ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸದಸ್ಯರ ಸಭೆಯಲ್ಲಿ ಗದ್ದಲ
Team Udayavani, Sep 8, 2019, 7:59 PM IST
ಯಾದಗಿರಿ : ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸರ್ವ ಸದಸ್ಯರ ಮಹಾ ಸಭೆಯಲ್ಲಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ.
ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಎಸ್ ವಿ ಸಂಕನೂರ ಅಧ್ಯಕ್ಷತೆಯಲ್ಲಿ ನಡೆದ ಬೈಲಾ ಪರಿಷ್ಕರಣೆ ಉಪ ಸಮಿತಿ ಶಿಫಾರಸು ಚರ್ಚೆ ವೇಳೆ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ.
ಪರಿಷತ್ ಚುನಾವಣೆ ಅವಧಿ ಸದ್ಯ 3 ವರ್ಷಯಿದ್ದು ಅದನ್ನು 5 ವರ್ಷಕ್ಕೆ ನಿಗದಿಗೊಳಿಸುವುದು ಹಾಗೂ ಈವರೆಗೆ ಇರುವ ಪೋಸ್ಟಲ್ ಮತದಾನ ಪ್ರಕ್ರಿಯೆಗೆ ಬದಲಾಗಿ ಮತದಾನ ಕೇಂದ್ರ ಆರಂಭದ ಚರ್ಚೆ ವೇಳೆ ಗದ್ದಲ.ಕೈ ಕೈ ಮಿಲಾಯಿಸುವ ಮಟ್ಟಕ್ಕೆ ತಿರುಗಿದ ಪರಿಸ್ಥಿತಿ ಅಧ್ಯಕ್ಷರು ಮದ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ ಪ್ರಸಂಗ ನಡೆಯಿತು.