ಆಲ್ ದ ಬೆಸ್ಟ್ ಅಂದವಳು ಮತ್ತೆ ಬರುವೆ ತಾನೇ?
Team Udayavani, Jan 19, 2021, 3:19 PM IST
ಮೈಯೆಲ್ಲ ಗಡಗಡ ನಡುಗುವಷ್ಟು ಚಳಿಯಿದ್ದರೂ ಬೆಳಗ್ಗೆ 8 ಗಂಟೆಗೆ ಹಾಜರಾಗಿ ಪರೀಕ್ಷೆ ಬರೆಯಲೇಬೇಕಿತ್ತು. ಬೇಗ ಎದ್ದು ರೆಡಿಯಾಗಿ ಏಳು ಘಂಟೆಗೆ ಸಿಟಿಬಸ್ ಸ್ಟಾಪಿನಲ್ಲಿ ಹಾಜರಾಗಿದ್ದೆ. ಹತ್ತು ನಿಮಿಷ ಕಳೆದರೂ ಬಸ್ಸೂ ಇಲ್ಲ, ಆಟೋನೂ ಇಲ್ಲ. ಏನು
ಮಾಡಲೂ ತೋಚದೆ ಕಂಗಾಲಾಗಿ ನಿಂತಿದ್ದೆ. ಆಗಲೇ, ಮುಸುಕಿದ್ದ ಮಂಜಿನ ಮಧ್ಯೆ ಯಾವುದೋ ಸ್ಕೂಟಿ ನನ್ನತ್ತ ಬರುತ್ತಿರುವುದು ಕಂಡಿತು.
ನೋಡಿದ್ರೆ ಅದು ನೀನು! ನಿನ್ನ ಮೊಗವನ್ನು ಕಂಡಾಕ್ಷಣ ಫ್ರೆಶ್ ನೆಸ್ ಅಂತಾರಲ್ಲ; ಅಂಥ ಭಾವವೊಂದು ಮನವನ್ನು ತುಂಬಿಕೊಂಡಿತು. ವಾರದ ಹಿಂದೆ ಹುಸಿ ಕೋಪದಿಂದ ಮುನಿಸಿಕೊಂಡು ಹೋಗಿದ್ದವಳು, ಈಗ ದಿಢೀರನೆ ಪ್ರತ್ಯಕ್ಷಳಾಗಿದ್ದು
ಕಂಡು ನನ್ನ ಮನಸ್ಸು ಒಳಗೊಳಗೆ ಕುಣಿದು ಕುಪ್ಪಳಿಸಿತು.
ಚಳಿಗೆ ಕುಕ್ಕುರು ಹಿಡಿದು ನಿಂತಿದ್ದ ನನ್ನನ್ನು ನೋಡಿ, ಸ್ಕೂಟಿಯ ಸೀಟ್ ಡಿಕ್ಕಿ ತೆಗೆದು ಸ್ವೆಟರ್ ನ್ನು ಕೈಗಿಟ್ಟು, ಹಾಕಿಕೊಂಡು ಹಿಂದೆ ಕುಳಿತುಕೊ ಎನ್ನುವ ಫರ್ಮಾನನ್ನು ಕಣ್ಣಂಚಲೇ ಹೊರಡಿಸಿದ ಮರುಗಳಿಗೆಯಲಿ ನಿನ್ನ ಗಾಡಿ ಏರಿ ಕೂತೆ. ಸ್ಕೂಟಿ
ಮಂಜಿನ ಗಾಳಿಯನ್ನು ಸೀಳಿ ಹೋಗುವಾಗ ಚಳಿ ಇಮ್ಮಡಿಯಾಗುತಿದ್ದರೂ ನೀ ಕೊಟ್ಟ ಸ್ವೆಟರ್ ಬೆಚ್ಚನೆಯ ಅನುಭವ ನೀಡಿತ್ತು. ಹಾಗೆಯೇ ತಂಗಾಳಿಯಲ್ಲಿ ಮಿಂದು ನನ್ನ ಮುಖಕ್ಕೆ ತಾಕುತಿದ್ದ ನಿನ್ನ ಮುಂಗುರುಳು ನನ್ನನ್ನು ಪರವಶಗೊಳಿಸಿ ನಾನೆಲ್ಲೋ ತೇಲಿ ಹೋದೆ. ಎಕ್ಸಾಮ್ ಸೆಂಟರ್ ಕಣ್ಣಿಗೆ ಬೀಳುತ್ತಲೇ, ಈ ಸುಂದರ ಪಯಣ ಬೇಗನೆ ಮುಗಿಯುತಲ್ಲ ಎನ್ನುವ ಬೇಸರ ನನ್ನದಾಗಿತ್ತು. ನೀನೋ- ಸ್ಕೂಟಿಯಿಂದ ನಾನು ಕೆಳಗಡೆ ಇಳಿದೊಡನೆಯೇ ಕೈ ಕುಲುಕಿ “ಆಲ್ ದಿ ಬೆಸ್ಟ್” ಎಂದು ವಿಶ್ ಮಾಡಿ ಬೇರೇನೂ
ಮಾತಾಡದೆ ಭರ್ರನೆ ಹೊರಟುಹೋದೆಯೆಲ್ಲ, ನನ್ನ ಹೃದಯದ ಕತೆ ಹೇಗಾಗಿರಬೇಡ ಹೇಳು? ನಿಂಗೊತ್ತಾ, ಎಕ್ಸಾಮ್ ಹಾಲ್ ನಲ್ಲಿ ನಿನ್ನದೇ ಗುಂಗಲ್ಲಿದ್ದರೂ ಊಹೆಗೆ ಮೀರಿ ಪರೀಕ್ಷೆಯನ್ನು ಮಸ್ತ್ ಬರೆದಿದ್ದೀನಿ.
– ಶಿವರಾಜ್ ಬಿ. ಎಲ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ʼಭಜರಂಗಿ ಭಾಯಿಜಾನ್ʼ, ʼರೌಡಿ ರಾಥೋರ್ʼ ಸೀಕ್ವೆಲ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ನಿರ್ಮಾಪಕ
Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ
Revealed; ನೇಹಾ ಹಿರೇಮಠ ಹಂತಕ ಫಯಾಜ್ನ ಮತ್ತೊಂದು ಕರಾಳ ಮುಖ ಅನಾವರಣ
Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ
Bidar; ಖೂಬಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವೆ: ಈಶ್ವರ್ ಖಂಡ್ರೆ