ಏ.12ರಂದು ಉದಯವಾಣಿ ಫೇಸ್ ಬುಕ್ ಲೈವ್ ನಲ್ಲಿ ಕನ್ನಡ ಕೋಗಿಲೆ ಖ್ಯಾತಿಯ ಕಲಾವತಿ ದಯಾನಂದ್
ಸಿ.ಅಶ್ವತ್ಥ್ ಅವರ ಕೋಳಿಗೆ ರಂಗ ಹಾಡು ಕಲಾವತಿಯವರನ್ನು ಮತ್ತಷ್ಟು ಎತ್ತರಕ್ಕೆ ಏರಿಸಿತ್ತು
Team Udayavani, Apr 10, 2021, 5:04 PM IST
ಮಣಿಪಾಲ: ಕನ್ನಡ ಗಾನ ಕೋಗಿಲೆ ರಿಯಾಲಿಟಿ ಶೋನಲ್ಲಿ ತನ್ನ ಅದ್ಭುತ ಕಂಠಸಿರಿಯ ಜನಪದ ಹಾಡಿನ ಮೂಲಕ ಜನಪ್ರಿಯರಾಗಿದ್ದ ಉಡುಪಿಯ ಕಲಾವತಿ ದಯಾನಂದ್ ಉದಯವಾಣಿ ಡಾಟ್ ಕಾಮ್ ನ ತೆರೆದಿದೆ ಮನೆ ಬಾ ಅತಿಥಿ ಎಂಬ ಫೇಸ್ ಬುಕ್ ಲೈವ್ ಕಾರ್ಯಕ್ರಮದಲ್ಲಿ ಸೋಮವಾರ(ಏಪ್ರಿಲ್ 12) ಪಾಲ್ಗೊಳ್ಳಲಿದ್ದಾರೆ.
ಕಲಾವತಿ ದಯಾನಂದ ಅವರ ಜತೆ ಸೋಮವಾರ ಸಂಜೆ 5.30ಕ್ಕೆ ಫೇಸ್ ಬುಕ್ ಲೈವ್ ನಲ್ಲಿ ಮಾತುಕತೆ ನಡೆಸಲಿದ್ದು, ಈ ಸಂದರ್ಭದಲ್ಲಿ ಓದುಗರು, ಅಭಿಮಾನಿಗಳು ತಮ್ಮ ಪ್ರಶ್ನೆಗಳನ್ನು ಲೈವ್ ಚಾಟ್ ಮೂಲಕ ಕೇಳಿ ಉತ್ತರ ಪಡೆಯಬಹುದಾಗಿದೆ.
ಅಭಿನಯಿಸುತ್ತಲೇ ಹಾಡುವುದು ಕಲಾವತಿ ಪುತ್ರನ್ ಅವರ ವಿಶಿಷ್ಟ ಕಲಾಶೈಲಿಯಾಗಿದೆ. ಉಷಾ ಉತ್ತಪ್ಪ ಅವರ ಹಾಡುಗಳನ್ನು ಜನಪ್ರಿಯಗೊಳಿಸಿರುವ ಇವರು, ಅಶ್ವತ್ಥ್ ಹಾಡುಗಳ ಮೂಲಕ ಮನೆಮಾತಾಗಿದ್ದಾರೆ. ಹಾಡುವುದು ಕಲಾವತಿಯವರಿಗೆ ಚಿಕ್ಕಂದಿನಿಂದಲೂ ಸಿದ್ದಿಸಿದ ಕಲೆಯಾಗಿದೆ.
ಕಂಚಿನ ಕಂಠದ ಗಾಯಕಿ, ಗಾನಕೋಗಿಲೆ ಎಂದು ಬಿರುದು ಪಡೆದಿರುವ ಕಲಾವತಿ ದಯಾನಂದ್ ಅಪ್ಪಟ ಜನಪದ ಶೈಲಿಯಲ್ಲಿ ಹಾಡುವ ಮೂಲಕ ರಾಜ್ಯಾದ್ಯಂತ ಅಪಾರ ಅಭಿಮಾನಿಗಳನ್ನು ಪಡೆದುಕೊಂಡಿದ್ದು ಇವರ ಹೆಗ್ಗಳಿಕೆ. ಸಿ.ಅಶ್ವತ್ಥ್ ಅವರ ಕೋಳಿಗೆ ರಂಗ ಹಾಡು ಕಲಾವತಿಯವರನ್ನು ಮತ್ತಷ್ಟು ಎತ್ತರಕ್ಕೆ ಏರಿಸಿತ್ತು ಎಂಬುದರಲ್ಲಿ ಎರಡು ಮಾತಿಲ್ಲ.
ಉಡುಪಿಯ ಕರಾವಳಿಯ ಸಾಮಾನ್ಯ ಮೀನುಗಾರರ ಕುಟುಂಬದಲ್ಲಿ ಜನಿಸಿದ್ದ ಕಲಾವತಿಯವರಿಗೆ ಚಿಕ್ಕಂದಿನಿಂದಲೂ ಹಾಡುವ ಅಭ್ಯಾಸ ಬೆಳೆಸಿಕೊಂಡಿದ್ದ ಇವರು ಇಂದು ಜಾನಪದ, ಸುಗಮ ಸಂಗೀತ ಸೇರಿದಂತೆ ಹಲವಾರು ಗೀತೆಗಳ ಮೂಲಕ ಕಡಲತಡಿಯಿಂದ ಹಿಡಿದು ವಿದೇಶದವರೆಗೂ ತಮ್ಮ ಕಂಠಸಿರಿಯ ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ