ಸಾಗರಮಾಲಾ ವಿರೋಧಿಸಿ “ಕಾರವಾರ ಬಂದ್’
Team Udayavani, Jan 16, 2020, 7:51 PM IST
ಕಾರವಾರ: ಇಲ್ಲಿಯ ವಾಣಿಜ್ಯ ಬಂದರು ಎರಡನೇ ಹಂತದ ವಿಸ್ತರಣೆ ಸಾಗರಮಾಲಾ ಯೋಜನೆ ವಿರೋಧಿಸಿ ಮೀನುಗಾರರು ವಿವಿಧ ಸಂಘಟನೆಗಳ ಸಹಕಾರದಲ್ಲಿ ಗುರುವಾರ ಹಮ್ಮಿಕೊಂಡಿದ್ದ “ಕಾರವಾರ ಬಂದ್’ ಸಂಪೂರ್ಣ ಯಶಸ್ವಿಯಾಯಿತು.
ನಗರದ ಎಲ್ಲ ಅಂಗಡಿ ಮುಂಗಟ್ಟುಗಳು, ಹೋಟೆಲ್ಗಳು ಮುಚ್ಚಿ ಬೆಂಬಲ ಘೋಷಿಸಿದ್ದವು. ಇಡೀ ನಗರ ಸ್ತಬ್ಧವಾಗಿತ್ತು. ಹೊರ ರಾಜ್ಯಗಳು ಹಾಗೂ ಬೇರೆ ಜಿಲ್ಲೆಗಳಿಂದ ಬರುವ ಬಸ್ಗಳು ಮಾತ್ರ ನಗರಕ್ಕೆ ಬೆಳಗ್ಗೆ ಆಗಮಿಸಿದವು. ರಿûಾ, ಟೆಂಪೋ ರಸ್ತೆಗಿಳಿಯಲಿಲ್ಲ. ಪ್ರಯಾಣಿಕರು, ವಿದ್ಯಾರ್ಥಿಗಳು ಪ್ರಯಾಸ ಪಡಬೇಕಾಯಿತು. ಕೆಲವು ಕಾಲೇಜುಗಳು ಮಾತ್ರ ತೆರೆದಿದ್ದವು.
ಮಾಜಿ ಶಾಸಕ ಸತೀಶ್ ಸೈಲ್, ಮಾಜಿ ಸಚಿವ ಆನಂದ ಅಸ್ನೋಟಿಕರ್ ಸೇರಿ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಮೀನುಗಾರ ಸಂಘಟನೆಗಳ ಮುಖಂಡರು ಬೆಂಬಲ ವ್ಯಕ್ತಪಡಿಸಿದರು. 6 ಕೆಎಸ್ಆರ್ಪಿ, 8 ಡಿಆರ್ ಹಾಗೂ 700ಕ್ಕೂ ಹೆಚ್ಚು ಪೋಲಿಸರನ್ನು ಬಂದೋಬಸ್ತ್ಗೆ ನಿಯೋಜಿಸಲಾಗಿತ್ತು. ಎಸ್ಪಿ ಶಿವಪ್ರಕಾಶ ದೇವರಾಜು ನಿಗಾ ವಹಿಸಿದ್ದರು.