ದುರಸ್ತಿ ವಿಳಂಬ ಸಾರ್ವಜನಿಕರಿಗೆ ತೊಂದರೆ
ಕರ್ವಾಲು-ಪ್ರಗತಿನಗರ ರಸ್ತೆ
Team Udayavani, May 18, 2020, 5:45 AM IST
ಉಡುಪಿ: ಅಲೆವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರ್ವಾಲು ಪ್ರದೇಶದ ರಸ್ತೆ ಡಾಮರು ಕಿತ್ತು ಸದ್ಯ ಓಡಾಟಕ್ಕೆ ತೊಂದರೆಯಾಗಿದೆ. ಈ ಹಿಂದೆ 50 ಲಕ್ಷ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನಡೆದಿತ್ತು. ಆದರೆ ಕೋವಿಡ್-19ದಿಂದ ಕಾಮಗಾರಿ ಕೆಲಸಕ್ಕೆ ತೊಡಕುಂಟಾಗಿದೆ.
ಕರ್ವಾಲು- ಪ್ರಗತಿ ನಗರ ರಸ್ತೆ, ಕರ್ವಾಲು, ಮರ್ಣೆ, ಪೆರ್ಣಂಕಿಲ ಈ ಎಲ್ಲ ಭಾಗದಿಂದ ಮಣಿಪಾಲಕ್ಕೆ ಬರುವವರಿಗೆ ಹತ್ತಿರವಾದ ರಸ್ತೆಯಲ್ಲಿ ದಿನಂಪ್ರತಿ ಈ ಭಾಗದಿಂದ ನೂರಾರು ವಾಹನಗಳು ಓಡಾಡುತ್ತದೆ. ಆದರೆ ಕರ್ವಾಲು ಭಾಗದಲ್ಲಿ ರಸ್ತೆಯ ಡಾಮಾರು ಸಂಪೂರ್ಣ ಕಿತ್ತು ಹೋಗಿರುವುದು ದ್ವಿಚಕ್ರ ಸೇರಿದಂತೆ ಎಲ್ಲ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.
ಗಮನಕ್ಕೆ ತರಲಾಗಿದೆ
ಕರ್ವಾಲು ಭಾಗದಲ್ಲಿ ರಸ್ತೆಯ ಅಭಿವೃದ್ಧಿ ಅತ್ಯಗತ್ಯವಿದೆ. ಈಗಾಗಲೇ ಈ ಕಾಮಗಾರಿ ಮುಕ್ತಾಯ ಆಗಬೇಕಿತ್ತು ಲಾಕ್ಡೌನ್ ಹಿನ್ನಲೆಯಲ್ಲಿ ವಿಳಂಬವಾಗಿದೆ. ಪಿಡಬ್ಲೂಡಿ ಸಹಿತ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಇಲ್ಲಿ ಒಂದು ಭಾಗದಲ್ಲಿ ಹೆಚ್ಚು ಹಾನಿಯಾಗಿದ್ದು ಇದನ್ನು ಮಳೆಗಾಲ ಆರಂಭದ ಒಳಗೆ ಕಾಂಕ್ರೀಟಿಕರಣ ಮಾಡಲು ತಿಳಿಸಲಾಗಿದೆ.
-ಶ್ರೀಕಾಂತ್ ನಾಯಕ್, ಅಲೆವೂರು ಗ್ರಾ.ಪಂ. ಅಧ್ಯಕ್ಷರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಕೊಲೆಗಾಗಿಯೇ ಚಾಕು ಖರೀದಿಸಿದ್ದ ಫಯಾಜ್: ಮೂರೂವರೆ ತಾಸು ಸ್ಥಳ ಮಹಜರು ಮಾಡಿದ ಸಿಐಡಿ ತಂಡ
Congress ಅಭ್ಯರ್ಥಿ ಡಿ.ಕೆ. ಸುರೇಶ್ 6 ಮಂದಿ ಆಪ್ತರ ಮನೆ ಮೇಲೆ ಐಟಿ ದಾಳಿ
Congress ವಿರುದ್ಧ ಬಿಜೆಪಿ ಕ್ಯೂಆರ್ ಕೋಡ್ ಸಮರ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ