ದ.ಕ.-ಕಾಸರಗೋಡು ಸಂಚಾರ: 2 ತಾಸಿನೊಳಗೆ ಪಾಸ್‌


Team Udayavani, Jun 7, 2020, 9:49 AM IST

ದ.ಕ.-ಕಾಸರಗೋಡು ಸಂಚಾರ: 2 ತಾಸಿನೊಳಗೆ ಪಾಸ್‌

ಮಂಗಳೂರು: ಕಾಸರಗೋಡು ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಉದ್ಯೋಗ, ಶಿಕ್ಷಣ ಮೊದಲಾದ ಅಗತ್ಯ ಕೆಲಸಗಳಿಗಾಗಿ ಆಗಮಿಸುವವರ ದೈನಂದಿನ ಓಡಾಟ ಕ್ಕಾಗಿ ಪಾಸ್‌ ವಿತರಿಸಲಾಗುತ್ತಿದ್ದು, ಕಳೆದೆರಡು ದಿನ ಗಳಲ್ಲಿ 150 ಪಾಸ್‌ಗಳು ವಿತರಣೆಯಾಗಿವೆ.

ಕಾಸರಗೋಡಿನಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಲು 3,000 ಅರ್ಜಿಗಳು ಸಲ್ಲಿಕೆಯಾಗಿದ್ದು, ಆ ಪೈಕಿ 850 ಅರ್ಜಿ ವಿಲೇವಾರಿ ಮಾಡಲಾಗಿದೆ. ಅರ್ಜಿ ಸಲ್ಲಿಕೆಯಾದ 2 ಗಂಟೆಯೊಳಗೆ ಪಾಸ್‌ ನೀಡಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಂಗಳೂರು ಉಪವಿಭಾಗಾಧಿ ಕಾರಿ ಮದನ್‌ ಮೋಹನ್‌ ತಿಳಿಸಿದ್ದಾರೆ.

ಗೊಂದಲ ಬೇಡ
ಉದ್ದೇಶಪೂರ್ವಕ ಯಾರಿಗೂ ಪಾಸ್‌ ನಿರಾಕರಿಸುತ್ತಿಲ್ಲ. ಇದು ಎರಡು ಜಿಲ್ಲೆಗಳ ನಡುವಿನ ಸಂಚಾರ ಮಾತ್ರವಲ್ಲದೆ, ಎರಡು ರಾಜ್ಯಗಳ ನಡುವಿನ ಸಂಚಾರವಾಗಿದೆ. ಹಾಗಾಗಿ ಹೆಚ್ಚಿನ ಮುಂಜಾಗರೂಕತಾ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ. ಅರ್ಜಿ ಸಲ್ಲಿಸುವಾಗ ವಿಳಾಸ ದೃಢೀಕರಿಸುವ ಆಧಾರ್‌ ಅಥವಾ ಇತರ ಗುರುತುಪತ್ರ ಸಲ್ಲಿಸದಿರುವುದರಿಂದ ಪಾಸ್‌ ನಿರಾಕರಣೆ ಯಾಗಿದೆ. ಕಟ್ಟಡ ಕೆಲಸಗಳಿಗೆ ಬರುವವರು ನಿರ್ಮಾಣ ಸಂಸ್ಥೆ ಅಥವಾ ಕೆಲಸ ಮಾಡಿಸುತ್ತಿ ರುವವರಿಂದ ಅಧಿಕೃತ ಪತ್ರವನ್ನು ಅಪ್‌ಲೋಡ್‌ ಮಾಡಬೇಕು. ಕೆಲವು ಮಂದಿ ಅವರ ದಾಖಲೆಗಳಲ್ಲಿ ಮಂಗಳೂರಿನ ವಿಳಾಸವನ್ನು ನೀಡಿದ್ದಾರೆ. ಹಾಗಾಗಿ ತಿರಸ್ಕೃತಗೊಂಡಿದೆ ಎಂದು ಮದನ್‌ ಮೋಹನ್‌ ಅವರು ತಿಳಿಸಿದ್ದಾರೆ.

ಜೂ. 30ರ ವರೆಗೆ ಅವಧಿ
ಪಾಸ್‌ ನೀಡುತ್ತಿರುವುದು ವೃತ್ತಿ ಸಂಬಂದ ಸಂಚಾರಕ್ಕಾಗಿ. ಅದರ ಅವಧಿ ಜೂ. 30ರ ವರೆಗೆ ಇರುತ್ತದೆ. ಒಂದು ವೇಳೆ ಸಂಬಂಧಿಕರ ಮನೆಗೆ ಬಂದು ನಿಲ್ಲುವುದಾದರೆ ಅಥವ ದ.ಕ. ಜಿಲ್ಲೆಯಿಂದ ಸದ್ಯಕ್ಕೆ ವಾಪಸ್‌ ಹೋಗುವುದಿಲ್ಲವೆಂದಾದರೆ ಸೇವಾ ಸಿಂಧು ಆ್ಯಪ್‌ ಮೂಲಕ ಪಾಸ್‌ ಪಡೆಯಬೇಕು. ಅವರಿಗೆ ಹೋಂ ಕ್ವಾರಂಟೈನ್‌ ಇರುತ್ತದೆ. ನಾವು ನೀಡುವ ದೈನಂದಿನ ಪಾಸ್‌ ಪಡೆದು ಬರುವವರಿಗೆ ಸಾಂಸ್ಥಿಕ ಅಥವಾ ಹೋಂ ಕ್ವಾರಂಟೈನ್‌ ಇರುವುದಿಲ್ಲ. ಪಾಸ್‌ನಲ್ಲಿ ಬಾರ್‌ಕೋಡ್‌ ಇರುವುದರಿಂದ ಪಾಸ್‌ ಪಡೆದವರು ಜಿಲ್ಲೆ ಯಿಂದ ವಾಪಸಾಗಿದ್ದಾರೆಯೇ ಅಥವಾ ಉಳಿದುಕೊಂಡಿದ್ದಾರೆಯೇ ಎಂಬ ಮಾಹಿತಿ ಲಭ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ಕಾಸರಗೋಡು ಬಿಜೆಪಿ ಆರೋಪ
ಕರ್ನಾಟಕ ಸರಕಾರ ರಾಜ್ಯ ಪ್ರವೇಶಕ್ಕೆ ಅನುಮತಿಸಿದರೂ ದ.ಕ. ಜಿಲ್ಲಾಡಳಿತ ಕಾಸರ ಗೋಡಿ ನವರಿಗೆ ಪಾಸ್‌ ನಿರಾಕರಿಸುತ್ತಿರುವುದಾಗಿ ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ಕೆ. ಶ್ರೀಕಾಂತ್‌ ಅವರು ಇದೇ ವೇಳೆ ಅರೋಪಿಸಿದ್ದಾರೆ.

ಒಂದೇ ಜಿಲ್ಲೆಯ ಪಾಸ್‌ ಸಾಕು
ಯಾವ ಜಿಲ್ಲೆಗೆ ತೆರಳುತ್ತಾರೋ ಆ ಜಿಲ್ಲೆಯ ಆಡಳಿತದ ಅನುಮತಿ ಪಡೆದರೆ ಸಾಕು. ಕಾಸರಗೋಡಿನಿಂದ ದ.ಕ.ಕ್ಕೆ ಬಂದು ಕಾಸರಗೋಡಿಗೆ ವಾಪಸಾಗುವವರು ದ.ಕ.ಜಿಲ್ಲೆಯ ಹಾಗೂ ದ.ಕದಿಂದ ಕಾಸರಗೋಡಿಗೆ ತೆರಳಿ ದ.ಕ. ಜಿಲ್ಲೆಗೆ ವಾಪಸಾಗುವವರು ಕಾಸರಗೋಡು ಜಿಲ್ಲೆಯ ಆಡಳಿತದಿಂದ ಪಾಸ್‌ ಪಡೆದರೆ ಸಾಕು ಎಂದು ಎಸಿ ಮದನ್‌ ಮೋಹನ್‌ ತಿಳಿಸಿದ್ದಾರೆ.

ಟಾಪ್ ನ್ಯೂಸ್

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.