ ಉತ್ತರ ಕೊಟ್ಟ. ಅಷ್ಟು ಹೊತ್ತು ಪಾದ್ರಿಯ ಮಾತುಗಳನ್ನು ಗತ್ಯಂತರವಿಲ್ಲದೆ ಕೇಳುತ್ತ ಕೈಹೊಸಕಿಕೊಳ್ಳುತ್ತ ನಿಂತಿದ್ದ ಅಸಹಾಯ ಸಮೂಹ ಇದೀಗ ಉತ್ತೇಜಿತವಾಗಿ ಮೈಮರೆತು ಚಪ್ಪಾಳೆ ತಟ್ಟಿತು.

ದೇವುಡು ಅವರ ವಾದಕ್ಕೆ ಮರುವಾದ ಹೂಡಲು ಸಾಧ್ಯವಾಗದೆ ಪಾದ್ರಿ ಮೌನವಾಗಿ ಜಾಗ ಖಾಲಿ ಮಾಡಿದ.

– ರೋಹಿತ್‌ ಚಕ್ರತೀರ್ಥ

ಟಾಪ್ ನ್ಯೂಸ್

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.