ರಿವರ್ಸ್ ತೆಗೆಯುವ ವೇಳೆ ಬಾವಿಗೆ ಬಿದ್ದ ಲಾರಿ! ಚಾಲಕ ಅಪಾಯದಿಂದ ಪಾರು
Team Udayavani, Nov 3, 2020, 10:10 PM IST
ಕಾರ್ಕಳ: ಗೊಬ್ಬರ ಹೇರಿಕೊಂಡು ಬಂದಿದ್ದ ಲಾರಿಯೊಂದು ರಿವರ್ಸ್ ತೆಗೆಯು ವೇಳೆ ಬಾವಿಗೆ ಬಿದ್ದ ಘಟನೆ ಕಾರ್ಕಳದ ಪಾಲಡ್ಕ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ.
ಘಟನೆಯಲ್ಲಿ ಲಾರಿ ಚಾಲಕ ಲಾರಿಯೊಳಗೆ ಸಿಲುಕಿಕೊಂಡಿದ್ದು ಹೊರ ತೆಗೆಯಲು ಸಾರ್ವಜನಿಕರು ಹರಸಾಹಸ ಪಡೆಬೇಕಾಯಿತು, ಚಾಲಕ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾನೆ.
ಮಂಗಳೂರಿನಿಂದ ಗೊಬ್ಬರ ಹೇರಿಕೊಂಡು ಕಾರ್ಕಳದ ಪಾಲಡ್ಕಕ್ಕೆ ಬಂದಿದ್ದು ಈ ಸಂದರ್ಭ ಲಾರಿ ಚಾಲಕ ಗಾಡಿಯನ್ನು ಹಿಂದೆ ತೆಗೆಯುವ ವೇಳೆ ಅಲ್ಲೇ ಬದಿಯಲ್ಲಿದ್ದ ಬಾವಿಗೆ ಬಿದ್ದಿದೆ. ತಕ್ಷಣ ಸ್ಥಳೀಯರು ಸೇರಿ ಲಾರಿಯೊಳಗೆ ಸಿಲುಕಿದ್ದ ಚಾಲಕನನ್ನು ಹೊರತೆಗೆಯಲು ಹರಸಾಹಸ ಪಟ್ಟರು.
ಇದನ್ನೂ ಓದಿ:ಕಾವೂರು: ಚೂರಿಯಿಂದ ಇರಿದು ಮಲ್ಲಿ ಲೇಔಟ್ ನಿವಾಸಿಯ ಬರ್ಬರ ಹತ್ಯೆ!