ಕರ್ನಾಟಕ-ಗೋವಾ ರೈಲ್ವೆ ಹಳಿ ಡಬ್ಲಿಂಗ್ ಅನುಮತಿ ರದ್ದು ಪಡಿಸಿದ ಸುಪ್ರೀಂಕೋರ್ಟ್
Team Udayavani, May 9, 2022, 10:00 PM IST
ನವದೆಹಲಿ : ಕರ್ನಾಟಕದ ಕ್ಯಾಸಲ್ ರಾಕ್ನಿಂದ ಗೋವಾದ ಕುಲೇಮ್ವರೆಗೆ ರೈಲ್ವೆ ಲೈನ್ ಡಬ್ಲಿಂಗ್ಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ(ಎನ್ಬಿಡಬ್ಲ್ಯುಎಲ್)ಯ ಸ್ಥಾಯಿ ಸಮಿತಿ ನೀಡಿದ್ದ ಅನುಮತಿಯನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದೆ.
ಸುಪ್ರೀಂ ಕೋರ್ಟ್ ನೇಮಿಸಿದ್ದ ಕೇಂದ್ರ ಉನ್ನತಾಧಿಕಾರ ಸಮಿತಿಯ ವರದಿಯನ್ನು ಆಧರಿಸಿ ನ್ಯಾ.ಎಲ್. ನಾಗೇಶ್ವರ ರಾವ್ ನೇತೃತ್ವದ ನ್ಯಾಯಪೀಠ ಈ ನಿರ್ಧಾರ ಕೈಗೊಂಡಿದೆ. “ದೇಶದ ಮಹತ್ವದ ವನ್ಯಜೀವಿ ಕಾರಿಡಾರ್ ಆಗಿರುವ ಹಾಗೂ ಅಂತಾರಾಷ್ಟ್ರೀಯವಾಗಿ ಮಾನ್ಯತೆ ಪಡೆದಿರುವ ಜೀವವೈವಿಧ್ಯ ತಾಣವಾದ ಪಶ್ಚಿಮಘಟ್ಟದ ಜೀವವ್ಯವಸ್ಥೆಯನ್ನೇ ಈ ರೈಲ್ವೆ ಹಳಿಯು ನಾಶ ಮಾಡಲಿದೆ. ಹೀಗಾಗಿ ಇಲ್ಲಿ ಹಳಿಯ ಡಬ್ಲಿಂಗ್ ಸಮರ್ಥನೀಯವಲ್ಲ’ ಎಂದು 2021ರ ಏ.23ರಂದು ಸಲ್ಲಿಸಲಾದ ವರದಿಯಲ್ಲಿ ಸಮಿತಿ ತಿಳಿಸಿತ್ತು.
ಎನ್ಬಿಡಬ್ಲ್ಯುಎಲ್ ಸ್ಥಾಯಿ ಸಮಿತಿಯು ರೈಲ್ವೆ ಹಳಿ ಡಬ್ಲಿಂಗ್ ಮಾತ್ರವಲ್ಲದೇ, ಗೋವಾ-ಕರ್ನಾಟಕ ಗಡಿಭಾಗದ ಅನ್ಮೋಡ್ನಿಂದ ಮೊಲ್ಲೆಮ್ವರೆಗಿನ 4ಎ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥಗೊಳಿಸುವಿಕೆ, ಗೋವಾದ ಸಂಗೋಡ್ನಿಂದ ಕರ್ನಾಟಕ ಗಡಿಯವರೆಗೆ 400 ಕೆವಿ ಟ್ರಾನ್ಸ್ಮಿಷನ್ ಲೈನ್ ಅಳವಡಿಸುವ ಯೋಜನೆಗೂ ಅನುಮತಿ ನೀಡಿತ್ತು. ಈಗ ಹಳಿ ಡಬ್ಲಿಂಗ್ಗೆ ನೀಡಿದ ಅನುಮತಿಯನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದ್ದು, ಷರತ್ತುಬದ್ಧವಾಗಿ ಹೆದ್ದಾರಿ ವಿಸ್ತರಣೆಗೆ ಅನುಮತಿ ನೀಡಿದೆ. ಜತೆಗೆ, ಈಗಿರುವ 220 ಕೆವಿ ಪವರ್ಲೈನ್ ಅನ್ನೇ ಬಳಸಿಕೊಂಡು ಹೊಸ 400 ಕೆವಿ ಲೈನ್ ಅಳವಡಿಸುವಂತೆಯೂ ಸೂಚಿಸಿದೆ.
ಇದನ್ನೂ ಓದಿ : 228 ಲೀಟರ್ ಮದ್ಯ ವಶ ಪ್ರಕರಣ: ತಲೆಮರೆಸಿಕೊಂಡ ಆರೋಪಿ ಸೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ
MUST WATCH
ಹೊಸ ಸೇರ್ಪಡೆ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ
ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil
Mumbai Airport: ನ್ಯೂಡಲ್ಸ್ ಪ್ಯಾಕೇಟ್ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್